Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿಯವರ ರಾಜಕೀಯ ಷಡ್ಯಂತ್ರಕ್ಕೆ ವಿನಯ ಕುಲಕರ್ಣಿ ಬಲಿಯಾಗಿದ್ದಾರೆ

ಧಾರವಾಡದಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರ ಅಭಿಪ್ರಾಯ

ಧಾರವಾಡ
ವಿನಯ ಕುಲಕರ್ಣಿ ಅವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ಅವರ ರಾಜಕೀಯ ಏಳಿಗೆ ಸಹಿಸದೇ ವಿನಯ ಕುಲಕರ್ಣಿ ಅವರನ್ನು ಷಡ್ಯಂತ್ರ ಮಾಡಿ ಕೊಲೆ ಕೇಸನಲ್ಲಿ ಸಿಕ್ಕಿ ಹಾಕುವಂತೆ ಬಿಜೆಪಿಯವರು  ಮಾಡಿದ್ದಾರೆ. ಇದರ ಪರಿಣಾಮ ವಿನಯ ಕುಲಕರ್ಣಿ ಅವರು ಜೈಲಿನಲ್ಲಿದ್ದಾರೆ , ಅವರಿಗೆ ಹೈಕೋರ್ಟ ಹಾಗೂ ಸುಪ್ರೀಂಕೋರ್ಟನಲ್ಲಿ ನ್ಯಾಯ ಸಿಗಲಿದೆ ಎಂದು, ವಿನಯ ಕುಲಕರ್ಣಿ ಅಭಿಮಾನಿಗಳು ಹಾಗೂ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಧಾರವಾಡ ಜಿಲ್ಲೆಯಲ್ಲಿ ಮೌನ ಪ್ರತಿಭಟನೆಯಲ್ಲಿ ಭಾಗಿಯಾದರು. 
ಧಾರವಾಡದ ಕಡಪಾ ಮೈದಾನದಲ್ಲಿ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ವಿನಯ್ ಅವರ ಅಭಿಮಾನಿಗಳು ಕಲಾಭವನ ದಿಂದ ಕೆಸಿಸಿ ಬ್ಯಾಂಕ್‌ ವೃತ್ತದವರೆಗೂ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ವಿನಯ್ ಅವರ ಭಾವಚಿತ್ರ ಹಿಡಿದು ಸಾಗಿದ ಪ್ರತಿಭಟನಾಕಾರರು ಕೆಸಿಸಿ ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿ ಬಹಿರಂಗ ಸಭೆ ನಡೆಸಿದರು.

ಈ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಎಂಎಲ್‌ಸಿಗಳು, ಕಾಂಗ್ರೆಸ್ ಹಿರಿಯ ಮುಖಂಡರು ಪಾಲ್ಗೊಂಡು ಬಿಜೆಪಿ ವ್ಯವಸ್ಥಿತವಾಗಿ ವಿನಯ್ ಕುಲಕರ್ಣಿ ಅವರನ್ನು ಈ ಕೊಲೆ ಪ್ರಕರಣದಲ್ಲಿ ಸಿಲುಕಿಸಿದೆ. ಇದರ ಹಿಂದಿರುವ ವ್ಯಕ್ತಿಗಳ ಕೈವಾಡ ಬಯಲಾಗಬೇಕಿದೆ. ನ್ಯಾಯಾಲಯದ ತೀರ್ಪಿಗೆ ನಾವೆಲ್ಲ ತಲೆಬಾಗಬೇಕು ಎಂದರು.
ಯೋಗೀಶಗೌಡ ಕೊಲೆ ಪ್ರಕರಣವನ್ನು ಕೆಲ ಕುತಂತ್ರಿಗಳು ತಮ್ಮ ರಾಜಕೀಯ ದ್ವೇಷಕ್ಕೆ ಬಳಕೆ ಮಾಡಿಕೊಂಡು ಕುತಂತ್ರದಿಂದ ವಿನಯ್ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಿದರು. ವಿನಯ್ ಅವರ ಕುಟುಂಬದ ಜೊತೆ ನಾವೆಲ್ಲ ಇದ್ದೇವೆ ಎಂಬ ಸಂದೇಶವನ್ನು ಆ ಕುತಂತ್ರಿಗಳಿಗೆ ತಿಳಿಸುವ ಉದ್ದೇಶದಿಂದಲೇ ಈ ಮೌನ ಮೆರವಣಿಗೆ ನಡೆಸಲಾಗಿದೆ ಎಂದು ಕಾಂಗ್ರೆಸ್‌ ಮುಖಂಡರು ಈ ಸಂದರ್ಭದಲ್ಲಿ ತಿಳಿಸಿದರು.
ಸದ್ಯ ವಿನಯ್ ಅವರಿಗೆ ಸೆಷನ್ಸ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಈ ಬಗ್ಗೆ ಮುಂದೆ ಕಾನೂನು ಹೋರಾಟ ನಡೆಯಲಿದ್ದು, ಈ ಕಾನೂನು ಹೋರಾಟದಲ್ಲಿ ತಮಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯನ್ನು ವಿನಯ್ ಅವರ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರುಗಳಾದ ಅನಿಲಕುಮಾರ್ ಪಾಟೀಲ್, ಅಲ್ತಾಫ್ ಹಳ್ಳೂರ್, ಮುಖಂಡರುಗಳಾದ ದೀಪಕ್ ಚಿಂಚೋರೆ, ಮೋಹನ ಲಿಂಬಿಕಾಯಿ, ಎಂ ಎಸ್ ಅಕ್ಕಿ,ಶಿವಶಂಕರ ಹಂಪಣ್ಣವರ,ಚನ್ನಬಸಪ್ಪ ಮಟ್ಟಿ,ಕಲ್ಲಪ್ಪ ಪುಡಕಲಕಟ್ಟಿ, ಪಾರಿಸ ಪತ್ರವಳಿ, ಸಿದ್ದಣ್ಣ ಪ್ಯಾಟಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ಸದಸ್ಯರುಗಳಾದ ಪ್ರಕಾಶ್ ಘಾಟಗೆ, ರಾಜು ಕಮತಿ,ದೀಪಾ ನೀರಲಕಟ್ಟಿ,ಕವಿತಾ ಕಬ್ಬೆರ ಹಾಗೂ ಸಾವಿರಾರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮವನ್ನು ಈಶ್ವರ್ ಶಿವಳ್ಳಿ ನಿರೂಪಿಸಿದರು, ಅರವಿಂದ ಏಗನಗೌಡರ ವಂದಿಸಿದರು
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST