ಘಟಪ್ರಭಾ.ಘಟಪ್ರಭಾ ಮತ್ತು ಸುತ್ತಮುತ್ತಲಿನ ರೈಲು ಪ್ರಯಾಣಿಕರು ಹಲವು ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆ ಆಗಲು ರಾಜ್ಯಸಭಾ ಮಾಜಿ ಸಂಸದ ಈರಣ್ಣ ಕಡಾಡಿ ಅವರ ಮನವಿ ಮೇರೆಗೆ ದಕ್ಷಿಣ ಪಶ್ಚಿಮ ರೈಲ್ವೆಯು ಘಟಪ್ರಭಾ ರೈಲು ನಿಲ್ದಾಣದಲ್ಲಿ 4 ಪ್ರಮುಖ ಜೋಡಿ (ಒಟ್ಟು 8) ಎಕ್ಸ್ಪ್ರೆಸ್ ರೈಲುಗಳಿಗೆ ಪ್ರಾಯೋಗಿಕವಾಗಿ ತಾತ್ಕಾಲಿಕ ನಿಲುಗಡೆ ನೀಡಿ ಅಧಿಕೃತ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ರೈಲುಗಳ ವಿವರ ಮತ್ತು ಹೊಸ ವೇಳಾಪಟ್ಟಿ:
ಉತ್ತರ ಭಾರತದತ್ತ ಸಾಗುವ ರೈಲುಗಳು (ಆಗಮನ: ಬೆಳಿಗ್ಗೆ 10:48 / ನಿರ್ಗಮನ: 10:50):
16210 ಮೈಸೂರು - ಅಜ್ಮೇರ್ ಎಕ್ಸ್ಪ್ರೆಸ್ (ಆಗಸ್ಟ್ 25 ರಿಂದ)
16532 ಕೆ.ಎಸ್.ಆರ್ ಬೆಂಗಳೂರು - ಅಜ್ಮೇರ್ ಎಕ್ಸ್ಪ್ರೆಸ್ (ಆಗಸ್ಟ್ 28 ರಿಂದ)
20686 ಕೆ.ಎಸ್.ಆರ್ ಬೆಂಗಳೂರು - ಗಾಂಧಿಧಾಮ್ ಎಕ್ಸ್ಪ್ರೆಸ್ (ಆಗಸ್ಟ್ 29 ರಿಂದ)
16534 ಕೆ.ಎಸ್.ಆರ್ ಬೆಂಗಳೂರು - ಜೋಧ್ಪುರ ಎಕ್ಸ್ಪ್ರೆಸ್ (ಆಗಸ್ಟ್ 30 ರಿಂದ)
ಬೆಂಗಳೂರು / ಮೈಸೂರು ಕಡೆಗೆ ಸಾಗುವ ರೈಲುಗಳು (ಆಗಮನ: ಬೆಳಿಗ್ಗೆ 08:28 / ನಿರ್ಗಮನ: 08:30):
16531 ಅಜ್ಮೇರ್ - ಕೆ.ಎಸ್.ಆರ್ ಬೆಂಗಳೂರು ಎಕ್ಸ್ಪ್ರೆಸ್ (ಆಗಸ್ಟ್ 24 ರಿಂದ)
20685 ಗಾಂಧಿಧಾಮ್ - ಕೆ.ಎಸ್.ಆರ್ ಬೆಂಗಳೂರು ಎಕ್ಸ್ಪ್ರೆಸ್ (ಆಗಸ್ಟ್ 25 ರಿಂದ)
16533 ಜೋಧ್ಪುರ - ಕೆ.ಎಸ್.ಆರ್ ಬೆಂಗಳೂರು ಎಕ್ಸ್ಪ್ರೆಸ್ (ಆಗಸ್ಟ್ 26 ರಿಂದ)
16209 ಅಜ್ಮೇರ್ - ಮೈಸೂರು ಎಕ್ಸ್ಪ್ರೆಸ್ (ಆಗಸ್ಟ್ 28 ರಿಂದ)
ಈ ರೈಲುಗಳ ನಿಲುಗಡೆ ಸೌಲಭ್ಯದಿಂದಾಗಿ ರಾಜಸ್ಥಾನ, ಗುಜರಾತ್ ಹಾಗೂ ಬೆಂಗಳೂರು ಕಡೆಗೆ ಪ್ರಯಾಣಿಸುವ ನಮ್ಮ ಭಾಗದ ಪ್ರಯಾಣಿಕರಿಗೆ, ವರ್ತಕರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸಾರ್ವಜನಿಕರು ಈ ರೈಲುಗಳ ಸೇವೆಗಳ ಸದ್ಬಳಕೆ ಮಾಡಿಕೊಳ್ಳಬೇಕಾಗಿ ಮಾಜಿ ರಾಜ್ಯಸಭಾ ಸದಸ್ಯ ವಿನಂತಿಸಿದ್ದಾರೆ.