ಜಮಖಂಡಿ,17 ವೈವಿಧ್ಯತೆಯಲ್ಲಿ ಏಕತೆ ನಮ್ಮ ಸಂಸ್ಕ್ರತಿಯ ಜೀವಾಳ.ಭಿನ್ನ ಭಾಷೆ, ವಿಭಿನ್ನ ವೇಷ ಆದರೂ ನಾವೆಲ್ಲರೂ ಒಂದೇ ಎಂದು ಸಾಯಿನಿಕೇತನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ರೋಶ್ನಿ ವೆರ್ಣೆಕರ ಹೇಳಿದರು. ದಾನಮ್ಮ ದೇವಿ ಗಜಾನನ ಉತ್ಸವ ಸಮಿತಿ ವತಿಯಿಂದ ದಂಪತಿಗಳಿಗೆ ಹಮ್ಮಿ ಕೊಂಡಿದ್ದ ವಿವಿಧ ರಾಜ್ಯಗಳ ಉಡುವುಗಳ ಸ್ಪರ್ಧೆಯ ನಿರ್ಣಾಯಕರಾಗಿ ಅವರು ಮಾತನಾಡಿದರು.
ಸುನೀಲ ಮುರುಗೋಡ, ಗುರು ಮಹಾಲಿಂಗಪೂರ, ಅರವಿಂದ ಪವಾರ, ಅಖೀಲ ಮುರಗೋಡ, ಗೌತಮ ಗಾಂವಿ ದಂಪತಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಮಣಿಪುರಿ, ಕರ್ನಾಟಕ, ಮಹಾರಾಷ್ಟ್ರ, ಕೇರಳ ಹೀಗೆ ವಿವಿಧ ರಾಜ್ಯಗಳಲ್ಲಿರುವ ವೇಷಭೂಷಣಗಳನ್ನು ಪ್ರದರ್ಶಿಸಿದರು. ನಿರ್ಣಾಯಕರಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿನೀಲಮ್ಮ ನೀಲವಾಣಿ ಸರಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಧ್ಯಾಪಕಿ ಪುಷ್ಪಾ ಹುಣಶ್ಯಾಳ ಹಾಗೂ ಮಲ್ಲಿಕಾರ್ಜುನ ಹಲಗಲಿ ಭಾಗವಹಿಸಿದ್ದರು.
ಅರವಿಂದ ಪವಾರ ಪ್ರಥಮ, ಗೌತಮ ಗಾಂವಿ ದ್ವಿತೀಯ, ಸುನೀಲ ಮುರಗೋಡ ದಂಪತಿಗಳು ತೃತೀಯ ಸ್ಥಾನ ಪಡೆದರು. ಇತ್ತಿಚಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಎಂದು ಪ್ರಶಸ್ತಿ ಪಡೆದ ಶ್ರೀದೇವಿ ಮುಗುಳಿ ಅವರನ್ನು ಸಮೀತಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿಂಗಪ್ಪಾ ಶಾನವಾಡ, ಗುರಯ್ಯಾ ಸರಗಣಾಚಾರಿ ಮಲ್ಲಿಕಾರ್ಜುನ ಮಠದ, ಗುರು ಮಠಪತಿ, ಸುರೇಶ ಅಬ್ಬಿಗೇರಿ, ಮಹೇಂದ್ರ ಗುಡ್ಲಿ, ಮಹಾದೇವ ಅಳ್ಳಮಟ್ಟಿ, ಕುಮಾರ ಸಾಲಿಮಠ, ಆನಂದ ಗಣಾಚಾರಿ, ರಾಹುಲ ಮುರಗೋಡ, ಧನಂಜಯ ಪವಾರ, ಶ್ರೀಶೈಲ ಮುರಗೋಡ, ಶಿವಲಿಂಗ ದೊಡ್ಡಮನಿ,ಸುಭಾ಼ಷ ಪಾಟೀಲ, ರಾಜು ವಾಣಿ, ಮಹಾಲಿಂಗಪ್ಪ ಉಳ್ಳಾಗಡ್ಡಿ ಸೇರಿದಂತೆ ಗಜಾನನ ಮಹಾಮಂಡಳದ ಸದಸ್ಯರು ಉಪಸ್ಥಿತರಿದ್ದರು. ದಿವ್ಯಾ ಮಹಾಲಿಂಗಪೂರ ಹಾಗೂ ಸುರಕ್ಷಾ ಅಳ್ಳಿಮಟ್ಟಿ ನಿರೂಪಣೆ ಮಾಡಿದರು. ಮಲ್ಲು ಗಣಾಚಾರಿ ವಂದಿಸಿದರು.