LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ನಾಡಗೌಡರಿಗೆ ಸಚಿವ ಸ್ಥಾನಕ್ಕೆ ಆಗ್ರಹ: ನಾಡಿದ್ದು ಮುದ್ದೇಬಿಹಾಳ ಬಂದ್‌

ಹಸಿರ ಕ್ರಾಂತಿ ವರದಿ ಮುದ್ದೇಬಿಹಾಳ

ಮುದ್ದೇಬಿಹಾಳ ಮತಕ್ಷೇತ್ರದ ಶಾಸಕಾದ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರನ್ನು ಈ ಬಾರಿ 2ನೇ ಅವಧಿಯ ಸರ್ಕಾರ ರಚನೆಯ ಮಂತ್ರಿಮಂಡದಲ್ಲಿ ಕ್ಯಾಬಿನೇಟ್‌ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಜೂ.19 ರಂದು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಮುದ್ದೇಬಿಹಾಳ ಬಂದ್‌ ಕರೆ ನೀಡಲಾಗಿದೆ. ಪಟ್ಟಣದ ಎಲ್ಲ ಸಂಘ-ಸಂಸ್ಥೆಯ ಮುಖ್ಯಸ್ಥರು, ಕಾರ್ಯಕರ್ತರು, ಸಾಹಿತಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ ಮನವಿ ಮಾಡಿದರು.

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಗೃಹಕಚೇರಿಯಲ್ಲಿ ಮಂಗಳವಾರ ನಡೆದ ವಿವಿಧ ಸಂಘ- ಸಂಸ್ಥೆಗಳ ಹಾಗೂ ವಿವಿಧ ವ್ಯಾಪಾರಸ್ಥರ, ಗಣ್ಯರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ಸಿ.ಎಸ್.ನಾಡಗೌಡರು ಕಳೆದ 45 ವರ್ಷಗಳ ಸುದೀರ್ಘ ಪಕ್ಷ ನಿಷ್ಟರಾಗಿ 6 ಬಾರಿ ಶಾಸಕರಾಗಿ ಶರಣತ್ವ ಸಿದ್ಧಾಂತದಲ್ಲಿ ಉತ್ತಮ ಸನ್ನಡತೆ ಹೊಂದಿದ ಹಿರಿಯರಾಜಕಾರಣಿಯಾಗಿ ಬೆಳೆದು ಬಂದವರು. ಕಾಂಗ್ರೆಸ್‌ ಸರ್ಕಾರದ ರಚನೆಯಲ್ಲಿ ಪ್ರತಿ ಬಾರಿಯೂ ಹಿರಿಯರ ಸಾಲಿನ ಸಚಿವ ಸ್ಥಾನದಲ್ಲಿ ಅಪ್ಪಾಜಿ ನಾಡಗೌಡರ ಹೆಸರು ಮುಂಚುಣಿಗೆ ಬರುತ್ತದೆ. ಇನ್ನೇನು ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿಯಿಂದ ಕೈಬಿಟ್ಟು ಬೇರೆಯವರನ್ನು ಆಯ್ಕೆ ಮಾಡುತ್ತಲೇ ಅಪಮಾನಿಸಲಾಗುತ್ತಿದೆ. ಅದರಂತೆ ಕಳೆದ 2023ರ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಕೂಡ ನಾಡಗೌಡರನ್ನು ಮಂತ್ರಿಯನ್ನಾಗಿ ಮಾಡದೇ ಅಪಮಾನಿಸಲಾಯಿತು. ಇದು ಬರಿ ಶಾಸಕ ಅಪ್ಪಾಜಿ ನಾಡಗೌಡರಿಗೆ ಅಪಮಾನವಲ್ಲ, ಈಡಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ, ಜನತೆಗೆ ಅಪಮಾನಿಸಿದಂತಾಗಿದೆ ಎಂದು ಕಿಡಿಕಾರಿದರು.

ಬೀಜ ಹಾಗೂ ರಸಗೊಬ್ಬರ ಅಗ್ರೋ ಫರ್ಟಿಲೈಜರ್ ಸಂಘದ ತಾಲೂಕಾಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ಅಪ್ಪಾಜಿ ನಾಡಗೌಡರು ಒಬ್ಬ ಸಭ್ಯಸ್ಥ ತಮ್ಮ ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕೆಯಿಲ್ಲದೇ ಮಾದರಿಯಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡವರು. ಇವರನ್ನು ಪಕ್ಷಯಾವಾಗಲೋ ಗುರ್ತಿಸಬೇಕಾಗಿತ್ತು. ಇವರ ಸೌಮ್ಯ ಸ್ವಭಾವಕ್ಕೋ ಅಥವಾ ಪಕ್ಷ ನಿಷ್ಠೆ ತೊರಿದ್ದಕ್ಕೋ ಇವರನ್ನು ಸ್ಥಾನ, ಮಾನ ನೀಡುವಲ್ಲಿ ಹಿಂದೇಟು ಹಾಕುತ್ತಿದೆಯೋ ಏನೋ ಗೊತ್ತಿಲ್ಲ. ಕಾಂಗ್ರೆಸ್ ವರಿಷ್ಠರು ಈ ಬಾರಿ ಅಪ್ಪಾಜಿ ನಾಡಗೌಡರನ್ನು ಸಚಿವ ಸ್ಥಾನ ನೀಡಿ ಗೌರವಿಸಲೇ ಬೇಕು ಎಂದು ಆಗ್ರಹಿಸಿದರು.

ಎಪಿಎಂಸಿ ಸಿ.ಎಲ್.ಬಿರಾದಾರ ಹಾಗೂ ಬಿ.ಪಿ.ಮೂರಾಳ ಮಾತನಾಡಿ, ಸೌಮ್ಯರಾಜಕಾರಣಿ ಶಾಸಕ ಅಪ್ಪಾಜಿ ನಾಡಗೌಡ ಅವರನ್ನು ಈ ಬಾರಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ಎಲ್ಲ ಮುಖಂಡರು ನಡೆಸುತ್ತಿರುವ ಮುದ್ದೇಬಿಹಾಳ ಬಂದ್‌ ಕರೆ ಹಾಗೂ ಪ್ರತಿಭಟನೆ ಮುದ್ದೇಬಿಹಾಳ ಎಪಿಎಂಸಿ ವರ್ತಕರ ಸಂಘವೂ ಸಂಪೂರ್ಣ ಬೆಂಬಲವಿದೆ ಎಂದರು.

ಈ ವೇಳೆ ಪಟ್ಟಣದ ಗಣ್ಯ ವ್ಯಾಪಾರಸ್ಥರಾದ ರಮೇಶ ಓಸ್ವಾಲ್‌, ಎಂ.ಬಿ.ನಾವದಗಿ, ಗಫೂರಸಾಬ್‌ ಮಕಾಂದಾರ, ಬಿ.ಕೆ.ಬಿರಾದಾರ, ಎಚ್.ಟಿ.ಬಿರಾದಾರ, ಪ್ರಭುರಾಜ ಕಲಬುರ್ಗಿ, ಅಮರೇಶ ಗೂಳಿ, ಸಂಗಣ್ಣ ಮೇಲಿಮನಮನಿ, ಸದು ಮಠ, ಗಣೇಶ ಅನ್ನಗೋನಿ, ಬಾಪುಗೌಡ ಪಿರಾಪೂರ, ಸುರೇಶ ಪಾಟೀಲ, ಸಂಗನಗೌಡ ಪಾಟೀಲ, ತಿಪ್ಪಣ್ಣ ದೊಡಮನಿ, ನೇತಾಜಿ ನಲವಡೆ, ರವಿ ಗೂಳಿ, ವಿರುಪಾಕ್ಷಿ ಪತ್ತಾರ, ಜಗದೀಶ ಕಂಠಿ, ಅಪ್ಪು ದೇಗಿನಾಳ, ಸಂಗನಗೌಡ ಬಿರಾದಾರ(ಜಿಟಿಸಿ), ಸಿಕಂದರ ಜಾನ್ವೇಕರ, ಪಿಂಟು ಸಾಲಿಮನಿ, ವೈ.ಎಚ್.ವಿಜಯಕರ, ಲಕ್ಷ್ಮಣ ಲಮಾಣಿ, ಹಣಮಂತ ಕುರಿ, ಬಸವರಾಜ ಚಿನಿವಾರ, ಅಶೋಕ ಚೇಟ್ಟೆರ, ವೆಂಕನಗೌಡ ಪಾಟೀಲ, ಅಕ್ಷತಾ ಚಲವಾದಿ, ಸರಸ್ವತಿ ಪಿರಾಪೂರ, ಸುಜಾತಾ ಶಿಂಧೆ, ನೀಲಮ್ಮ ಚಲವಾದಿ, ಮಾಬೂಬಿ ಬಾಗವಾನ ಸೇರಿದಂತೆ ಹಲವರು ಇದ್ದರು.

2ನೇ ಅವಧಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಕೇಂದ್ರದ ಹಾಗೂ ರಾಜ್ಯದ ವರಿಷ್ಠರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಅಪ್ಪಾಜಿ ನಾಡಗೌಡರನ್ನು ಉತ್ತಮ ದರ್ಜೆಯ ಸಚಿವಸ್ಥಾನ ನೀಡಿ ಗೌರವಿಸಬೇಕು. ಇಲ್ಲವಾದರೇ ಮತಕ್ಷೇತ್ರದ ಎಲ್ಲ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾಮೂಹಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂಬುವುದು ಹಕ್ಕೋತ್ತಯದ ಮೂಲಕ ಒಂದು ದಿನದ ಸಾಂಕೇತಿಕ ಮುದ್ದೇಬಿಹಾಳ ಬಂದ್‌ ಕರೆ ನೀಡುವುದರ ಜತೆಗೆ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಗುವುದು.

-ಅಧ್ಯಕ್ಷ ಗುರು ತಾರನಾಳ, ತಾಲೂಕು ಬ್ಲಾಕ್‌ ಕಾಂಗ್ರೆಸ್‌.

 

ಮತಕ್ಷೇತ್ರದ ಎಲ್ಲ ಜನರ ಪರವಾಗಿ ಅಪ್ಪಾಜಿ ನಾಡಗೌಡರಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸುತ್ತೇನೆ. ಈ ನಿಟ್ಟಿನಲ್ಲಿ ಶುಕ್ರವಾರ ಹಮ್ಮಿಕೊಂಡಿರುವ ಮುದ್ದೇಬಿಹಾಳ ಬಂದ್‌ ಕರೆ ಹಾಗೂ ಪ್ರತಿಭಟನೆಗೆ ತಾಲೂಕಿನ ಎಲ್ಲ ಬೀಜ ಹಾಗೂ ರಸಗೊಬ್ಬರ, ಅಗ್ರೋ ಫರ್ಟಿಲೈಜರ್ ಸಂಘವು ಸಂಪೂರ್ಣ ಬೆಂಬಲಿಸಬೇಕು.

-ಶಿವಶಂಕರಗೌಡ ಹಿರೇಗೌಡರ, ಅಧ್ಯಕ್ಷರು, ಬೀಜ ಹಾಗೂ ರಸಗೊಬ್ಬರ ಅಗ್ರೋ ಫರ್ಟಿಲೈಜರ್ ಸಂಘ ಮುದ್ದೇಬಿಹಾಳ 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್