LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ವಿದ್ಯುಚ್ಛಕ್ತಿ {ತಿದ್ದುಪಡಿ) ಮಸೂದೆ ವಿರುದ್ಧ ಪ್ರತಿಭಟನೆ 

ಬಳ್ಳಾರಿ,ಮಾ.11:  ಕೇಂದ್ರ ಬಿಜೆಪಿ ಸರ್ಕಾರ ರೈತ-ಕಾರ್ಮಿಕರ ವಿರೋಧಿ, ಜನವಿರೋಧಿಯಾದ ವಿದ್ಯುಚ್ಛಕ್ತಿ {ತಿದ್ದುಪಡಿ) ಮಸೂದೆ ೨೦೨೫ ಅನ್ನು ಸಂಸತ್ತಿನ ಅಧಿವೇಶನದಲ್ಲಿ ಮಂಡಿಸುವುದರ ವಿರುದ್ಧ ಜಿಲ್ಲಾಧಿಕಾರಿ ಕಛೇರಿಯಲ್ಲಿ ಎಐಪಿಎಫ್,  ಎಐಕೆಕೆಎಂಎಸ್,  ಎಐಯುಟಿಯುಸಿ ಹಾಗೂ ಅಖಿಲ ಭಾರತ ವಿದ್ಯುತ್ ಗ್ರಾಹಕರ ಸಂಘ ಜಂಟಿಯಾಗಿ ಪ್ರತಿಭಟನೆ ನಡೆಸಿ, ಮಸೂದೆಯ ಪ್ರತಿಕೃತಿಯನ್ನು ದಹಿಸಲಾಯಿತು.


ಈ ಸಂದರ್ಭದಲ್ಲಿ ಎಐಪಿಎಫ್ ಜಿಲ್ಲಾ ನಾಯಕ ಡಾ||ಪ್ರಮೋದ್ ಮಾತನಾಡುತ್ತಾ, “ಮಸೂದೆಯ ನಿಬಂಧನೆಗಳು  ದೇಶಾದ್ಯಂತ ನೌಕರರು, ಕಾರ್ಮಿಕರು, ವಿದ್ಯುತ್ ಗ್ರಾಹಕರು, ರೈತರು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿವೆ. ಜನರ ತೆರಿಗೆ ಹಣದಿಂದ ನಿರ್ಮಿಸಲಾದ ಈ ಬೃಹತ್ ಉದ್ದಿಮೆಯನ್ನು,, ಮುಖ್ಯವಾಗಿ ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪೆನಿಗಳಿಗೆ  ನೀಡಲಾಗುತ್ತದೆ. ಖಾಯಂ ಉದ್ಯೋಗ ವಿಲ್ಲದೆ  ಸಂಕಷ್ಟದಲ್ಲಿರುವ ಗುತ್ತಿಗೆ ಕಾರ್ಮಿಕರ  ಬದುಕನ್ನು ಇನ್ನಷ್ಟು ಅಭದ್ರತೆಗೆ ತಳ್ಳಿದಂತಾಗುತ್ತದೆ. ಸೇವಾ ಪರಿಸ್ಥಿತಿಗಳ ಕಡಿತ, ಉದ್ಯೋಗ ಕಡಿತ ಇವು ತಲೆ ದೂರತ್ತವೆ. ಈ ಹಿನ್ನಲೆಯಲ್ಲಿ  ದೇಶವ್ಯಾಪಿ ಎಲ್ಲಾ  ವರ್ಗದ ಜನರು ಪ್ರಬಲ ಹೋರಾಟ ರೂಪಿಸುವ ಅಗತ್ಯ  ಇದೆ” ಎಂದರು.


ಅಖಿಲ ಭಾರತ ವಿದ್ಯುತ್ ಗ್ರಾಹಕರ ಸಂಘದ ಜಿಲ್ಲಾ ಮುಖಂಡ ಆರ್.ಸೋಮಶೇಖರ್‌ಗೌಡ ಮಾತನಾಡುತ್ತಾ, “ಹಲವಾರು ವಲಯಗಳಲ್ಲಿನ ಅನುಭವವು,  ಖಾಸಗೀಕರಣವು  ಹೆಚ್ಚಿನ ಸುಂಕಗಳು, ಲಾಭ-ಚಾಲಿತ ಸೇವಾ ವಿತರಣೆ ಮತ್ತು ಗ್ರಾಮೀಣ ಮತ್ತು ಕಡಿಮೆ ಲಾಭದಾಯಕ ಪ್ರದೇಶಗಳ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತದೆ ಎಂದು ತೋರಿಸಿದೆ. ಇದರಿಂದಾಗಿ ಸಾಮಾನ್ಯ ಗ್ರಾಹಕರಿಗೆ ಹೊರೆಯಾಗುತ್ತದೆ” ಎಂದರು.


ಎಐಕೆಕೆಎAಎಸ್ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡುತ್ತಾ, ರೈತರು ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಕೈಗೆಟುಕುವ ವಿದ್ಯುತ್ ಅನ್ನು ಹೆಚ್ಚಾಗಿ ಅವಲಂಬಿಸಿವೆ. ಖಾಸಗೀಕರಣವು ಸುಂಕಗಳನ್ನು ಹೆಚ್ಚಿಸಲು ಮತ್ತು ಪ್ರಸ್ತುತ ಕೃಷಿ ಮತ್ತು ಸಣ್ಣ ಕೈಗಾರಿಕೆಗಳನ್ನು ಬೆಂಬಲಿಸುವ ಸಬ್ಸಿಡಿಯನ್ನು ದುರ್ಬಲಗೊಳಿಸುತ್ತವೆ” ಎಂದರು.


ಈ ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾಧ್ಯಕ್ಷರಾದ ಎ. ದೇವದಾಸ್, ಉಪಾಧ್ಯಕ್ಷರಾದ ಎ. ಶಾಂತಾ, ಎಐಪಿಎಫ್ ನ ಕಿರಣ್ ಕುಮಾರ್, ಮುಖಂಡರಾದ ಹನುಮಪ್ಪ, ಶರ್ಮಾಸ್, ಸುರೇಶ್, ಚೇತನ್, ಮುರಳಿಕೃಷ್ಣ, ಮುಂತಾದವರು ಉಪಸ್ಥಿತರಿದ್ದರು. ವಿದ್ಯುತ್ ಗ್ರಾಹಕರ ಸಂಘದ ರಾಜಾ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್