ಮುಗಳಖೋಡ [೨೪] ಪ್ರತಿಯೊಬ್ಬನ ಮನಸ್ಸು ಚಿತ್ತ ಸುದ್ದಿಯಾಗಿ ಶಾಂತಿಹೊಂದಿದಾಗ ಜಗತ್ತು ಶಾಂತಿಯುತವಾಗಿ ಸಾಗಲು ಸಾಧ್ಯ ಎಂದು ಹಿಪ್ಪರಗಿ ಮಠದ ಪ್ರಭು ಬೆನ್ನಾಳೆ ಮಹಾರಾಜರು ಹೇಳಿದರು. ಸೋಮವಾರ 24 ರಂದು ಅವರು ಪಟ್ಟಣದ ಇಂಚಗೇರಿ ಆಶ್ರಮದಲ್ಲಿ ಸಾಂಪ್ರದಾಯದ ಮಾಧವಾನಂದ ಪ್ರಭುಜೀಯವರ ಮೂರ್ತಿ ಪ್ರತಿಷ್ಠಾಪನೆ ಐದನೇ ವರ್ಷಾಚರಣೆಯ ಶ್ರಾವಣ ಸಾಧನಾ ಸಪ್ತಾಹದ ದಿವ್ಯ ಸಾನಿಧ್ಯವಹಿಸಿ ಮಾತನಾಡುತ್ತಾ ಈ ವರ್ತಮಾನ ಕಾಲದಲ್ಲಿ ಶಾಂತಿ ಇಲ್ಲದೇ ಸಾಗುತ್ತಿರುವ ಮನುಷ್ಯ ಜೀವನಕ್ಕೆ ಶಾಂತಿಗಾಗಿ ಸಂಪ್ರದಾಯದ ಎಲ್ಲ ಮಹಾರಾಜರು ಸರಳ ದಾರಿ ತೋರಿಸಿದ್ದಾರೆ ,ಅದು ಸತ್ಯ ಶೃದ್ಯೆ ವಿಶ್ವಾಸದಿಂದ ನಿತ್ಯ ನೇಮ ಉಪಾಷಣೆಯಲ್ಲಿ
ನಾವೆಲ್ಲರೂ ನಡೆದು ಕೊಂಡರೆ ಮಲಿನವಾದ ಬದುಕು,ಅನ್ಯಾಯ,ಅಧರ್ಮ,ಮರೆತು ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ,ಮನಸ್ಸಿನ ಸುದ್ದಿಗಾಗಿ ಗುರುವಿನ ಮಾರ್ಗ ಮುಖ್ಯ ಅಂತಹ ಸಂಪ್ರದಾಯ ಗುರುಗಳನ್ನು ಪಡೆದ ಭಾಗ್ಯವಂತರು ನಾವು ಅವರು ತೋರಿಸಿದ ಜ್ಞಾನನೀಡುವ ಇಂತಹ ಶ್ರಾವಣ ಶ್ರವಣ ಸಾಧನ ಸಪ್ತಾಹದಲ್ಲಿ ತನು ಮನ ಧನದಿಂದ ಭಾಗವಹಿಸಿ ನಡೆದುಕೊಂಡಗ ಜೀವನ ಪಾವನ ವಾಗುತ್ತದೆ ಎಂದು ಆರ್ಶೀವಚನ ನೀಡಿದರು. ಅರವಿಂದ ಮಹಾರಾಜರು ಸಾಂಪ್ರದಾಯದ ಸತ್ಯ ಸಂದೇಶ ವಾಚನ ಮಾಡಿದರು.ನಂತರ ಮಂಗಳಾರೂತಿಯೊಂದಿಗೆ ಕಾರ್ಯಕ್ರಮ ಮಂಗಳ ಗೊಂಡಿತು.ಮಹಾರಾಜರನ್ನು ಸೇವೆ ಸಲ್ಲಿಸಿದ ಭಕ್ತರನ್ನು ಸತ್ಕರಿಸಲಾಯಿತು. ನಂತರ ದಾಸೋಹ ಸೇವೆಯೊಂದಿಗೆ ವೈಭವದಿಂದ ವರ್ಷಾಚರಣೆ ಆಚರಿಸಲಾಯಿತು. ಸಂಗಪ್ಪ ಜಂಬಗಿ, ಕೃಷ್ಣ ಕುಲಕರ್ಣಿ, ವಿನೋಬಾ ಜಂಬಗಿ, ಮುಕುಂದ ಯಡವಣ್ಣವರ ,ಶಿವಜ್ಜ ಜಂಬಗಿ, ಮಹಾದೇವ ಬಾಳೋಜಿ, ಅಪ್ಪಾಸಾಹೇಬ ಯರಡೆತ್ತಿ , ಶಿವಸಂಗಯ್ಯ ಹಿರೇಮಠ, ಸುರೇಶ ಜಂಬಗಿ, ಸಿದ್ದಪ್ಪ ಜತ್ತಿ ,ಅಲ್ಲಪ್ಪ ಬೆಳಗಲಿ ,ಪರಪ್ಪ ಹಾಲೊಳ್ಳಿ, ಸದಾಶಿವ ಬೆಳಗಲಿ, ಮುತ್ತಪ್ಪ ಹುಕ್ಕೇರಿ ,ಮಲ್ಲಪ್ಪ ತೇಲಿ, ಯಲ್ಲಾಲಿಂಗ ಮುಧೋಳ, ಲಕ್ಷ್ಮಣ್ಣ ಗೋಕಾಕ ,ಮಲ್ಲೇಶ ಮುಧೋಳ ಹಾಗೂ
ಸಾಂಪ್ರದಾಯದ ಸಕಲಸದ್ಭಕ್ತರು ಇದ್ದರು.