ಘಟಪ್ರಭಾ. ಪಟ್ಟಣದ ಭಜಂತ್ರಿ ಸಮಾಜದ ವತಿಯಿಂದ ನೂಲ ಚಂದಯ್ಯ ಅವರ ಜಯಂತಿಯನ್ನು ಮತ್ತು ಕರೆಮ್ಮಾ ದೇವಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ
ಸಾನಿಧ್ಯವನ್ನು ಹೊಸ ಮಠದ ಪೂಜ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ನೂಲ ಚಂದಯ್ಯ ಅವರ ಇತಿಹಾಸವನ್ನು ಸುಂದರವಾಗಿ ವಿವರಿಸಿದರು.
ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಲ್ಲಾಪುರ ಅರ್ಬನ್ ಬ್ಯಾಂಕ ಅಧ್ಯಕ್ಷ ರಮೇಶ ತುಕ್ಕಾನಟ್ಟಿ, ಯುವ ನಾಯಕ ನಾಗರಾಜ ಜಂಬ್ರಿ ದಲಿತರ ಪರ ಹೋರಾಟಗಾರರಾದ ಅರ್ಜುನ ಗಂಡವ್ವಗೋಳ,ಕೃಷ್ಣಾ ಗಂಡವ್ವಗೋಳ, ಭಜಂತ್ರಿ ಸಮಾಜದ ಹಣಮಂತ ಭಜಂತ್ರಿ,ಅಶೋಕ ಭಜಂತ್ರಿ, ಪರಸಪ್ಪಾ ಬಜಂತ್ರಿ, ಯಲ್ಲಪ್ಪ ಭಜಂತ್ರಿ ಸೇರಿದಂತೆ ಸರ್ವ ಸಮಾಜಗಳ ಮುಖಂಡರು ಭಾಗವಹಿಸಿ ದ್ದರು.