ಸಂಕೇಶ್ವರ : ಇಂದಿನ ಪ್ರತಿಯೊಂದು ಮಗು ನೈತಿಕ, ಆಧ್ಮಾತ್ಮಿಕ ಚಿಂತನೆಯೊಂದಿಗೆ ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯ ಅಳವಡಿಸಿಕೊಂಡು ಶಿಕ್ಷಣದೊಟ್ಟಿಗೆ ಗೌರವಯುತಾಗಿ ಬದುಕಿ ಶ್ರೇಷ್ಠತೆ ಕಂಡುಕೊಳ್ಳಬೇಕು ಎಂದು ಧಾರವಾಡ ಶಿವಯೋಗಾಶ್ರಮದ ನಿಸರ್ಗ ಚಿಕಿತ್ಸಾ ತಜ್ಞ ಡಾ. ಬಸವಾನಂದ ಸ್ವಾಮೀಜಿ ಹೇಳಿದರು.
ಸಮೀಪದ ಎಸ.ಜೆಡಿ ಶಿಕ್ಷಣ ಸಂಸ್ಥೆ ಪ್ರೌಢಶಾಲೆಯಲ್ಲಿ ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣವೆಂಬುದು ಸದ್ಗುಣಗಳ ಮೂಲವಾಗಿದ್ದು, ಸರ್ವತೋಮುಖ ಬೆಳವಣಿಗೆ ಮೂಲಕ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಉತ್ತಮ ಗುಣಗಳನ್ನು ಸಂಪಾದಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಸುನೀಲ ಗಲಗಲಿ ವಹಿಸಿದ್ದರು.
ಸಾಧು ಸಂತರ ಸಂದೇಶಗಳು ವಿದ್ಯಾರ್ಥಿಗಳ ಬದುಕಿನಲ್ಲಿ ಬದಲಾವಣೆ ತರಬಹುದೆಂಬ ಸದುದ್ದೇಶದಿಂದ ಪ್ರೌಢ ಶಾಲೆಯಲ್ಲಿ ಐದು ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಿಕ ಶಾಲೆಯ ಮುಖ್ಯಾಧ್ಯಾಪಕಿ ಭಾರತಿ ನೂಲಿ, ಶಿಕ್ಷಕರಾದ ಎ.ಬಿ.ಗುರವ, ಮಹಾಂತೇಶ ಗಾಣಗೇರ ಧಾರವಾಡದ ರವೀಂದ್ರ ಮಠದ ಸೇರಿದಂತೆ ಅನೇಕರು ಹಾಜರಿದ್ದರು.