LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಮುದ್ದೇಬಿಹಾಳದಲ್ಲಿ ನೂಲಿಯ ಚಂದಯ್ಯ, ನಾರಾಯಣಗುರು ಜಯಂತಿ ಆಚರಣೆ

ಮುದ್ದೇಬಿಹಾಳ: ಪಟ್ಟಣದಲ್ಲಿ ನೂಲಿಯ ಚಂದಯ್ಯನವರ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯೋತ್ಸವವನ್ನು ಶುಕ್ರವಾರ ಈಡಿಗ ಹಾಗೂ ಬಜಂತ್ರಿ ಸಮಾಜದ ವತಿಯಿಂದ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ಆಲಮಟ್ಟಿ ರಸ್ತೆಯಲ್ಲಿರುವ ಬ್ರಹ್ಮಶ್ರೀ ನಾರಾಯಣಗುರುಗಳ ವೃತ್ತವನ್ನು ಅಲಂಕರಿಸಿ, ಈಡಿಗ ಸಮಾಜದ ಹಿರಿಯರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಿಹಿ ಹಂಚುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಅದೇ ರೀತಿ ತಂಗಡಗಿ ರಸ್ತೆಯಲ್ಲಿರುವ ನೂಲಿಯ ಚಂದಯ್ಯನವರ ವೃತ್ತದಲ್ಲಿ ಬಜಂತ್ರಿ ಸಮಾಜದ ವತಿಯಿಂದ ಸಕಲ ವಾದ್ಯಮೇಳಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಮೆಹಬೂಬ ಗೊಳಸಂಗಿ, ಈಡಿಗ ಸಮಾಜದ ಮುಖ್ಯಸ್ಥ ಎ. ಗಣೇಶ, ಟಿ. ವಿಜಯಭಾಸ್ಕರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಕಾಮರಾಜ ಬಿರಾದಾರ, ಎಪಿಎಂಸಿ ಮಾಜಿ ಉಪಾಧ್ಯಕ್ಷ ವೈ.ಎಚ್. ವಿಜಯಕರ, ಗುರುಲಿಂಗಪ್ಪಗೌಡ ಬಿರಾದಾರ, ಸಿ.ಜಿ. ವಿಜಯಕರ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಪ್ರಭುರಾಜ ಕಲಬುರ್ಗಿ, ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಗುರುಣ್ಣ ತಾರನಾಳ, ರಾಜೇಂದ್ರ ರಾಯಗೊಂಡ, ಪರಶುರಾಮ ಹಡಲಗೇರಿ, ಸಿಕಂದರ ಜಾನ್ವೇಕರ್, ಬಜಂತ್ರಿ ಸಮಾಜದ ತಾಲೂಕಾಧ್ಯಕ್ಷ ನಾಗೇಶ ಬಜಂತ್ರಿ, ಗೋವಿಂದ ಬಜಂತ್ರಿ, ಹಣಮಂತ ಭಂಟನೂರ, ಸಿಂಗಪ್ಪ ಬಜಂತ್ರಿ, ಸಾಬಣ್ಣ ಬಜಂತ್ರಿ (ಮುದ್ದೇಬಿಹಾಳ), ಭೀಮಣ್ಣ ಬಜಂತ್ರಿ, ಹುಲಗಪ್ಪ ಬಜಂತ್ರಿ, ಸಾಬಣ್ಣ ನಾಗಬೇನಾಳ, ಹನಮಂತ ರಕ್ಕಸಗಿ, ಯಂಕಪ್ಪ ಬಜಂತ್ರಿ ಸೇರಿದಂತೆ ರುಡಗಿ ಹಾಗೂ ಚವನಭಾವಿ ಗ್ರಾಮದ ಈಡಿಗ ಸಮಾಜದ ಮುಖಂಡರು ಮತ್ತು ಸಮಾಜದ ಬಾಂಧವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಾಲೂಕಿನಾದ್ಯಂತ ರಾಖಿ ಕಟ್ಟಿದ ಸಹೋದರಿಯರು*ಬೆಳಗಾವಿ ಹವ್ಯಕ ಸಂಘದಿಂದ ಭಕ್ತಿಭಾವದ ಯಜ್ಞೋಪವೀತ ಧಾರಣೆ, ರಕ್ಷಾ ಬಂಧನ ಕಾರ್ಯಕ್ರಮ*ನೀಲವ್ವ ಲಕ್ಕಪ್ಪ ಧೋನಿ ನಿಧನ.ನುಲಿಯ ಚಂದಯ್ಯನವರ ಕಾಯಕದ ಆದರ್ಶಗಳು ಸಮಾಜಕ್ಕೆ ದಾರಿದೀಪ: ಐ.ಜಿ. ಸನದಿಜಿಲ್ಲೆ ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಹೋರಾಟ-ಕೂಚಬಾಳವಿಜೃಂಭಣೆಯಿಂದ ಶ್ರೀ ಶಿವಶರಣ ನೂಲಿ ಚಂದಯ್ಯನವರ ಜಯಂತಿ ಆಚರಣೆಕಾಗವಾಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ನ್ಯಾಯಾಧೀಶೆ,ತಹಶೀಲ್ದಾರ್‌ರಿಂದ ಆಕಸ್ಮಿಕ ಭೇಟಿಝಳಕಿ : ಅಣ್ಣ ನನ್ನ ಮಾನ, ಪ್ರಾಣ ರಕ್ಷಣೆ ಕೊಡುವ ಸಂಕೇತ ರಕ್ಷಾ ಬಂಧನ ರಾಘವೇಂದ್ರ ಕಾಪಸೆ.·  ಇಂಡಿ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ: ತಹಶೀಲ್ದಾರ್‌ಗೆ ರೈತ ಸಂಘ ಮನವಿಕೊಪ್ಪಳ ಸಿಟಿ ಹೊರವಲಯದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳ ಖುದ್ದು ಪರಿಶೀಲಿಸಿದ ಜಿಲ್ಲಾಧಿಕಾರಿಗಳು