ಗದಗ: ಮಾಧ್ಯಮ ಮಿತ್ರರು ಕ್ರಿಕೆಟ್ ಲೀಗ್ ಆಡುವ ಉತ್ಸಾಹ ತೋರಿದ್ದು ಹಿರಿಯರನ್ನು ಕಿರಿಯರನ್ನಾಗಿ ಮಾಡುವಂತಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಮಾನಸಿಕವಾಗಿ ವಯಸ್ಸಾದಂತೆ ಕಂಡರೂ ಆಟದಲ್ಲಿ ಭಾಗವಹಿಸಿದಾಗ ಆ ವಯಸ್ಸು ಕಾಣುವುದಿಲ್ಲ ಮಾಜಿ ಸಚಿವ, ಶಾಸಕ ಎಚ್. ಕೆ ಪಾಟೀಲ ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕವು ನಗರದ ವ್ಹಿಡಿಎಸ್ ಮೈದಾನದಲ್ಲಿ ಆಯೋಜಿಸಿದ್ದ ‘ಗದಗ ಮೀಡಿಯಾ ಕ್ರಿಕೆಟ್ ಲೀಗ್’ನ ಫೈನಲ್ ಪಂದ್ಯದಲ್ಲಿ ರೂರಲ್ ಕಿಂಗ್ಸ್ ಹಾಗೂ ನೈಟ್ ರೈಡರ್ಸ್ ತಂಡಗಳ ನಡುವೆ ನಡೆದ ಪಂದ್ಯಕ್ಕೆ ಟಾಸ್ ನೀಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚೆಗೆ ಕ್ರಿಕೆಟ್ ಬಹಳಷ್ಟು ಜನಪ್ರಿಯವಾಗುತ್ತಿದೆ. ಆಡುವ ಸಂದರ್ಭದಲ್ಲಿ ಆಟಗಾರರು ಹಾಕಿಕೊಳ್ಳುವ ಸಮವಸ್ತ್ರದಿಂದ ತಮಗಷ್ಟೆ ಅಲ್ಲದೇ ತಮ್ಮ ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ಹೆಚ್ಚು ಸಂತೋಷ ನೀಡುತ್ತದೆ. ಇದೊಂದು ರೀತಿ ಮನರಂಜನೆ ಆಗಿದೆ. ಮೈದಾನದಲ್ಲಿ ತೋರಿಸುವ ಕ್ರೀಡಾ ಮನೋಭಾವ ವೃತ್ತಿಯಲ್ಲೂ ಹೆಚ್ಚು ತೋರುವಂತಾಗಲಿ. ಕ್ರೀಡೆಗಳಿಂದ ಹೆಚ್ಚು ಎತ್ತರಕ್ಕೆ ಹೋಗಲು ಎಲ್ಲರಿಂದಲೂ ಸಾಧ್ಯವಿದೆ ಎಂದರು.
ಸಮಾಜವನ್ನು ತಿದ್ದುವ ಬಹುದೊಡ್ಡ ಶಕ್ತಿಯಾಗಿರುವ ನೀವು ಈ ಮೈದಾನದಲ್ಲಿ ವಿಶೇಷ ಗುಣಗಳನ್ನು ಹೊತ್ತೊಯ್ಯುವ ಅವಕಾಶವಿದೆ. ಕ್ರಿಕೆಟ್ ಆಯೋಜನೆ ಮಾಡುವುದು ಬಹುದೋಡ್ಡ ಕೆಲಸವಾಗಿದೆ. ಕ್ರೀಡೆಗಳಿಂದ ಇನ್ನೂ ಹೆಚ್ಚು ಉತ್ಸಾಹ, ಹುರುಪು ಬರುವಂತಾಗಲಿ. ಟೂರ್ನಾಮೆಂಟ್ ಆಯೋಜಿಸಲು ಶ್ರಮಿಸಿದ ಕಾನಿಪ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ನೇತೃತ್ವದ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಹಾರೈಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಅವರು ಮಾತನಾಡಿ, ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗಾಗಿ ಜಿಲ್ಲಾ ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ಕ್ರಿಕೆಟ್ ಲೀಗ್ ಆಯೋಜನೆ ಮಾಡಿದೆ. ಲೀಗ್ನಲ್ಲಿ ವಿಜೇತ ತಂಡಗಳಿಗೆ ಜಿಲ್ಲಾ ಸಂಘದಿAದ ಮೊದಲ ಬಹುಮಾನವಾಗಿ 5,555 ರೂ. ನಗದು ಹಾಗೂ ಟ್ರೋಫಿ ಹಾಗೂ ದ್ವಿತೀಯ ಬಹುಮಾನವಾಗಿ 3,333 ರೂ. ನಗದು ಮತ್ತು ಟ್ರೋಫಿ ನೀಡಲಾಗುತ್ತಿದೆ.
ಲೀಗ್ಗೆ ನಾಲ್ಕೂ ತಂಡಗಳ ಮಾಲೀಕರು ಮತ್ತು ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಸಹಕಾರದಿಂದ ಸಾಕಾರಗೊಂಡಿದೆ ಎಂದು ರಾಜು ಹೆಬ್ಬಳ್ಳಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ, ರವಿಕಾಂತ ಅಂಗಡಿ, ದೇವಪ್ಪ ಲಿಂಗದಾಳ, ಕಾನಿಪದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ರಾಜ್ಯ ಕಾರ್ಯಕಾರಣಿ ಸದಸ್ಯ ಅರುಣಕುಮಾರ ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಅಶೋಕ ಮಂದಾಲಿ, ಸಿದ್ದು ಪಾಟೀಲ, ತಂಡಗಳ ಮಾಲೀಕರಾದ ಜಗದೀಶ್ ಎಸ್ ಪಿ, ಅಜಿತ ಹೊಂಬಾಳಿ, ಎಚ್ ಎಂ ಶರೀಫನವರ್, ಆನಂದ ಸಾಲಿಗ್ರಾಮ, ಆನಂದಯ್ಯ ವಿರಕ್ತಮಠ, ಅನಂತ ಕಾರ್ಕಳ, ಟಿ. ಎನ್ ಬಾಂಡಗೆ ಸುನಿಲ್ ತೆಂಬದಮನಿ, ಅನಿಲ ತೆಂಬದಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
===