ಅಥಣಿ: ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಪ್ರತಿದಿನ ಬೆಳಗಿನ ಜಾವವೇ ಓದುಗರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ವಿತರಕರ ಸೇವೆ ಅನನ್ಯ ಎಂದು ಅಥಣಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಿರಿಯ ಪತ್ರಕರ್ತ ಅಣ್ಣಾಸಾಬ ತೆಲಸಂಗ ಹೇಳಿದರು.
ಸ್ಥಳೀಯ ಅಥಣಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಪತ್ರಿಕಾ ವಿತರಕರ ದಿನಾಚರಣೆ’ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷ ರಾಕೇಶ ಮೈಗುರ ಮಾತನಾಡಿ ಮಾಧ್ಯಮ ರಂಗದ ಪ್ರಮುಖ ಕೊಂಡಿಯಾಗಿರುವ ವಿತರಕರು, ಸಮಾಜಕ್ಕೆ ಜ್ಞಾನ ಮತ್ತು ಮಾಹಿತಿಯನ್ನು ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.ಈ ವೇಳೆ ಮುಖ್ಯ ಅತಿಥಿಯಾಗಿ ಕರವೇ ತಾಲೂಕು ಅಧ್ಯಕ್ಷ ಶಬ್ಬೀರ್ ಸಾತಬಚ್ಚೆ ಹಾಗೂ ಪತ್ರಕರ್ತ ಡಾ. ಆರ್ ಎಸ್ ದೊಡ್ಡನಿಂಗಪ್ಪಗೋಳ ಮಾತನಾಡಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಅಥಣಿ ಪಟ್ಟಣ ನಿಷ್ಠಾವಂತ ಪತ್ರಿಕಾ ವಿತರಕರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಿವುಕುಮಾರ ಅಪರಾಜ, ಪರಶುರಾಮ ನಂದೇಶ್ವರ, ರಾಜು ಗಾಲಿ, ರಮೇಶ ಬಾದವಾಡಗಿ,ಚಂದ್ರಶೇಖರ ತೆವರಟ್ಟಿ,ಕಲ್ಲಪ್ಪ ಕನಾಳ,ಅಜೀತ ಕಾಂಬಳೆ,ಅಬ್ದುಲಜಬ್ಬಾರ್ ಚಿಂಚಲಿ,ರಾಜು ಕಾವೇರಿ, ಯಾಸಿನ್ ಜಾರೆ ಸೇರಿದಂತೆ ತಾಲೂಕಿನ ವಿವಿಧ ದಿನಪತ್ರಿಕೆಗಳ ವಿತರಕರು, ಮುದ್ರಣ ಮಾಧ್ಯಮದ ಸಿಬ್ಬಂದಿ ಹಾಗೂ ಕಾರ್ಯನಿರತ ಪತ್ರಕರ್ತರು ಉಪಸ್ಥಿತರಿದ್ದು, ವಿತರಕರ ಶ್ರಮವನ್ನು ಸ್ಮರಿಸಿದರು.