LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bellary

ಹೀರದ ಸೂಗಮ್ಮ ಶಾಲೆ ಶತಮಾನೋತ್ಸವ ಅಂಗವಾಗಿ ಭವ್ಯ ಮೆರವಣಿಗೆ

ಬಳ್ಳಾರಿ, ಆ . 07: ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಪ್ರಥಮ ಶಿಕ್ಷಣ ಸಂಸ್ಥೆಯಾದ ಹೀರದ ಸೂಗಮ್ಮ ಶಾಲೆಯ ಶತಮಾನೋತ್ಸವದ ಅಂಗವಾಗಿ ಶುಕ್ರವಾರ ನಗರದಲ್ಲಿ ಭವ್ಯ ಹಾಗೂ ಆಕರ್ಷಕ ಮೆರವಣಿಗೆ ನಡೆಯಿತು.
ನಗರದ ಮರಿಸ್ವಾಮಿ ಮಠದಿಂದ ಆರಂಭವಾದ ಮೆರವಣಿಗೆಯಲ್ಲಿ ಹೀರದ ಸೂಗಮ್ಮ ಅವರ ಸ್ಥಬ್ಧಚಿತ್ರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಡೊಳ್ಳು, ವೀರಗಾಸೆ, ತಮಟೆ, ಡೋಲು ಹಾಗೂ ಅಲಂಕಾರಿಕ ದೀಪಗಳೊಂದಿಗೆ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ್ದು ಸಾರ್ವಜನಿಕರ ಗಮನ ಸೆಳೆಯಿತು.
ಕಲ್ಯಾಣ ಮಠದ ಪೂಜ್ಯ ಶ್ರೀಗಳು ಮೆರವಣಿಗೆಗೆ ಚಾಲನೆ ನೀಡಿದರು. ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಅಜೀವ ಸದಸ್ಯರು, ವೀರಶೈವ ಸಮಾಜದ ಮುಖಂಡರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಸಂಘದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿದರು.
ಮೆರವಣಿಗೆ ದೊಡ್ಡ ಮಾರುಕಟ್ಟೆ, ಬ್ರೂಸ್‌ಪೇಟೆ, ತೇರುಬೀದಿ, ಜೈನ ಮಾರುಕಟ್ಟೆ, ಗವಿಯಪ್ಪ ವೃತ್ತದ ಮೂಲಕ ಸಂಚರಿಸಿ ಹೀರದ ಸೂಗಮ್ಮ ಶಾಲೆಯ ಆವರಣಕ್ಕೆ ತಲುಪಿತು.
ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾದ ಈ ಮೆರವಣಿಗೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಶಾಲೆಯ ಶತಮಾನೋತ್ಸವ ಕಾರ್ಯಕ್ರಮಗಳಿಗೆ ವಿಶೇಷ ಮೆರುಗು ನೀಡಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೂಳು–ಕಸದಿಂದ ಮುಚ್ಚಿದ ಎಎಲ್‌ಬಿಸಿ ಕಾಲುವೆ: ಚವನಭಾವಿ ರೈತರಿಗೆ ನೀರಿನ ಸಂಕಷ್ಟನೂತನ ಸಚಿವ ಲಕ್ಷ್ಮಣ ಸವದಿಗೆ ಸ್ವಕ್ಷೇತ್ರದಲ್ಲಿ ಅಭೂತಪೂರ್ವ ಸ್ವಾಗತಕುಂಟೋಜಿ ಸರ್ಕಾರಿ ಶಾಲೆಗೆ ಎಸ್‌ಡಿಎಂಸಿ ಸಮಿತಿ ರಚನೆತಂಪೆರೆದ ಆಶ್ಲೇಸಾ ಮಳೆ : ೧ ಗಂಟೆಕಾಲ ಸುರಿದ ರಬಸದ ಮಳೆಪರಿಣಾಮಕಾರಿ ಬೋಧನೆ ಮತ್ತು ತರಗತಿ ನಿರ್ವಹಣೆ: ಘನಮಠೇಶ್ವರ ಶಾಲೆಯ ಶಿಕ್ಷಕರಿಗೆ ಮಾರ್ಗದರ್ಶನಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಸುತ್ತ ರಾಜಕೀಯ ಸಮರ: ರಾಹುಲ್ ಗಾಂಧಿ-ಕಿರಣ್ ರಿಜಿಜು ನಡುವೆ ತೀವ್ರ ವಾಗ್ದಾಳಿಬಾಗಲಕೋಟೆಯಲ್ಲಿ ರಾಜಕೀಯ-ಧಾರ್ಮಿಕ ಸಮರ ತೀವ್ರ: ಸಚಿವ ವಿಜಯಾನಂದ ಕಾಶಪ್ಪನವರ್ ಹಾಗೂ ಜಯಮೃತ್ಯುಂಜಯ ಸ್ವಾಮೀಜಿ ನಡುವೆ ವಾಕ್ಸಮರ ಉಗ್ರ ರೂಪಕ್ಕೆಎಸ್. ಆಯ್. ಆರ್. ಪಟ್ಟಿ 17 ರ ವರೆಗೆ ಮುಂದುಡಿಕೆ ತಹಸೀಲ್ದಾರ್ ನಾಗೇಂದ್ರ ಕೊಳಶೆಟ್ಟಿ.'ನಮ್ಮ ಮಗಳಿಗೆ ನ್ಯಾಯ ಕೊಡಿಸಿ’ - ಯುವತಿ ಸಾವಿಗೆ ಕಿರುಕುಳವೇ ಕಾರಣ: ಪೋಷಕರ ಆಕ್ರೋಶಬೆಳಗಾವಿ–ಗೋವಾ ಸೌಹಾರ್ಧತೆ ಇನ್ನಷ್ಟು ಬಲಗೊಳ್ಳಲಿ: ಪ್ರತಿಮಾ ಧೋಂಡ್