LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಮುದ್ದೇಬಿಹಾಳ: ಶಾಂತಿಯುತ ಗಣೇಶೋತ್ಸವ ಆಚರಣೆಗೆ ಪೋಲೀಸ್ ಇಲಾಖೆ ಕರೆ

ಮುದ್ದೇಬಿಹಾಳ: ಪ್ರತಿಯೊಂದು ಕಾರ್ಯಕ್ರಮಕ್ಕೂ ಮೊದಲು ಪೂಜೆ ಸಲ್ಲಿಸಿ ನೆನೆಯುವ ಗಣೇಶನ ಹಬ್ಬ ಬಂದಿದೆ. ಈ ಹಬ್ಬವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಚರಿಸಲು ಗಣೇಶೋತ್ಸವ ಸಮಿತಿಗಳು ಸಹಕರಿಸಬೇಕು ಎಂದು ಸಿಪಿಐ ಮೊಹಮ್ಮದ ಫಸಿಯುದ್ಧೀನ್ ಹೇಳಿದರು. 
ಪಟ್ಟಣದ ಪೊಲೀಸ್ ಠಾಣಯಲ್ಲಿ ಗಣೇಶೋತ್ಸವದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಮೊದಲನೇ ಹಂತದ ಶಾಂತಿಪಾಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶೋತ್ಸವವು ಎಲ್ಲರನ್ನೂ ಒಗ್ಗೂಡಿಸುವ ಹಬ್ಬವಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿಯುತವಾಗಿ ಆಚರಿಸಬೇಕು. ಗಣೇಶ ಮೂರ್ತಿ ಪ್ರತಿ?ಪನೆ, ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.
ಈ ವೇಳೆ ನೂತನವಾಗಿ ಅಧಿಕಾರ ವಹಿಸಿಕೊಂಡ ಪಿಎಸ್‌ಐ ವಿಜಕುಮಾರ ತಳವಾರ ಮಾತನಾಡಿ, ಗಣೇಶೋತ್ಸವ ಸಮಿತಿಗಳು ಮುಂಚಿತವಾಗಿ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳಬೇಕು. ಮೆರವಣಿಗೆ ಸಂದರ್ಭದಲ್ಲಿ ನಿಗದಿತ ಮಾರ್ಗ ಹಾಗೂ ಸಮಯವನ್ನು ಪಾಲಿಸುವುದರ ಜೊತೆಗೆ, ಯಾವುದೇ ರೀತಿಯ ಗಲಾಟೆ ಅಥವಾ ಸಂಘ?ಕ್ಕೆ ಅವಕಾಶ ನೀಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳಿಗೆ ಕಿವಿಗೊಡದೆ, ಅನುಮಾನಾಸ್ಪದ ಬೆಳವಣಿಗೆಗಳು ಕಂಡುಬಂದರೆ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು. ಕೆಲವು ಸಂದರ್ಭಗಳಲ್ಲಿ ಪೊಲೀಸರೇ ಬರಬೇಕು ಎಂದು ಕಾಯದೇ, ನಾಗರಿಕರು ಸಹ ಪೊಲೀಸರಂತೆ ಜವಾಬ್ದಾರಿಯಿಂದ ಕೆಲಸ ಮಾಡುವಂತೆ ತಿಳಿಸಿದರು. 
ಹಿಂದೂ ಕಾರ್ಯಕರ್ತ ಬಸಯ್ಯ ನಂದಿಕೇಶ್ವರಮಠ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ವೇಳೆ ಬ್ರಿಟೀಷರು ಭಾರತೀಯರಿಗೆ ಗುಂಪು ಸೇರದಂತೆ ಹೇರಿದ್ದ ನಿಷೇಧಕ್ಕೆ ಪ್ರತಿ ತಂತ್ರವಾಗಿ ಜನರನ್ನು ಒಗ್ಗೂಡಿಸುವ ಹಾಗೂ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ವೇದಿಕೆಯಾಗಿ ಬಹಿರಂಗ ಆಚರಣೆಗೆ ಬಂದಿದ್ದ ಗಣೇಶೋತ್ಸವ ಇಂದು ಕೆಲವೆಡೆ ಗಣೇಶನ ಟೆಂಟ್‌ಗಳಲ್ಲಿ ಅಸಹ್ಯಕರ ಹಾಡುಗಳನ್ನು ಹಾಕುವುದು, ಮೇಲೆ ಗಣೇಶನನ್ನು ಪ್ರತಿ?ಪಿಸಿ ಕೆಳಗೆ ಇಸ್ಪೀಟ್ ಆಟವಾಡುವುದು ಸೇರಿದಂತೆ ಹಬ್ಬದ ಪಾವಿತ್ರ್ಯಕ್ಕೆ ಧಕ್ಕೆ ತರುವ ಚಟುವಟಿಕೆಗಳು ಅಲ್ಲಲ್ಲಿ ನಡೆಯುತ್ತಿವೆ. ಇಂಥವರು ಗಣೇಶೋತ್ಸವದ ಪ್ರಾಮುಖ್ಯತೆ ಅರಿತುಕೊಂಡು ಈ ವ?ದಿಂದ ಎಲ್ಲ ಕೆಟ್ಟ ಚಟಗಳನ್ನು ಬಿಡುತ್ತೇವೆ ಎಂದು ಸಂಕಲ್ಪ ಮಾಡಿ ಗಣೇಶನನ್ನು ಪ್ರತಿಷ್ಟಾಪಿಸಬೇಕು. ಅಂದಾಗ ಮಾತ್ರ ಹಬ್ಬಕ್ಕೂ, ನಮ್ಮ ಸಂಪ್ರದಾಯಕ್ಕೂ ನಿಜವಾದ ಶೋಭೆ ಬರುತ್ತದೆ ಎಂದರು.
ಗಣೇಶೋತ್ಸವ ಮಹಾ ಮಂಡಳದ ಪ್ರಮುಖರಾದ ಸಿದ್ಧರಾಜ ಹೊಳಿ ಮಾತನಾಡಿ, ಸಾಧ್ಯವಾದಷ್ಟು ಮಣ್ಣಿನ ಗಣಪತಿಯನ್ನು ಕೂರಿಸಲು ಎಲ್ಲರೂ ಮುಂದಾಗಬೇಕು. ಮಂಡಳದ ವತಿಯಿಂದ ಪ್ರತಿ?ಪಿಸಲಾಗುವ ಗಣೇಶ ಮೂರ್ತಿಯನ್ನು ಏಳು ದಿನಗಳ ಕಾಲ ಪ್ರತಿ?ಪಿಸಿ, ಪ್ರತಿದಿನ ವಿಶೇ? ಪೂಜೆ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕೊನೆಯ ದಿನ ವಿಶೇಶ ಬೌದ್ಧಿಕ ಇರಲಿದೆ. ಜೊತೆಗೆ ಪೊಲೀಸ್, ಅಗ್ನಿಶಾಮಕ, ಪುರಸಭೆ, ಕೆಇಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವದ ಸನ್ಮಾನ ನೀಡಲಿದ್ದೇವೆ. ಎಲ್ಲರೂ ಭಾಗಿಯಾಗಿವಂತೆ ಮನವಿ ಮಾಡಿಕೊಂಡರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಸಂಜು ಬಾಗೇವಾಡಿ, ಉದಯಸಿಂಗ್ ರಾಯಚೂರ, ಬಾಬಾ ಗುಡ್ನಾಳ ಮಾತನಾಡಿದರು. ಕೃಷ್ಣ ಬಿಳೇಭಾವಿ, ಪರಶುರಾಮ ನಾಲತವಾಡ, ಸದಾಶಿವ ಮಠ, ಸಂಗಣ್ಣ ನಾಲತವಾಡ, ಕಾಶಿನಾಥ ಬಿರಾದಾರ, ಸಂಗಣ್ಣ ಮೇಲಿನಮನಿ, ಆನಂದ ಬಿಜ್ಜೂರಮಠ, ಹುಸೇನ ಮುಲ್ಲಾ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು. ಕ್ರೈಂ ಪಿಎಸ್‌ಐ ರಂಗಪ್ಪ ಭಂಗಿ ನಿರ್ವಹಿಸಿದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಸ್ಥಳ ಯೋಜನೆ ವತಿಯಿಂದ ಉಚಿತ ಅರೋಗ್ಯ ತಪಾಸಣೆ ಶಿಬಿರ.ವಿಶ್ವ ಪಿಜಿಯೋಥೆರಪಿ ದಿನ ಆಚರಣೆ.ಘಟಪ್ರಭಾದಲ್ಲಿ ಗಣೇಶ ಹಬ್ಬದ  ಪೂರ್ವಭಾವಿ ಸಭೆಜೀನ್ಸ್ ರಫ್ತುದಾರರಿಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ನೆರವು: ಜಂಟಿ ನಿರ್ದೇಶಕ ಬಿ. ವಿಠಲರಾಜದೇವರಹಿಪ್ಪರಗಿ, ತಾಳಿಕೋಟಿ ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಲು ಸೆ.೮ರಂದು ಬೃಹತ್ ಪ್ರತಿಭಟನೆಭಕ್ತಿ ಭಾವದಿಂದ ಶ್ರೀ ವರಬಸವೇಶ್ವರ ಸ್ವಾಮಿ ರಥೋತ್ಸವಎತ್ತಿನ ಬೂದಿಹಾಳ ಗ್ರಾಮದ ಯುವಕರು ಕರವೇ ಶಿವರಾಮೇಗೌಡ ಬಣ ಸೇರ್ಪಡೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹ: ಬಳ್ಳಾರಿಯಲ್ಲಿ ಗುತ್ತಿಗೆ ಕಾರ್ಮಿಕರ ಪತ್ರ ಚಳುವಳಿಬಿಜೆಪಿ ನಾಯಕರ ಜೊತೆ ಸಾವಿರಾರು ಕಾರ್ಯಕರ್ತರು ಹೆಜ್ಜೆ; ವಾಲ್ಮೀಕಿ ಪುತ್ಥಳಿ ವಿಚಾರದಲ್ಲಿ ಶ್ರೀರಾಮುಲು ಸ್ಪಷ್ಟನೆಕೃಷ್ಣ ವೇಷ ಧರಿಸಿ ಕೃಷ್ಣಾಷ್ಟಮಿ ಆಚರಿಸಿದ 1 ವರ್ಷದ  ಧ್ರುವ ಅಮ್ಮಿನಭಾವಿ