Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿಮ್ಮ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ : ಸಿದ್ದಲಿಂಗ ನಿರಂಜನ ದೇಶಿಕರು








 ಬಳ್ಳಾರಿ. ಮೇ. 10: ನಾನು ಈ ಮಠಕ್ಕೆ ಆಸ್ತಿ ಇದೆ ಹಣ ಇದೆ ಎಂದು ಬಂದಿಲ್ಲ ಈ ಮಠದ ಅಪಾರ ಭಕ್ತರನ್ನು ಕಂಡು ನನಗೆ ಅತ್ಯಂತ ಖುಷಿಯಾಗಿದೆ  ಮಠಕ್ಕೆ ನನ್ನನ್ನು ಕೊಟ್ಟೂರು ಸ್ವಾಮಿ ಶ್ರೀಗಳು ಉತ್ತರಾಧಿಕಾರಿಗಳ್ಳನ್ನಾಗಿ ನೇಮಕ ಮಾಡಿದ್ದಾರೆ. ಈ ಮಠದ ಭಕ್ತರು ಮತ್ತು ಈ ಗ್ರಾಮದ ಹಾಗೂ ಸುತ್ತಮುತ್ತಲ ಭಕ್ತಾದಿಗಳನ್ನು ಕಾಯುವುದು ನನ್ನ ಕರ್ತವ್ಯವಾಗಿದೆ, ನೀವೆಲ್ಲರೂ ನನಗೆ ಸಹಕಾರ ಕೊಟ್ಟಲ್ಲಿ ನಾನು ಈ ಈ ಮಠದಲ್ಲಿ ಉತ್ತಮವಾಗಿ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು  ಸಿದ್ದಲಿಂಗ ನಿರಂಜನ

ದೇಶಿಕ ಸ್ವಾಮಿಗಳು ತಿಳಿಸಿದರು.


 ಅವರಿಂದು ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಕೊಟ್ಟೂರು ಸ್ವಾಮಿ ಶಾಖಾ ಮಠದ ಚರ ಪಟ್ಟಾಧಿಕಾರ ಸಮಾರಂಭದಲ್ಲಿ ಅಧಿಕಾರವನ್ನು ಸ್ವೀಕರಿಸಿ ಮಾತನಾಡಿ, ಗ್ರಾಮದ ಜನತೆ ನನಗೆ ಏನನ್ನು ಕೊಡಬೇಕಿಲ್ಲ, ಕೇವಲ ಅವರ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಲಿ ಅವರ ಮತ್ತು ಅವರ ಕುಟುಂಬವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವುದು ನನ್ನ ಧರ್ಮ, ಮಠದ ಭಕ್ತರಲ್ಲಿ ವಿನಂತಿ ಏನೆಂದರೆ ಯಾರೂ ಸಹ ಜಾತಿ ಭೇದ ಭಾವ ಮೇಲು ಕೀಳುಗಳನ್ನು ಎಣಿಸಬಾರದು ಎಲ್ಲರೂ ಶ್ರೀ ಕೊಟ್ಟೂರು ಸ್ವಾಮಿಗಳ ಭಕ್ತರು ಅವರೆಲ್ಲರನ್ನು ಒಂದೇ ರೀತಿಯಲ್ಲಿ ಕರೆದುಕೊಂಡು ಹೋಗಬೇಕಾಗಿರೋದು ಮಾನವ ಧರ್ಮ ಎಂದರು.


 ನಾನು ಈ ಮಠಕ್ಕೆ ಕಳೆದ 15 ವರ್ಷಗಳ ಹಿಂದೆ ಮಠದ ಸೇವಕನಾಗಿ  ಬಂದಿದ್ದೇನು ಆ ಸಂದರ್ಭದಲ್ಲಿ ನನಗೆ ಸ್ವಾಮೀಜಿಗಳು ನೀನು ಈ ಮಠದ ಮರಿಸ್ವಾಮಿ ಯಾಗಿ ಕೆಲಸ ಮಾಡಬೇಕು ಎಂದು ಆಗ್ನೇಯನ್ನು ನೀಡಿದ್ದರು ಅದೇ ರೀತಿಯಾಗಿ ನಾನು ಮರಿಸ್ವಾಮಿಯಾಗಿ ಮುಂದುವರಿದುಕೊಂಡು ಬಂದು ಇಂದು ಈ ಶಾಖ ಮಠಕ್ಕೆ ಗುರುಗಳಾಗಿ ನೇಮಕಗೊಂಡು ಪಟ್ಟಾಧಿಕಾರವನ್ನು ಅಲಂಕರಿಸುತ್ತಿದ್ದೇನೆ  ಎಂದರು.


 ಈ ಪಟ್ಟಾಧಿಕಾರ ಸಮಾರಂಭದಲ್ಲಿ ಉತ್ತಂಗಿ ಮಠದ ಸೋಮಶೇಖರ ಮಹಾಸ್ವಾಮಿಗಳು, ನೀಲಗುಂದ ವಿರಕ್ತಮಠದ ಚನ್ನಬಸವ ಮಹಾಸ್ವಾಮಿಗಳು, ಹಡಗಲಿಯ ನಿಡಗುಂದಿ ಮಠದ ಶಿವಾಚಾರ್ಯ ಮಹಾಸ್ವಾಮಿಗಳು, ನಂದಿಪುರ ಚರಂತೆಶ್ವರ ಮಠದ ಮಹೇಶ್ವರ ಮಹಾಸ್ವಾಮಿಗಳು, ಹೂವಿನಹಡಗಲಿಯ ಗವಿಮಠದ ಶಾಂತಿವೀರ ಮಹಾಸ್ವಾಮಿಗಳು, ಹಿರಿಮಲ್ಲನಕೇರಿ ವಿರಕ್ತ ಮಠದ ಚನ್ನಬಸವ ಮಹಾಸ್ವಾಮಿಗಳು, ಹಂಪಸಾಗರ ಮಹಾದೇವ ತಾತ ಮಠದ ಶಿವಾಚಾರ್ಯ ಮಹಾಸ್ವಾಮಿಗಳು, ಅಡವಿ ಅಮರೇಶ್ವರ ಸುಕ್ಷೇತ್ರ ತೋಂಟದ ಮಹಾಸ್ವಾಮಿಗಳು  ಸೇರಿದಂತೆ

ಕಂಪ್ಲಿ ಶಾಸಕ ಗಣೇಶ್, ಮಾಜಿ ಸಚಿವ ಬಿ ಶ್ರೀರಾಮುಲು, ಅಲ್ಲಂ ಪ್ರಶಾಂತ್, ಮಸೀದಿಪುರ ಸಿದ್ದರಾಮನಗೌಡ ಸೇರಿದಂತೆ ನೂರಾರು ಜನ ಮಠದ ಭಕ್ತರು ಈ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.









Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ