LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಸಂಡೂರು ಅರಣ್ಯ ಪ್ರದೇಶದಲ್ಲಿ ಹೊಸ ಗಣಿಗಾರಿಕೆಗೆ ವಿರೋಧಿಸಿ ಪ್ರತಿಭಟನೆ

ಬಳ್ಳಾರಿ:ಜು,30: ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಪರವಾನಿಗೆ ನೀಡದಂತೆ ಆಗ್ರಹಿಸಿ ಇಂದು ನಗರದಲ್ಲಿ ಜನಸಂಗ್ರಾಮ ಪರಿಷತ್ ಮತ್ತಿತರೆ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಕಳಿಸಲಾಯಿತು.


ನಗರದ ಇಂದಿರಾ ಸರ್ಕಲ್ ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ. ಕೆ.ಸಿ.ರಸ್ತೆ. ಮೀನಾಕ್ಷಿ ಸರ್ಕಲ್, ಗಡಗಿ ಚೆನ್ನಪ್ಪ ವೃತ್ತಕೆ ಆಗಮಿಸಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರ ಹೊಸ ಗಣಿಗಾರಿಕೆ ಬಗ್ಗೆ ಹೊಂದಿರುವ ಧೋರಣೆಯನ್ನು ಖಂಡಿಸಿ ಘೋಷಣೆ ಕೂಗಿದರು . ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ಡಿಸಿ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದರು.


ಈ ವೇಳೆ ಮಾತನಾಡಿದ ಮುಖಂಡರು.  ಅವ್ಯಾಹಿತ ಅವೈಜ್ಞಾನಿಕ ಅಕ್ರಮಗಣಿಗಾರಿಕೆಯಿಂದ ಸಂಡೂರು ಭಾಗದಲ್ಲಿ ಪರಿಸರ, ವನ್ಯಜಿವಿ,ಅರಣ್ಯ ನಾಶ ಸೇರಿದಂತೆ ಇಡೀ ತಾಲೂಕಿನ ಜನರ ಬದುಕಿನ ಮೇಲೆ ಮತ್ತು ಆರೋಗ್ಯ, ಶಿಕ್ಷಣ, ಸಾರಿಗೆ, ರಸ್ತೆ ಸೇರಿದಂತೆ ಎಲ್ಲಾ ವಲಯಗಳ ಮೇಲೆ ಗಂಭೀರವಾದ ಪರಿಣಾವನ್ನುಂಟು ಮಾಡಿದೆ. ನಂತರ ಸುಪ್ರಿಂಕೋರ್ಟನ ಅಕ್ರಮಗಳಿಗೆ ಕಡಿವಾಣ ಹಾಕಿದ್ದರಿಂದ ನಿಗಮದಿಂದ ಈಗಾಗಲೆ ಗಣಿಭಾದಿತ ಪ್ರದೇಶ ಅರಣ್ಯ ಪುನಶ್ಚೇತನ ಕಾರ್ಯವು ಸೇರಿದಂತೆ ಗಣಿಗಾರಿಕೆಯಿಂದ ಭಾದಿತವಾಗಿರುವ ಹಳ್ಳಿಗಳ ಜನರಜೀವನ, ಕೃಷಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೀರಾವರಿ ಯೋಜನೆಗಳು ಸೇರಿದಂತೆ ಗಣಿ ಭಾದಿತ ಪ್ರದೇಶದ ಪುನಶ್ಚೇತನಗೊಳಿಸಲು ಯುದ್ದೋಪಾದಿಯಲ್ಲಿ ಇಡೀ ಆಡಳಿತ ಮಂಡಳಿಯು ಕಾರ್ಯೋನ್ಮುಖರಾಗಿರುತ್ತದೆ.


ಬಳ್ಳಾರಿ ಜಿಲ್ಲೆಯಿಂದ ದೇಶದ ಕಾರ್ಖಾನೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಅದಿರನ್ನು ಹೊರ ತೆಗೆಯಲಾಗುತ್ತಿದೆ, ಸಂಡೂರಿನ ಅರಣ್ಯ ಪ್ರದೇಶದ ಭಾಗವೊಂದರಿಂದಲೆ ಮಿತಿಮೀರಿದ ಪ್ರಮಾಣದ ಅದಿರು ಉತ್ವಾದನೆ. ಸಾಗಾಣೆ ನಡೆಯುತ್ತಿದೆ ಇದರಿಂದಲೂ ಪರಿಸರಕ್ಕೆ ಸಾಕಷ್ಟು ಧಕ್ಕೆ ಆಗುತ್ತಿದೆ. ಹೀಗಿರುವಾಗ ಮತ್ತೆ ಕೇಂದ್ರ ಸರ್ಕಾರಿ ಸೌಮ್ಯದ ಕುದುರೆಮುಖ  ಪನಿಗೆ ಸಂಡೂರಿನ ದಕ್ಷಿಣ ವಲಯದ ದೇವದಾರಿ ಬ್ಲಾಕ್ನಲ್ಲಿ ನೈಸರ್ಗಿಕವಾಗಿ ಬೆಳೆದ ಕಾಡಿನಲ್ಲಿ ೪೦೦ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅರಣ್ಯ ಇಲಾಖೆಯ ಆಕ್ಷೇಪಣೆಗೆ ವಿರುದ್ದವಾಗಿ ೧ ಲಕ್ಷ ಮರಗಳನ್ನು ಕಡಿದು ಗಣಿಗಾರಿಕೆಗೆ ನೀಡಲು ಸಿದ್ದತೆ ನಡೆಸಿದೆ.


ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಅದಿರು ಉತ್ವಾದನೆ ಮಿತಿಯನ್ನು ನಿಗದಿಗೊಳಿಸುವ ಪ್ರಕ್ರಿಯೆಯು ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಹೊಸಅರಣ್ಯ ಪ್ರದೇಶದಲ್ಲಿ ಅದಿರು ಶೋಧನೆ ನಡೆಸುವುದಾಗಲಿ ಅಥವ ಗಣಿಗಾರಿಕೆಗೆ ಅವಕಾಶ ನೀಡುವುದಕ್ಕೆ ಅವಕಾಶ ಮಾಡಬಾರದೆಂದು ಆಗ್ರಹಿಸಿದರು.


ಪ್ರತಿಭಟನೆಯಲ್ಲಿ ಮುಖಂಡರುಗಳಾದ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಆರ್ ಮಾಧವರೆಡ್ಡಿ ಕರೂರು, ಟಿ.ಎಂ.ಶಿವಕುಮಾರ್    ಶ್ರೀಶೈಲ ಆಲದಳ್ಳಿ ಖಾಜಅಸ್ಲಂ, ಸೈಯ್ಯದ್ ಹೈದರ್, ನಾಗರಾಜ್ ಜಿ.ಕೆ. ಲೇಪಾಕ್ಷಿ ಅಸುಂಡಿ, ತಿಮ್ಮನಗೌಡ, ದೊಡ್ಡ ತಿಪ್ಪಣ್ಣ, ಎಱ್ರಿಸ್ವಾಮಿ, ಗೋವಿಂದ, ಸೋಮಶೇಖರ್ ಗೌಡ  ಮೊದಲಾದವರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್