Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಾಲುಕಿನ 89 ಶಾಲೆಗಳಲ್ಲಿ ಪೂರ್ವಪ್ರಾಥಮಿಕ ಶಾಲೆ ಪ್ರಾರಂಭ - ಬಿಇಓ

ಜಮಖಂಡಿ;ತಾಲುಕಿನಾದ್ಯಂತ 89 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ (ಪೂರ್ವ ಪ್ರಾಥಮಿಕ) ಶಾಲೆಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಅಂದರೆ ಜೂನ್‌2026 ರಿಂದ ಪ್ರಾರಂಭಿಸಲಾಗುವದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ತಿಳಿಸಿದ್ದಾರೆ. ಬಡ ಮಕ್ಕಳು ಶಿಕ್ಷಣ ದಿಂದ ವಂಚಿತ ವಾಗಬಾರದು ಹಾಗೂ ಖಾಸಗಿ ಶಾಲೆಗಳ ದುಬಾರಿ ಶುಲ್ಕಭರಿಸಲು ಸಾಧ್ಯವಾಗದ ಪಾಲಕರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಯೋಜನೆ ಜಾರಿಗೊಳಿಸಿದೆ. ತಾಲುಕಿನಲ್ಲಿ ಕಳೆದ 2 ವರ್ಷಗಳಿಂದ ಎಸ್‌ಡಿಎಂಸಿ ಹಾಗೂ ಸಾರ್ವಜನಿಕರ ಸಹಕಾರ ದಿಂದ 23 ಶಾಲೆಗಳಲ್ಲಿ ಪೂರ್ವಪ್ರಾಥಮಿಕ ತರಗತಿಗಳು ಪ್ರಾರಂಭವಾಗಿವೆ. (ಪಿಎಬಿ) ಯೋಜನಾ ಅನುಮೋದನೆ ಮಂಡಲಿ 60;40 ಅನುಪಾತದಲ್ಲಿ 30 ಶಾಲೆಗಳು, ಪಿಎಂಶ್ರೀ ಯೋಜನೆ ಅಡಿಯಲ್ಲಿ 5, ಕರ್ನಾಟಕ ಪಬ್ಲಿಕ್‌ ಸ್ಕೂಲ್‌ 2, ರಾಜ್ಯ ವಲಯದಿಂದ 29 ಹೀಗೆ ಒಟ್ಟು 66 ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಗಳು ಪ್ರಾರಂಭ ವಾಗಲಿವೆ. 3ವರ್ಷ 10 ತಿಂಗಳ ಮಕ್ಕಳು ಎಲ್‌ಕೆಜಿ ಹಾಗೂ 4 ವರ್ಷ 10 ತಿಂಗಳ ವಯೋಮಿತಿಯ ಮಕ್ಕಳು ಯುಕೆಜಿಗೆ ಅರ್ಹರಾಗಿರುತ್ತಾರೆ. ಅಲ್ಲದೇ 5 ವರ್ಷ 10 ತಿಂಗಳು ವಯಸ್ಸಿನ ಮಕ್ಕಳು 1 ನೆ ತರತಿಗೆ ಪ್ರವೇಶ ಪಡೆಯಬಹುದಾಗಿದೆ. ಈಗಾಗಲೇ ಸರ್ಕಾರದ ಆದೇಶದ ಆನ್ವಯ ಶಿಕ್ಷಕರ ನೇಮಕಾತಿ, ಆಯಾಗಳ ನೇಮಕಾತಿ, ಚಿಕ್ಕ ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಶಾಲಾ ಕೊಠಡಿಗಳ ನವೀಕರಣ, ಮಕ್ಕಳಿಗೆ ಕಲಿಕಾ ಸಾಮಗ್ರಿ, ಆಟಿಕೆಗಳನ್ನು ವಿತರಿಸಲಾಗಿದೆ. ಇನ್ನೂ ಕೆಲ ಶಾಲೆಗಳಿಗೆ ಅನುದಾನ ಬಂದ ನಂತರ ಸಿದ್ಧತೆ ಮಾಡಿಕೊಳ್ಳ ಲಾಗುತ್ತದೆ ಎಂದು ವಿವರಿಸಿದರು.

ಮನವಿ;

ಸರ್ಕಾರ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಆಯ್ದ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದು ತಾಲುಕಿನ 66 ಶಾಲೆಗಳು ಹಾಗೂ ಈಗಾಗಲೇ ಪ್ರಾರಂಭ ದಲ್ಲಿರುವ 23 ಶಾಲೆಗಳು ಸೇರಿ 89 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಅಂದರೆ ಎಲ್‌ಕೆಜಿ-ಯುಕೆಜಿ ತರಗತಿಗಳು ಪ್ರಾರಂಭ ವಾಗಲಿದ್ದು ಪಾಲಕರು ತಮ್ಮ ಮಕ್ಕಳನ್ನು ಹತ್ತಿರದ ಶಾಲೆಗಳಿಗೆ ಸೇರಿಸಬೇಕು ಮಕ್ಕಳಿಗೆ ಬಿಸಿ ಊಟದ ಜತೆಗೆ ಕಲಿ-ನಲಿ ಮಾದರಿಯಲ್ಲಿ ಆಟದ ಜೊತೆಗೆ ಪಾಠಗಳನ್ನು ಹೇಳಿ ಕೊಡಲಾಗುತ್ತದೆ. ಇದರಿಂಧ ಮಕ್ಕಳ ಭವಿಷ್ಯದ ಶಿಕ್ಷಣಕ್ಕೆ ಅನುಕೂಲ ವಾಗಲಿದ್ದು ಸರ್ಕಾರದ ಯೋಜನೆಯನ್ನು ಪಾಲಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಬಿಇಓ ಅಶೋಕ ಬಸಣ್ಣವರ ಮನವಿ ಮಾಡಿದ್ದಾರೆ.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST