ಇಂಡಿ,ಚಿ,೧೯ : ಮೊಬೈಲ್ ಬಳಕೆ ಹೆಚ್ಚಾದಂತೆ ಮನುಷ್ಯರ ನಡುವಿನ ಆತ್ಮೀಯತೆ ಹಾಗೂ ಮಾನವೀಯ ಸಂಬಂಧಗಳು ಕ್ಷೀಣಿಸುತ್ತಿವೆ. ತಂತ್ರಜ್ಞಾನದ ಅತಿಯಾದ ಅವಲಂಬನೆಯಿಂದ ಕುಟುಂಬ ವ್ಯವಸ್ಥೆಯೂ ದುರ್ಬಲವಾಗುತ್ತಿದೆ ಎಂದು ಛಾಯಾಗ್ರಾಹಕ ಪ್ರವೀಣ್ ಮಠ ಕಳವಳ ವ್ಯಕ್ತಪಡಿಸಿದರು.
ಬುಧವಾರ ಇಂಡಿ: ಪಟ್ಟಣದ ಸುಮಿತ್ ಸ್ಟುಡಿಯೋದಲ್ಲಿ ಇಂಡಿ ತಾಲ್ಲೂಕಿನ ಛಾಯಾಗ್ರಾಹಕರ ವತಿಯಿಂದ ಆಯೋಜಿಸಿದ್ದ ೧೮೭ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಛಾಯಾಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಛಾಯಾಗ್ರಹಕರ ಕೇವಲ ವೃತ್ತಿಯಲ್ಲ, ಹಲವರ ಬದುಕಿಗೆ ಆಸರೆಯಾಗಿರುವ ಸುಂದರ ಕಲೆಯಾಗಿದೆ. ಛಾಯಾಗ್ರಾಹಕರು ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವೃತ್ತಿಯಲ್ಲಿ ಮತ್ತಷ್ಟು ಸಾಧನೆ ಮಾಡಬೇಕು ಎಂದು ಹೇಳಿದರು.
ಹಿಂದಿನ ಕಾಲದ ಕಪ್ಪು-ಬಿಳುಪು ಛಾಯಾಚಿತ್ರಗಳಿಗೆ ವಿಶೇಷ ಮೌಲ್ಯವಿತ್ತು. ಆದರೆ ಆಧುನಿಕ ತಂತ್ರಜ್ಞಾನ ಹಾಗೂ ಮೊಬೈಲ್ಗಳ ಬಳಕೆ ಹೆಚ್ಚಾದ ಬಳಿಕ ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದರ ಪರಿಣಾಮ ಜನರ ಜೀವನಶೈಲಿಯಲ್ಲೂ ಬದಲಾವಣೆಯಾಗಿದ್ದು, ಮಾನವೀಯ ಮೌಲ್ಯಗಳು ಮತ್ತು ಕುಟುಂಬ ಸಂಬಂಧಗಳು ಕ್ಷೀಣಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
ಆಧುನೀಕರಣದ ಪರಿಣಾಮ ಛಾಯಾಗ್ರಹಣ ಕ್ಷೇತ್ರ ಹಾಗೂ ಛಾಯಾಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಠ ಮನವಿ ಮಾಡಿದರು ಸಂಕಷ್ಟದಲ್ಲಿರುವ ಛಾಯಾಗ್ರಾಹಕರನ್ನು ಗುರುತಿಸಿ ಸರ್ಕಾರ ಹಾಗೂ ಸಮಾಜ ಪ್ರೋತ್ಸಾಹಿಸಬೇಕು ಎಂದು ಪ್ರವೀಣ್ ಮಠ ಮನವಿ ಮಾಡಿದರು ಕಾರ್ಯಕ್ರಮದಲ್ಲಿ ಕ್ರಾಂತಿ. ಹನುಮಂತ. ಇಸಾಕ್ ನಿತೇಶ್. ವಿಠ್ಠಲ. ಪ್ರವೀಣ.ಕುಮಾರ. ಆಕಾಶ. ಅಂಬರೀಶ್. ಶಂಕರ್ ನಾಟಿಕರ್ ರಮೇಶ್ ಗೊಳಸಾರ್. ಪ್ರಶಾಂತ್. ಅನೇಕ ಛಾಯಾಗ್ರಾಹಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮೊಬೈಲ್ ಮೋಹದಿಂದ ಮಾನವೀಯ ಸಂಬಂಧಗಳಿಗೆ ಧಕ್ಕೆ: ಛಾಯಾಗ್ರಾಹಕ ಪ್ರವೀಣ್ ಮಠ