ಮೂಡಲಗಿ: ಲಯನ್ಸ ಕ್ಲಬ್ ಮೂಡಲಗಿ ಪರಿವಾರದ ೨೦೨೬-೨೭ನೇ ಸಾಲಿಗೆ ಅಧ್ಯಕ್ಷರಾಗಿ ಸುರೇಶ ದೇಸಾಯಿ ಅವರು ಆಯ್ಕೆಯಾಗಿರುವರು. ಕಾರ್ಯದರ್ಶಿಯಾಗಿ ಕೃಷ್ಣಾ ಕೆಂಪಸತ್ತಿ ಹಾಗೂ ಖಜಾಂಚಿಯಾಗಿ ಡಾ. ಯಲ್ಲಾಲಿಂಗ ಮುಳವಾಡ ಅವರು ಆಯ್ಕೆಯಾಗಿರುವರು.
ಪದಗ್ರಹಣ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ೨೦೨೬-೨೭ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ ೧೧ರಂದು ಸಂಜೆ ೫ಕ್ಕೆ ಶಾರದಾ ಪಂಕ್ಷಣ ಹಾಲ್ದಲ್ಲಿ ಜರುಗಲಿದೆ.
ಪದಗ್ರಹಣ ಅಧಿಕಾರಿಯಾಗಿ ಬೆಳಗಾವಿಯ ಭಾರತಿ ಉದಯ ವಡವಿ ಅವರು ಭಾಗವಹಿಸುವರು. ಮುಖ್ಯ ಅತಿಥಿಯಾಗಿ ಜಿಲ್ಲಾ ಲಯನ್ಸ್ ೩೧೭ ‘ಬಿ’ಯ ಪ್ರಾಂತೀಯ ಅಧ್ಯಕ್ಷ ಬಾಲಶೇಖರ ಬಂದಿ ಭಾಗವಹಿಸುವರು. ಕಳೆದ ವರ್ಷದಲ್ಲಿ ಲಯನ್ಸ್ ಕ್ಲಬ್ದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಅನ್ನದಾಸೋಹದ ಪ್ರಾಯೋಜಕರಿಗೆ ಹಾಗೂ ಉತ್ತಮ ಸಮಾಜ ಸೇವೆ ಮಾಡಿರುವ ವ್ಯಕ್ತಿಗಳಿಗೆ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಸನ್ಮಾನ ಇರುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾರಂಭದ ಪೂರ್ವದಲ್ಲಿ ಪದಗ್ರಹಣ ದ್ಯೋತಕವಾಗಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಗುವುದು ಎಂದು ತಿಳಿಸಿದ್ದಾರೆ.
