ಲಕ್ಷ್ಮೀದೇವಿ ಜಾತ್ರೆ ಹನುಮಾನ ಓಕುಳಿ ನಡೆಯಿತು
ಮುಗಳಖೋಡ,19 :ಮುಗಳಖೋಡ ಪಟ್ಟಣ ಹಾಗೂ ಖಣದಾಳ ಸೀಮೆಯಲ್ಲಿರುವ ಲಕ್ಷ್ಮೀದೇವಿ ಹನುಮಾನ ಮಂದಿರದಲ್ಲಿ ಪ್ರತಿ ವರ್ಷ ಆಚರಿಸುವು ಉಭಯ ದೇವತೆಗಳ ಜಾತ್ರಾಮಹೋತ್ಸವ ನಿಮಿತ್ಯ ಸೋಮವಾರ 18 ರಂದು ಬೆಳಿಗ್ಗೆ ಲಕ್ಷ್ಮೀ ಹಾಗೂ ಆಂಜನೇಯ ಸ್ವಾಮಿಗೆ ಅಭಿಷೇಕ ವಿಶೇಷ ಪೂಜೆ ನೈವೇದ್ಯ ಅರ್ಪಿಸಿ ಕಪರಟ್ಟಿಯ ಅಮೋಘಸಿದ್ದೇಶ್ವರ ಹಾಗೂ ಬರಗಿಯ ಲಕ್ಷ್ಮೀದೇವಿ ಡೊಳ್ಳಿನ ಗಾಯನ ಸಂಘದವರಿಂದ ಹರದೇಶಿ ,ನಾಗೇಶಿ ಡೊಳ್ಳಿನ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಂತರ ಅನ್ನ ಪ್ರಸಾದ ಸಾಯಂಕಾಲ 6 ಗಂಟೆಗೆ ಗುಡುಗು ಸಿಡಿಲಿನ ಅಬ್ಬರದಲ್ಲಿ ತುಂತುರು ವರುಣನ ಆಗಮನದಲ್ಲಿ ಕೊಂಡ ಪೂಜೆಯೊಂದಿಗೆ ಯುವಕರು ನೀರು ಚುಮ್ಮುತ್ತಾ ವಿಜೃಂಭಣೆಯಿಂದ ಓಕಳಿ ಆಚರಿಸಲಾಯಿತು. ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಭೀರಪ್ಪ ರಾಮಪ್ಪ ಶೇಗುಣಸಿ ಹಾಗೂ ಸಕಲ ಸದ್ಭಕ್ತರು ತನು ಮನ ಧನದಿಂದ ಭಾಗವಹಿಸಿ ಸೇವೆ ಸಲ್ಲಿಸಿ ವೈಭವದಿಂದ ಕಾರ್ಯಕ್ರಮ ಯಶಸ್ವಿಗೋಳಿಸಿ ಸಂಭ್ರಮಿಸಿದರು .
