ಘಟಪ್ರಭಾ.ಪ್ರತಿವರ್ಷದಂತೆ ಈ ವರ್ಷವೂ ನಡೆಯುವ ಶ್ರೀ ಗಣೇಶ್ ಉತ್ಸವದ ಅಂಗವಾಗಿ ಘಟಪ್ರಭಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಹಿರಿಯರ ಶಾಂತಿ ಸಮಿತಿಯ ಸಭೆಯು ಪೋಲೀಸ್ ಇನಸ್ಪೆಕ್ಟರ್ ಎಚ್ ಡಿ ಮುಲ್ಲಾ ಅವರ ನೇತೃತ್ವದಲ್ಲಿ ನಡೆಯಿತು.
ಸಾರ್ವಜನಿಕರ ಪರವಾಗಿ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ಮಹಾಜನ, ಕುಮಾರ್ ಹುಕ್ಕೇರಿ ಪುಟ್ಟು (ವೀರಭದ್ರ ) ಖಾನಾಪುರೆ ಮಾತನಾಡಿ ಪೋಲಿಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಸದಾ ಇರುತ್ತದೆ ಇಲಾಖೆ ಸಹ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಇನ್ಸಪೆಕ್ಟರ ಎಚ್ ಡಿ ಮುಲ್ಲಾ ಮಾತನಾಡಿ ಸಾರ್ವಜನಿಕರಿಗೆ ವಯಸ್ಸಾದ ನಾಗರಿಕರಿಗೆ ಮಕ್ಕಳಿಗೆ ಮಹಿಳೆಯರಿಗೆ ತೊಂದರೆ ಆಗದಂತೆ ಮತ್ತು ವಾಹನ, ಆಂಬುಲೆನ್ಸ್ ಸಾರಿಗೆಗೆ ತೊಂದರೆ ಆಗದಂತೆ ಗಣೇಶ ಉತ್ಸವ ಆಚರಿಸಲು ಕರೆ ನೀಡಿದರು.
ರಾಮಣ್ಣಾ ಹುಕ್ಕೇರಿ,ಕಾಡಪ್ಪಾ ಕರೋಶಿ ಮಾರುತಿ ದುಂಡಪ್ಪಾ ಹುಕ್ಕೇರಿ, ಶೆಟ್ಟೆಪ್ಪಾ ಗಾಡಿವಡ್ಡರ, ರೆಹಮಾನ್ ಮೊಕಾಶಿ ಆಪ್ಪಾಸಾಬ ಮುಲ್ಲಾ, ರಂಜಾನ್ ಖೋಜಾ, ಶಾಂತು ಕಟ್ಟೀಮನಿ, ಭರಮಣ್ಣಾ ಗಾಡಿವಡ್ಜರ, ಸೇರಿದಂತೆ ಘಟಪ್ರಭಾ ಠಾಣೆ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.