ಘಟಪ್ರಭಾ. ಸಮೀಪದ ಧೂಪದಾಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಭಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಡರೋಗಿಗಳಿಗೆ ಎಲ್ಲ ತರಹದ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ,ಬಿಪಿ ಶುಗರ್ ತಪಾಸಣೆ ಶಿಬಿರ ನಡೆಸಲಾಯಿತು.
ಕರವೇ ರೈತ ಘಟಕ ಜಿಲ್ಲಾಧ್ಯಕ್ಷ ರೆಹಮಾನ್ ಮೊಕಾಶಿ ಮಾತನಾಡುತ್ತಾ ಧರ್ಮಸ್ಥಳ ಮಂಜುನಾಥೇಶ್ವರ ಹೆಸರಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಹಮ್ಮಿಕೊಳ್ಳುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ, ಇವತ್ತಿನ ಈ ಕಾಲದಲ್ಲಿ ಹೆಣ್ಣು ಮಕ್ಕಳು ಆರ್ಥಿಕ ಸ್ವಾವಲಂಬಿ ಆಗಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಹಳಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದು ಇವು ಜನೋಪಕಾರಿ ಯೋಜನೆ ಆಗಿವೆ ಎಂದರು.
ಕರವೇ ತಾಲ್ಲೂಕು ಅದ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ ಕರವೇ ರೈತ ಘಟಕ ತಾಲ್ಲೂಕು ಅದ್ಯಕ್ಷ ರವಿ ನಾವಿ ಮಾತನಾಡಿ ಇವತ್ತಿನ ಕಾಲದಲ್ಲಿ ಬೆಳೆಗಳಿಗೆ ಔಷಧ ಸಿಂಪಡಣೆಯಿಂದ ಬಿಪಿ ಶುಗರ್ ಅಂತಹ ರೋಗಗಳು ಬರುತ್ತಿರುವುದರಿಂದ ಎಲ್ಲರೂ ಆರೋಗ್ಯ ತಪಾಸಣಾ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಲಾಲಬೀ ಅಂಕಲಗಿ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜು ಗಾಡಿವಡ್ಡರ್, ಯೋಜನಾಧಿಕಾರಿಗಳಾದ ರೋಹಿತ್ ಹೆಚ್, ಕರಿಯಪ್ಪ ಧರ್ಮಟ್ಟಿ, ಜಯರತ್ನ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಅಮೃತ್ ಪಾಟೀಲ, ವಿಠ್ಠಲ ಗಾಡಿವಡ್ಡರ,ಆರೋಗ್ಯ ಇಲಾಖೆಯ ಸಿ ಎಚ್ ಓ ರಾಜು ಕಣಗಲ್ , ರಾಯಪ್ಪ ಬಂಡಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಾಂತ ಅಂಗರಗಟ್ಟಿ, ನಿಧಿ ನಿರ್ಮಲ, ಶ್ರೀದೇವಿ, ಆಶಾ ಕಾರ್ಯಕರ್ತರು ಧರ್ಮಸ್ಥಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.