ಕೊಪ್ಪಳ ಆಗಸ್ಟ್ 19: ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ವತಿಯಿಂದ ಬನ್ನಿಕೊಪ್ಪ ಗ್ರಾಮದಲ್ಲಿ ಬ್ಯಾಟರಿ ಚಾಲಿತ ಯಂತ್ರದ ಮೂಲಕ ತೊಗರಿ ಬೆಳೆಯಲ್ಲಿ ಕುಡಿ ಚಿವುಟುವಿಕೆಯ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಬನ್ನಿಕೊಪ್ಪ ಗ್ರಾಮದ ಮಾಜಿ ಸೈನಿಕ ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗರಾಜ ವೆಂಕರಡ್ಡಿ ವೆಂಕಟಾಪುರ ಅವರ ತೊಗರಿ ಹೊಲದಲ್ಲಿ ಮಂಗಳವಾರ (ಆ. 18ರಂದು) ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥರಾದ ಡಾ. ಬದರಿ ಪ್ರಸಾದ್ ಅವರು ತೊಗರಿ ಬೆಳೆಯಲ್ಲಿ ಕುಡಿಚಿವುಟುವಿಕೆಯ ಅಗತ್ಯತೆ ಹಾಗೂ ಲಘು ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸುವುದರಿಂದ ಬೆಳೆಯ ಇಳುವರಿ ಹೆಚ್ಚಿಸುವ ಕುರಿತು ರೈತರಿಗೆ ಮಾಹಿತಿ ನೀಡಿದರು.
ತೊಗರಿಯಲ್ಲಿ ಹೂ ಹಿಡಿಯಲು ಹಾಗೂ ಹೂ ಉದುರುವುದನ್ನು ತಡೆಯಲು ನಾಪ್ತಾಲೀನ್ ಅಸಿಟಿಕ್ ಆಸಿಡ್ (ಎನ್ಎಎ) ಹಾರ್ಮೋನ್ನ್ನು ಪ್ರತಿ ಲೀಟರ್ ನೀರಿಗೆ 0.25 ಮಿ.ಲೀ. ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಬಹುದು ಎಂದು ಅವರು ತಿಳಿಸಿದರು. ಅಲ್ಲದೆ, ಇಳುವರಿ ಹೆಚ್ಚಳಕ್ಕಾಗಿ ಹೂ ಬಿಡುವ ಹಂತದಲ್ಲಿ ಪಲ್ಸ್ ಮ್ಯಾಜಿಕ್ನ್ನು ಎಕರೆಗೆ 2 ಗ್ರಾಂ ಪ್ರಮಾಣದಲ್ಲಿ ಸಿಂಪಡಿಸುವAತೆ ಸಲಹೆ ನೀಡಿದರು. ಪಲ್ಸ್ ಮ್ಯಾಜಿಕ್ ಸಿಂಪಡಿಸುವ ಸಂದರ್ಭದಲ್ಲಿ ಒಂದು ಹೋಳು ನಿಂಬೆ ಹಣ್ಣಿನ ರಸವನ್ನು ದ್ರಾವಣಕ್ಕೆ ಬೆರೆಸಿ ಸಿಂಪಡಿಸುವAತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಪ್ರಮೋದ ತುಂಬಳ, ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ವಾಮನಮೂರ್ತಿ ಉಪಸ್ಥಿತರಿದ್ದರು.
ಪ್ರಗತಿಪರ ರೈತರಾದ ಸಿದ್ದಪ್ಪ ಮಾಳೆಕೊಪ್ಪ, ಕಾಳಪ್ಪ ಡಂಬಳ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೀರಪ್ಪ ಗೊಂದಿ, ಸಲಬಪ್ಪ ಗೊಂದಿ, ನಾಗರಾಜ ಹಳ್ಳಿಕೇರಿ, ಈಶಪ್ಪ ಬ್ಯಾಳಿ, ಪರಶುರಾಮ ವಜ್ರಬಂಡಿ, ಮರಿತಿಮ್ಮಪ್ಪ ದೇವರರ್ ಸೇರಿದಂತೆ ಸ್ಥಳೀಯ ರೈತರು ಭಾಗವಹಿಸಿದ್ದರು.
ರೈತರು, ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳನ್ನು (ಡಾ. ಬದರಿ ಪ್ರಸಾದ್ ಪಿ.ಆರ್., ವಿಸ್ತರಣಾ ಮುಂದಾಳು ಮೊ. 9900145705) ಸಂಪರ್ಕಿಸಬಹುದು.
****
ಬನ್ನಿಕೊಪ್ಪ ಗ್ರಾಮದ ಮಾಜಿ ಸೈನಿಕ ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗರಾಜ ವೆಂಕರಡ್ಡಿ ವೆಂಕಟಾಪುರ ಅವರ ತೊಗರಿ ಹೊಲದಲ್ಲಿ ಮಂಗಳವಾರ (ಆ. 18ರಂದು) ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥರಾದ ಡಾ. ಬದರಿ ಪ್ರಸಾದ್ ಅವರು ತೊಗರಿ ಬೆಳೆಯಲ್ಲಿ ಕುಡಿಚಿವುಟುವಿಕೆಯ ಅಗತ್ಯತೆ ಹಾಗೂ ಲಘು ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸುವುದರಿಂದ ಬೆಳೆಯ ಇಳುವರಿ ಹೆಚ್ಚಿಸುವ ಕುರಿತು ರೈತರಿಗೆ ಮಾಹಿತಿ ನೀಡಿದರು.
ತೊಗರಿಯಲ್ಲಿ ಹೂ ಹಿಡಿಯಲು ಹಾಗೂ ಹೂ ಉದುರುವುದನ್ನು ತಡೆಯಲು ನಾಪ್ತಾಲೀನ್ ಅಸಿಟಿಕ್ ಆಸಿಡ್ (ಎನ್ಎಎ) ಹಾರ್ಮೋನ್ನ್ನು ಪ್ರತಿ ಲೀಟರ್ ನೀರಿಗೆ 0.25 ಮಿ.ಲೀ. ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಬಹುದು ಎಂದು ಅವರು ತಿಳಿಸಿದರು. ಅಲ್ಲದೆ, ಇಳುವರಿ ಹೆಚ್ಚಳಕ್ಕಾಗಿ ಹೂ ಬಿಡುವ ಹಂತದಲ್ಲಿ ಪಲ್ಸ್ ಮ್ಯಾಜಿಕ್ನ್ನು ಎಕರೆಗೆ 2 ಗ್ರಾಂ ಪ್ರಮಾಣದಲ್ಲಿ ಸಿಂಪಡಿಸುವAತೆ ಸಲಹೆ ನೀಡಿದರು. ಪಲ್ಸ್ ಮ್ಯಾಜಿಕ್ ಸಿಂಪಡಿಸುವ ಸಂದರ್ಭದಲ್ಲಿ ಒಂದು ಹೋಳು ನಿಂಬೆ ಹಣ್ಣಿನ ರಸವನ್ನು ದ್ರಾವಣಕ್ಕೆ ಬೆರೆಸಿ ಸಿಂಪಡಿಸುವAತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಪ್ರಮೋದ ತುಂಬಳ, ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ವಾಮನಮೂರ್ತಿ ಉಪಸ್ಥಿತರಿದ್ದರು.
ಪ್ರಗತಿಪರ ರೈತರಾದ ಸಿದ್ದಪ್ಪ ಮಾಳೆಕೊಪ್ಪ, ಕಾಳಪ್ಪ ಡಂಬಳ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೀರಪ್ಪ ಗೊಂದಿ, ಸಲಬಪ್ಪ ಗೊಂದಿ, ನಾಗರಾಜ ಹಳ್ಳಿಕೇರಿ, ಈಶಪ್ಪ ಬ್ಯಾಳಿ, ಪರಶುರಾಮ ವಜ್ರಬಂಡಿ, ಮರಿತಿಮ್ಮಪ್ಪ ದೇವರರ್ ಸೇರಿದಂತೆ ಸ್ಥಳೀಯ ರೈತರು ಭಾಗವಹಿಸಿದ್ದರು.
ರೈತರು, ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳನ್ನು (ಡಾ. ಬದರಿ ಪ್ರಸಾದ್ ಪಿ.ಆರ್., ವಿಸ್ತರಣಾ ಮುಂದಾಳು ಮೊ. 9900145705) ಸಂಪರ್ಕಿಸಬಹುದು.
****