ಘಟಪ್ರಭಾ : ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ಶತಮಾನ ಪೂರೈಸಿದ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ೧೧೩ ನೇ ವಾರ್ಷಿಕ ಸರ್ವ ಸಾಧಾರಣ ಸಭೆ ದಿನಾಂಕ ೧೨-೦೯-೨೦೨೬ ರಂದು ಜರುಗಿತು.
ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ದೇಶಿಸಿ ಅಧ್ಯಕ್ಷರಾದ. ನೀಲಕಂಠ ಬಸಪ್ಪ ಕಪ್ಪಲಗುದ್ದಿ ಮಾತನಾಡಿ ಕಳೆದ ೧೧೩ ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾದಿಸುತ್ತ ಬಂದಿರುವ ನಮ್ಮ ಸಂಘದ ಸನ್ ೨೦೨೫-೨೬ ನೇ ಸಾಲಿನ ವಾರ್ಷಿಕ ವರದಿಯಲ್ಲಿ ಒಟ್ಟು ಸದಸ್ಯರ ಸಂಖ್ಯೆಯು ದಿನಾಂಕ ೩೧-೦೩-೨೦೨೬ ಕ್ಕೆ ೨,೮೯೯ ಸಾಮಾನ್ಯ ಸದಸ್ಯರು ಇರುತ್ತಾರೆ. ಅದರಂತೆ ಶೇರು ಬಂಡವಾಳ ಸನ್ ೨೦೨೫-೨೬ ನೇ ಸಾಲಿನ ಒಟ್ಟು ಶೇರು ಬಂಡವಾಳವು ೨,೭೦,೦೯,೩೭೫/- ರೂಗಳು ಇರುತ್ತದೆ. ಹಾಗೇ ಒಟ್ಟು ನಿಧಿಗಳು ರೂ. ೬,೦೩,೭೨,೩೫೭.೮೪ ಇದೆ. ಮತ್ತು ಗುಂತಾವಣೆಗಳು ಸನ್ ೨೦೨೫-೨೬ ನೇ ಸಾಲಿನಲ್ಲಿ ಸಂಘವು ಬಿ.ಡಿ.ಸಿ.ಸಿ. ಬ್ಯಾಂಕನಲ್ಲಿ ಆರ್.ಎಫ್.ಡಿ. ಸಹಿತ ರೂ ೮,೦೭,೯೭,೭೫೨.೧೬ ಇರುತ್ತದೆ. ಅದರಂತೆ ವರದಿ ವರ್ಷದಲ್ಲಿ ದಿನಾಂಕ ೩೧-೦೩-೨೦೨೬ ಕ್ಕೆ ಸಂಘವು ರೂ ೬೩,೩೦,೭೧೩.೧೧ ಲಾಭವಾಗಿದೆ ಎಂದು ತಿಳಿಸಲು ಸಂತೋಷವೆನಿಸುತ್ತದೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ನಮ್ಮ ಸಂಘದಿಂದ ಒಟು ೧,೪೪೩ ಸದಸ್ಯರುಗಳಿಗೆ ಒಟ್ಟು ರೂ ೧೫,೬೯,೨೮,೦೦೦/- ರೂಗಳ ಬೆಳೆಸಾಲವನ್ನು ಹಾಗೂ ೦೭ ಸದಸ್ಯರುಗಳಿಗೆ ಒಟ್ಟು ೪೪,೭೮,೦೦೦/- ಟ್ಯಾಕ್ಟರ ಸಾಲವನ್ನು ಬಿ.ಡಿ.ಸಿ.ಸಿ. ಬ್ಯಾಂಕಿನಿಂದ ವಿತರಿಸಿದೆ. ಎಂದೂ ತಿಳಿಸಲು ಸಂತೋಷವಾಗುತ್ತದೆ. ಮತ್ತು ಸಂಘದ ಸದಸ್ಯರ ೧೦ ,೧೨ ನೇ ತರಗತಿಯಲ್ಲಿ ಹೆಚ್ಚಿಗೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಿತಿದ್ದೇವೆ,ಸಂಘದ ಸದಸ್ಯರ ಕಲ್ಯಾಣ ಕಾರ್ಯಕ್ರಮಳಿಗೆ ಉಚಿತ ಕುರ್ಚಿಗಳು ಬಾಂಡೆಗಳನ್ನು ಬಾಡಿಗೆ ರಹಿತವಾಗಿ ನಿಡುತ್ತಿದ್ದೇವೆ, ಸದಸ್ಯರಿಗೆ ಮರಣಾ ನಂತರ ಅವರ ಕುಟುಂಬಕ್ಕೆ ತಕ್ಷಣ ರುಪಾಯಿ ೧೦,೦೦೦/- ನಿಡುತ್ತಿದ್ದೇವೆ ಎಂದು ತಿಳಿಸಿದರು,
ಈ ಸಂದರ್ಬದಲ್ಲಿ ಉಪಾಧ್ಯಕ್ಷರಾದ ಭೀಮಪ್ಪ ಹಣಮಂತ ವ್ಯಾಪಾರಿ, ನಿರ್ದೇಶಕರಾದ ಬಸವರಾಜ ಬಾಳಪ್ಪ ಬೆಳಕೂಡ, ಮಲ್ಲಪ್ಪ ಪರಪ್ಪ ಕಡಾಡಿ, ಆನಂದ ಭೀಮಪ್ಪ ಹೆಬ್ಬಾಳ, ಶಂಕರ ನಿಂಗಪ್ಪ ಗೋರೋಶಿ, ಬಸಪ್ಪ ಭೀಮಪ್ಪ ಭೀ|| ಪಾಟೀಲ, ಧರೀಶ ಲಕ್ಷ್ಮಣ ಖಾನಗೌಡ್ರ, ಶ್ರೀಮತಿ ಮಹಾದೇವಿ ಶಂಕರ ಖಾನಾಪೂರ, ಶ್ರೀಮತಿ ಕೆಂಪವ್ವ ಕಲ್ಲಪ್ಪ ಗೋರೋಶಿ, ಮಲ್ಲಪ್ಪ ನಿಂಗಪ್ಪ ಪೂಜೇರಿ, ಧರ್ಮಣ್ಣ ಸಿದ್ದಪ್ಪ ನಂದಿ, ಹಿರಿಯ ಬ್ಯಾಂಕ ನಿರೀಕ್ಷಕರು ಕಲ್ಲೋಳಿ ಇವರು ಉಪಸ್ಥಿತರಿದ್ದರು. ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಮಲ್ಲಪ್ಪ ನಾಗಪ್ಪ ಹೆಬ್ಬಾಳ ವಾರ್ಷೀಕ ವರದಿಯನ್ನು ಮಂಡಿಸಿದರು ಮತ್ತು ಅಕೌಟಂಟರಾದ ಮಾನಿಂಗ ಬಾಳಪ್ಪ ಮೇತ್ರಿ ವಂದನಾರ್ಪನೆ ಕಾರ್ಯಕ್ರಮ ನಿರುಪಿಸಿದರು.