Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಾಯಿ ಚಾಮುಂಡೇಶ್ವರಿ ಆರಾಧನೆಯಿಂದ ಸಂಕಲ್ಪ ಸಿದ್ಧಿ ಶತಸಿದ್ಧ: ಆರಾದ್ರಿಮಠ ಶಾಸ್ತ್ರಿಗಳು


ಬೈಲಹೊಂಗಲ-ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ಆರಾಧನೆಯಿಂದ ಭಕ್ತರ ಸಕಲ ಇಷ್ಟಾರ್ಥಗಳು,ಸಂಕಲ್ಪ ಪೂರ್ಣಗೊಳ್ಳುವುದು ನೂರಕ್ಕೆ ನೂರರಷ್ಟು ಸಿದ್ಧವೆಂದು ಧಾರ್ಮಿಕ ದತ್ತಿ ಪರಿಷತ್ ಮುಜರಾಯಿ ಇಲಾಖೆ ಸದಸ್ಯರಾದ ಡಾ.ಮಹಾಂತಯ್ಯ ಆರಾದ್ರಿಮಠ ಶಾಸ್ತ್ರಿಗಳು ನುಡಿದರು.


      ಪಟ್ಟಣದ ಬಸ್ ನಿಲ್ದಾಣದ ಹಿಂದುಗಡೆಯ ಕುಲಕರ್ಣಿ ಗಲ್ಲಿಯ ಹುಡೇದ ಬಾವಿ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ತಾಯಿ ಚಾಮುಂಡೇಶ್ವರಿ ದೇವಸ್ಥಾನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ ಇಂದಿನ ಮೊಬೈಲ ಯುಗದಲ್ಲಿ ಯುವ ಪೀಳಿಗೆಯು ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಿಸುವ ಭರದಲ್ಲಿ ನಮ್ಮ ಸನಾತನ

ಧರ್ಮದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಆದರೆ ಕುಲಕರ್ಣಿ ಗಲ್ಲಿಯ ಯುವಕರ ತಂಡವೊಂದು ಸಮಾನ ಮನಸ್ಕರಾಗಿ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ ನಿರ್ಮಿಸುವುದರ ಮೂಲಕ ಧರ್ಮ ಜಾಗೃತಿಯ ಕಡೆಗೆ ಗಮನ ಹರಿಸಿದ್ದು ವಿಶೇಷ.


ನವರಾತ್ರಿ ಪವಿತ್ರ ಸಂದರ್ಭದಲ್ಲಿ ಭಕ್ತರಿಂದ ದೇವಾಲಯ ನಿರ್ಮಿಸಿಕೊಂಡು ಈ ಭಾಗದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರವಾಗಿಸಲು ಸಂಕಲ್ಪ ಮಾಡಿರುವ ಮುನ್ಸೂಚನೆ ನೀಡಿದ್ದಾಳೆ.ತಾಯಿ ಚಾಮುಂಡೇಶ್ವರಿಯನ್ನು ನಿರ್ಮಲ ಭಕ್ತಿಯಿಂದ ಆರಾಧಿಸುವ ಮೂಲಕ ಭಕ್ತರು ಅಮ್ಮನವರ ಅನುಗ್ರಹಕ್ಕೆ ಪಾತ್ರರಾಗುವಂತೆ ತಿಳಿಸಿದರು.


        ಸಾನಿಧ್ಯ ವಹಿಸಿದ್ದ ವೇ. ಮೂ. ಮಹಾಂತಯ್ಯ ತೆಗ್ಗಿನಮಠ ಶಾಸ್ತ್ರಿಗಳು ಮಾತನಾಡಿ ಸನಾತನ ಹಿಂದೂ ಧರ್ಮದಲ್ಲಿ ನವರಾತ್ರಿ ದಿನಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ.ಪುರಾಣದಲ್ಲಿ ಹೇಳುವ ಹಾಗೆ ದೇವತೆಗಳ ಕೋರಿಕೆಯಂತೆ ಮಹಿಷಾಸುರನನ್ನು ತಾಯಿ ಚಾಮುಂಡೇಶ್ವರಿಯು ಸಂಹರಿಸಿ ದೇವತೆಗಳಿಗೆ ಅನುಗ್ರಹಿದ ಹಾಗೆ ನವರಾತ್ರಿಯಲ್ಲಿ ಅಮ್ಮನವರ ಆರಾಧನೆಯಿಂದ ನಮ್ಮ ಕಷ್ಟಗಳು ಮಂಜಿನಂತೆ ಕರಗುವುದು ನಿಶ್ಚಿತ.


ಚಾಮುಂಡೇಶ್ವರಿ ಅಮ್ಮನವರು ಈ ಭಾಗದಲ್ಲಿ ನೆಲೆನಿಂತಿರುವುದು ಈ ಭಾಗದ ಭಕ್ತರ ಪೂರ್ವಜನ್ಮದ ಪುಣ್ಯದ ಫಲವೆಂದು ನುಡಿದರು.   ವೇ.ಮೂ.ಸಂಜಯ ಪತ್ರಿಮಠ ಶಾಸ್ತ್ರಿಗಳು ಅಮ್ಮನವರ ಗದ್ದುಗೆಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ,ವಿವಿಧ ಪುಷ್ಪಗಳಿಂದ ಅಲಂಕರಿಸಿ ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ಪೂಜಾ ಕೈoಕರ್ಯ ನೆರವೇರಿಸಿದರು.

       ಇದೇ ವೇಳೆ ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಬೆಂಗಳೂರಿನ ಶನೇಚ್ಚ್ಚರ ಮಂದಿರದ ಅರ್ಚಕರಾದ ಬಸವರಾಜ ಹಿರೇಮಠ ಶಾಸ್ತ್ರೀಗಳು,ಹಿರಿಯರಾದ ಬಾಳಪ್ಪ ಕುರುಬರ,ಮುಖಂಡರಾದ ಸಿದ್ದು ಕಣಬರಗಿ,ಸಂಗಮೇಶ ಹುಲಗನ್ನವರ,ಬಸವರಾಜ ಮಾಟೊಳ್ಳಿ,ಶಿವು ಜೋಳದ,ಕಿರಣ ಶಿರವಂತಿ,ಶ್ರೀಶೈಲ ಶಿಲ್ಲೇದಾರ, ಸಿದ್ದು ಶಿರವಂತಿ,ಭೀಮಸೇನ ಕಂಬಾರ,ಕಿರಣ ಚಪಳಿ ಸೇರಿದಂತೆ ಚಾಮುಂಡೇಶ್ವರಿ ದೇವಸ್ಥಾನದ ಕಮಿಟಿ ಸದಸ್ಯರು, ಸದ್ಭಕ್ತರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ