LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
International News

ಭಾರತ, ಚೀನಾ, ಜಪಾನ್​ಗೆ ಜೆನಾಫೋಬಿಯಾ ಎಂದ ಅಮೆರಿಕ ಅಧ್ಯಕ್ಷ ಜೋ ಬೈಡನ್

ವಾಷಿಂಗ್ಟನ್, ಮೇ 2: ವಲಸಿಗರ ಬಗ್ಗೆ ಅನಗತ್ಯ ಭಯ ಹೊಂದಿರುವ ದೇಶಗಳು ಆರ್ಥಿಕವಾಗಿ ಬೆಳೆಯಲು ಕಷ್ಟಪಡಬೇಕಾಗುತ್ತದೆ. ವಲಸಿಗರನ್ನು ಕೈಬೀಸಿ ಕರೆಯುತ್ತಿರುವ ಅಮೆರಿಕದ ಆರ್ಥಿಕತೆ ಉತ್ತಮವಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ (Joe Biden) ಹೇಳಿದ್ದಾರೆ. ಚೀನಾದಿಂದ ಹಿಡಿದು ಜಪಾನ್, ಭಾರತದವರೆಗೆ ಹಲವು ದೇಶಗಳು ಜೆನಾಫೋಬಿಯಾಗೆ  ಒಳಗಾಗಿವೆ ಎಂದು ಅಮೆರಿಕ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ಜೆನಾಫೋಬಿಯಾ ಎಂದರೆ ವಲಸಿಗರ ಬಗ್ಗೆ ಇರುವ ಅಸಹನೆ ಭಾವನೆ. ಭಾರತದಲ್ಲಿ ರೋಹಿಂಗ್ಯ ಮುಸ್ಲಿಮ್ ವಲಸಿಗರ ಸಮಸ್ಯೆ, ಬಾಂಗ್ಲಾದೇಶೀ ವಲಸಿಗರ ಬಗ್ಗೆ ಆತಂಕ ಇದೆ. ಈ ವಿಚಾರವನ್ನು ಅಮೆರಿಕ ಅಧ್ಯಕ್ಷರು ಪ್ರಸ್ತಾಪಿಸಿ ಪರೋಕ್ಷವಾಗಿ ಕುಟುಕಿದರಾ? ಅಥವಾ ಸಿಎಎ ವಿಚಾರವಾಗಿ ಅವರು ಕುಟುಕಿದರಾ? ಎಂಬ ಅನುಮಾನ ಮೂಡುತ್ತಿದೆ.

ಜೋ ಬೈಡನ್ ಅವರು 2024ರ ಚುನಾವಣೆಯಲ್ಲಿ ತಮ್ಮ ಸ್ಪರ್ಧೆಗೆ ಚಂದಾ ಪಡೆಯಲು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ವಲಸಿಗರಿಗೆ ಮಣೆ ಹಾಕುವ ಅಜೆಂಡಾ ಇಟ್ಟುಕೊಂಡೇ ಕಳೆದ ಬಾರಿ ಅವರು ಅಧ್ಯಕ್ಷೀಯ ಚುನಾವಣೆ ಜಯಿಸಿದ್ದರು. ಅಮೆರಿಕದಲ್ಲಿ ವಲಸಿಗರ ಪ್ರಾಬಲ್ಯ ಹೆಚ್ಚುತ್ತಿರುವ ಹೊತ್ತಿನಲ್ಲೇ ಅವರ ಪರವಾಗಿ ಬೈಡನ್ ನಿಂತಿದ್ದಾರೆ.

‘ಚೀನಾ ಯಾಕೆ ಆರ್ಥಿಕವಾಗಿ ಹೀನವಾಗುತ್ತಿದೆ? ಜಪಾನ್ ಯಾಕೆ ಸಮಸ್ಯೆ ಎದುರಿಸುತ್ತಿದೆ? ರಷ್ಯಾ, ಭಾರತ ಇವೆಲ್ಲಾ ಯಾಕೆ ಸಮಸ್ಯೆ ಎದುರಿಸುತ್ತಿವೆ? ಯಾಕೆಂದರೆ ಈ ದೇಶಗಳೆಲ್ಲಾ ಜೆನಾಫೋಬಿಕ್ ಆಗಿವೆ. ವಲಸಿಗರನ್ನು ಅವು ದೂರ ಇಟ್ಟಿವೆ. ಆದರೆ, ವಲಸಿಗರಿಂದಲೇ ನಾವು ಬಲಶಾಲಿಗಳಾಗಿದ್ದೇವೆ,’ ಎಂದು ಜೋ ಬೈಡನ್ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್ ಪ್ರಕಾರ 2023ಕ್ಕೆ ಹೋಲಿಸಿದರೆ 2024ರಲ್ಲಿ ಬಹುತೇಕ ದೇಶಗಳ ಆರ್ಥಿಕ ಬೆಳವಣಿಗೆ ಕಡಿಮೆ ಆಗಬಹುದು. ಜಪಾನ್ ಬೆಳವಣಿಗೆ ಕೇವಲ ಶೇ. 0.9ರಷ್ಟಾಗಬಹುದು. ಭಾರತದ ಜಿಡಿಪಿ ದರ ಶೇ. 6.8ರಷ್ಟು ಇರಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ.

ಇದೇ ವೇಳೆ ಅಮೆರಿಕದ ಆರ್ಥಿಕ ಬೆಳವಣಿಗೆ ಶೇ. 2.5ರಿಂದ ಶೇ. 2.7ರಷ್ಟು ಹೆಚ್ಚಬಹುದು ಎಂದು ಅದು ನಿರೀಕ್ಷಿಸಿದೆ. ಈ ಅಚ್ಚರಿಯ ವೃದ್ಧಿಗೆ ವಲಸಿಗರು ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಲಸಿಗರ ಆಗಮನದಿಂದಾಗಿ ಅಮೆರಿಕದ ಕಾರ್ಮಿಕ ಶಕ್ತಿ ಹೆಚ್ಚಿದ್ದು ಅದು ಆರ್ಥಿಕತೆಗೆ ಪಾಕ್ಷಿಕವಾಗಿ ಪುಷ್ಟಿ ಕೊಡಬಹುದು ಎಂದು ಹೇಳಲಾಗುತ್ತಿದೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ವಲಸಿಗರ ವಿಚಾರ ಹೆಚ್ಚು ಪ್ರಧಾನವಾಗಿರಲಿದೆ. ಡೆಮಾಕ್ರಾಟ್ ಪಕ್ಷದ ಜೋ ಬೈಡನ್ ಅವರು ವಲಸಿಗರ ಪರವಾಗಿ ನಿಂತಿದ್ದಾರೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ವಲಸಿಗರಿಗೆ ಕಡಿವಾಣ ಹಾಕುವ ಅಜೆಂಡಾ ಇಟ್ಟು ಪ್ರಚಾರ ಮಾಡುತ್ತಿದ್ದಾರೆ. ನವೆಂಬರ್​ನಲ್ಲಿ ಮತದಾರರು ಡೆಮಾಕ್ರಾಟ್ ಅಥವಾ ರಿಪಬ್ಲಿಕನ್ ಪಕ್ಷಗಳ ಪೈಕಿ ಯಾರ ಕೈ ಹಿಡಿಯುತ್ತಾರೆ ನೋಡಬೇಕು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್