ಹಸಿರು ಕ್ರಾಂತಿ ವರದಿ ಕುಂದಗೋಳ
ಬೀದಿ ನಾಟಕದ ಮೂಲಕ ಜನಜಾಗೃತಿಗೊಳಿಸಿ ಆ ಮೂಲಕ ಸಾಮಾಜಿಕ ಮಾಧ್ಯಮವಾಗಿದ್ದು, ಜನರ ಮನ ಮುಟ್ಟವಂತೆ ಮಾಡುತ್ತಿರುವ ಇಂಥಹ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ ಎಂದು ಸಮಾಜ ಸೇವಕ ಜಾಫರ್ ಅತ್ತಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಗೋಳ ತಾಲೂಕು ವಲಯದಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಹರಲಾಪೂರದ ಸಿವೈಸಿಡಿ ಕಲಾತಂಡದಿಂದ ಜರುಗಿದ ಬೀದಿನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗೆ ಸಾಲ ಕೊಡುವ ಕೆಲಸ ಅಷ್ಟೇ ಅಲ್ಲ, ಅವರ ಜ್ಞಾನವನ್ನು ವಿಕಾಸಗೊಳಿಸುತ್ತದೆ ಎಂದರು.
ಬೀದಿನಾಟಕ ನಡೆಸಿಕೊಟ್ಟ ಕಲಾತಂಡವು ಮಕ್ಕಳ ಶಿಕ್ಷಣ, ಬಾಲ್ಯ ವಿವಾಹ, ಶೌಚಾಲಯ, ರೈತನ ಮಹತ್ವ, ಸ್ವ-ಉದ್ಯೋಗ, ನೀರಿನ ಮಹತ್ವ, ಮೊಬೈಲ್ ಬಳಕೆ ಅನಾಹುತ, ಲಿಂಗತಾರತಮ್ಯ, ತಂದೆ-ತಾಯಿ ಮಹತ್ವ,ವಾತ್ಸಲ್ಯ ಯೋಜನೆ ಸಹಿತ ಇನ್ನಿತರ ಹಲವಾರು ರೀತಿಯ ವಿಷಯವನ್ನು ನೆರೆದ ನೂರಾರು ಜನರಿಗೆ ಮನಮುಟ್ಟುವಂತೆ ಅಭಿನಯಿಸಿ ತೋರಿಸಿದರು.
ಮಹಿಳಾ ಒಕ್ಕೂಟದ ಅಧ್ಯಕ್ಷೆ ಫಾತಿಮಾ ಬೇಗಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಾನಪದ ಹಿರಿಯ ಕಲಾವಿದರಾದ ಎಸ್.ಎಸ್.ಹಿರೇಮಠ, ಶರೀಫ ದೊಡಮನಿ, ನಾಗರಾಜ್ ಗೌಡಣ್ಣವರ, ಈಶ್ವರ ಅರಳಿ, ಮಲ್ಲಪ್ಪ ಮುಳಗುಂದ, ವಸಂತ ಡೊಂಕನವರ, ನಿಂಗಪ್ಪ ಅವಾರಿ, ಗಂಗಮ್ಮ ಪತ್ರಕರ್ತ ಮಂಜುನಾಥ ಸಿಂಗಣ್ಣ, ವಲಯ ಮೇಲ್ವಿಚಾರಕರಾದ ವಿಜಯಾ ಸೇವಾ ಪ್ರತಿನಿಧಿಗಳಾದ ಗೀತಾ, ರೇಷ್ಮಾ ದೀಪಾ, ಭಾವನಾ, ಲಕ್ಷ್ಮೀ ಮಾಬೂಬಿ, ಮತ್ತು ಬಸವೇಶ್ವರ ದೇವಸ್ಥಾನ ಸಮಿತಿಯವರು ಉಪಸ್ಥಿತರಿದ್ದರು.
ಬೀದಿನಾಟಕವು ಒಂದು ಸಾಮಾಜಿಕ ಜಾಗೃತಿ ಮಾಧ್ಯಮವಾಗಿದೆ. ಕುಂದಗೋಳ ತಾಲೂಕಿನ ಸಿವೈಸಿಡಿ ಕಲಾತಂಡವು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜೊತೆಗೆ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದೆ. ಅವರ ಸೇವೆ ಸಾರ್ಥಕ.
-ಜಾಫರ್ ಅತ್ತಾರ, ಸಮಾಜ ಸೇವಕರು .
