ಯರಗಟ್ಟಿ: ತಾಲೂಕಿನ ಸೊಪ್ಪಡ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ ???ಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಕಾಂಟೂರ್ ಟ್ರೆಂಚ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕೂಲಿ ಕಾರ್ಮಿಕರಿಗೆ ವಿಬಿಜಿ ರಾಮ್ ಜಿ ಯೋಜನೆ ಹಾಗೂ ಜಾಬ್ ಕಾರ್ಡ್ ಮೇಳದ ಕುರಿತು ಜನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಅಭಿಯಾನ ಉದ್ದೇಶಿಸಿ ತಾಲೂಕು ಐಇಸಿ ಸಂಯೋಜಕ ಮಲೀಕಜಾನ ಮೋಮಿನ ಮಾತನಾಡಿ ಕೂಲಿಕಾರರಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ ???ಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯ ಉದ್ದೇಶ ಹಾಗೂ ಉಪಯೋಗ ಬಗ್ಗೆ ತಿಳಿಸಿದರು. ಕೂಲಿ ಮೊತ್ತ ೩೭೦ ರಿಂದ ೩೮೨ ರೂ. ಗೆ ಹೆಚ್ಚಿಸಿದ್ದು, ವಾರ್ಷಿಕ ಮಾನವ ದಿನಗಳು ೧೦೦ ರಿಂದ ೧೨೫ಗಳಿಗೆ ಹೆಚ್ಚಳವಾಗಿದ್ದು, ಇದರಿಂದ ವಾರ್ಷಿಕ ೪೭೭೫೦ ರೂಪಾಯಿವರೆಗೆ ಕೂಲಿ ಮೊತ್ತ ಬರುತ್ತದೆ ಆದ್ದರಿಂದ ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿ ಸೆಪ್ಟೆಂಬರ್ ೧೫ ರವರೆಗೆ ಜಾಬ್ ಕಾರ್ಡ್ ಮೇಳ ಆರಂಭವಾಗಿದ್ದು, ಹೊಸ ಉದ್ಯೋಗ ಚೀಟಿ ಹಾಗೂ ಕುಟುಂಬ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸಲು ತಿಳಿಸಿದರು.
ಬಳಿಕ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳಾದ ವ್ಹಿ. ಎಸ್. ಮುಲ್ಲಾ ಮಾತನಾಡಿ ನೂತನ ಯೋಜನೆಯಡಿ ೩೧೮ ಕಾಮಗಾರಿಗಳು ಮಾಡಲು ಅವಕಾಶವಿದ್ದು, ವಿಬಿ-ಜಿ ರಾಮ್ ಜಿ ಯೋಜನೆಯಡಿ ವಯಕ್ತಿಕ ಕಾಮಗಾರಿಗಳು, ಸಮುದಾಯ ಕಾಮಗಾರಿಗಳು, ದಿನದ ಕೂಲಿ ಮೊತ್ತ, ಹಾಜರಾತಿ ಕ್ರಮ, ಕೆಲಸದ ಅವಧಿ, ರೋಜಗಾರ್ ಗ್ಯಾರಂಟಿ ಕಾ??೯, ಕೂಲಿ ಪಾವತಿ ಕ್ರಮ ಸೇರಿದಂತೆ ವಿವಿಧ ವಿಷಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಕಾರ್ಯದರ್ಶಿ ಎಮ್. ಬಿ. ಕುರಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಲ್. ಯು. ಮಾದರ, ತಾಂತ್ರಿಕ ಸಹಾಯಕ ಈರಣ್ಣ ಕಂಬಾರ, ಬಿ.ಎಫ್.ಟಿ ಸಂಗಮೇಶ ಬೆಳ್ಳಿವರಿ ಗ್ರಾಮ ಸಿಬ್ಬಂದಿಗಳು, ಗ್ರಾಮಸ್ಥರು, ಕೂಲಿಕಾರರು, ಇನ್ನಿತರರು ಉಪಸ್ಥಿತರಿದ್ದರು.