ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೈಗಾರಿಕೆಗಳ ಪ್ರಾರಂಭಕ್ಕೆ ಅನುಮತಿ ಬೇಕಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಬೇಕು. ಅದಕ್ಕೆ ಸುಲಭ ಅನುಮತಿಗೆ ಇದು ಅವಶ್ಯಕ. ಈ ಸೇವೆಯ ಮೂಲಕ ಪಡೆಯಬಹುದು. ಹೆಚ್ಚಿನ ಅಭಿವೃದ್ಧಿಗೆ ಕೈಗಾರಿಕೆಗಳು ಮುಖ್ಯ. ನಿಯಮಗಳನ್ನ ಸರಳೀಕರಣ ಮಾಡಬೇಕು. ಹಾಗಾಗಿ ಈ ತಂತ್ರಾಶ ಅನುಕೂಲವಾಗಲಿದೆ ಎಂದಿದ್ದಾರೆ.
ಒಂದೇ ಸೂರಿನಡಿ ಅನುಮತಿ ಪಡೆಯಬಹುದು. ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಕಾಯ್ದೆಗಳ ಅನುಷ್ಠಾನ ಸರಿಯಾಗಿ ಆಗಬೇಕು. ಮಧ್ಯವರ್ತಿಗಳ ಕಾಟವಿಲ್ಲದೆ ಅನುಮತಿ ಪಡೆಯಬಹುದು. ಎಕ್ಸ್ ಜಿಎನ್ ತಂತ್ರಾಶ ಈಗಾಗಲೇ ಇತ್ತು. ಬೇಕಾದ ಕಾಗದ ಪತ್ರಗಳನ್ನ ಇದರಲ್ಲಿ ಪಡೆಯಬಹುದು. ಕೈಗಾರಿಕೆ, ಉದ್ಯಮ ನಡೆಸಲು ಪಡೆಯಬಹುದಾಗಿದೆ ಎಂದರು.
ಐಐಟಿ ನಿರ್ದೇಶಕ, ಎನ್ಐಸಿ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಜೊತೆ ಸಮಸ್ಯೆ ಬಗ್ಗೆ ಚರ್ಚಿಸಿದ್ದೇವೆ. ರಾಷ್ಟ್ರೀಯ ಮಾಹಿತಿ ಕೇಂದ್ರದ ಮೂಲಕ ತಂತ್ರಾಂಶ ಅಭಿವೃದ್ಧಿಪಡಿಸಿದ್ದೇವೆ. ಇದರಿಂದ ರಾಜ್ಯಕ್ಕೆ ನಿರುದ್ಯೋಗ ಸಮಸ್ಯೆ, ಹೆಚ್ಚಿನ ಹೂಡಿಕೆ ಆಕರ್ಷಣೆ ತಂತ್ರಾಂಶ ಉಪಯುಕ್ತ ಆಗುತ್ತೆ. ಸುಸ್ತಿರ ಅಭಿವೃದ್ಧಿಗೆ ಪೂರಕವಾಗಲಿದೆ. ಬೇರೆ ದೇಶ ಅಥವಾ ರಾಜ್ಯದಲ್ಲಿ ಈ ಯೋಜನೆ ಇರುವ ಬಗ್ಗೆ ಮಾಹಿತಿ ಇಲ್ಲ. ನಾವು ಪರಿಣಾಮಕಾರಿಯಾಗಿ ಈ ಉಪಯುಕ್ತ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.