LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Koppal

*ಸಚಿವ ರಾಯರಡ್ಡಿಯವರು ಯಾವುದೇ ಸಮುದಾಯದ ವಿರೋಧಿಗಳಲ್ಲಾ : ಖಾಸಿಂ ಸಾಬ ತಳಕಲ್,,* 

ಕುಕನೂರು : ಸಚಿವ ರಾಯರಡ್ಡಿಯವರು ನಮ್ಮ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹದಲ್ಲಿ ಇಸ್ಲಾಂ ಧರ್ಮವೇ ಶ್ರೇಷ್ಠ ಎಂದು ಹೇಳಿರುವ ಹೇಳಿಕೆಯಲ್ಲಿ ತಪ್ಪೆನಿಲ್ಲಾ, ಸಚಿವ ರಾಯರಡ್ಡಿಯವರು ಮುಸ್ಲಿಂ ಸಮುದಾಯದ ಮದುವೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಸಮುದಾಯ ಹೊಗಳಿದ್ದಾರೇ ಹೊರತು, ಯಾವುದೇ ಸಮಾಜ, ಸಮುದಾಯಗಳು ಶ್ರೇಷ್ಠವಲ್ಲಾ ಎಂದು ಹೇಳಿಲ್ಲಾ, ಇದನ್ನು ರಾಜಕೀಯ ಉದ್ದೇಶವನ್ನಿಟ್ಟುಕೊಂಡು ಕೇಲವೊಂದಿಷ್ಟು ಜನ ಸಾಮಾಜಿಕ ಜಾಲ ತಾಣಗಳಲ್ಲಿ ಇದನ್ನು ತಿರುಚಲಾಗಿದೆ ಎಂದು ಖಾಸಿಂಸಾಬ ತಳಕಲ್ ಅಭಿಪ್ರಾಯ ಮಂಡಿಸಿದರು.
ಅವರು ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಕರೆದ ಸಚಿವ ರಾಯರಡ್ಡಿಯವರ ಹೇಳಿಕೆ ಕುರಿತು ಸ್ಪಷ್ಟಿಕರಣ ನೀಡಿ ಮಾತನಾಡಿ ಸಚಿವ ರಾಯರಡ್ಡಿಯವರು ದೂರ ದೃಷ್ಠಿ ನಾಯಕರಾಗಿದ್ದು, ಇವರು ಕ್ಷೇತ್ರದಲ್ಲಿ ಕೇವಲ ಒಂದೇ ಸಮುದಾಯದ ಅಭಿವೃದ್ದಿ ಮಾಡಿಲ್ಲಾ ಎಲ್ಲಾ ಸಮುದಾಯಗಳ ಬಗ್ಗೆ ಕಾಳಜಿ ಹೊಂದಿದ್ದಾರೆ. ಕೇವಲ ಮುಸ್ಲಿಂ ಸಮುದಾಯವಲ್ಲದೇ ಎಲ್ಲಾ ಸಮಾಜಗಳ ದೇವಸ್ಥಾನ, ಮಹನೀಯರನ್ನೊಳಗೊಂಡ ಮೂರ್ತಿಗಳ ಅಭಿವೃದ್ದಿಗೆ ಮಹತ್ವ ನೀಡಿದ್ದಾರೆ ಎಂದರು.
ಕೇಲವೊಂದಿಷ್ಟು ಜನ ಓಟ್ ಬ್ಯಾಂಕ್ ಗಾಗಿ ಸಮುದಾಯ ಓಲೈಕೆ ಮಾಡಲು ಈ ರೀತಿ ಹೇಳಿಕೆ ನೀಡಿದ್ದಾರೆ, ಎನ್ನುವುದು ಸತ್ಯಕ್ಕೆ ದೂರವಾದ ಮಾತಾಗಿದೆ ಎಂದರು.
ಯಾವುದೇ ಸಮುದಾಯಗಳ ಕಾರ್ಯಕ್ರಮಕ್ಕೆ ಯಾರೇ ಹೋದರು, ಆ ಸಮುದಾಯ ಮತ್ತು ಸಮಾಜಗಳನ್ನು ಹೊಗಳಲೇ ಬೇಕು, ಆದರೆ ಇದರಲ್ಲಿ ಯಾವ ಸಮಾಜವನ್ನು ನಿಂದಿಸುವ ಉದ್ದೇಶದಿಂದ ಅವರು ಮಾತನಾಡಿಲ್ಲಾ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ರಫೀಸಾಬ ಹಿರೇಹಾಳ, ರೆಹಮಾನ್ ಸಾಬ ಮಕ್ಕಪ್ಪನವರ್, ರಾಜಾಸಾಬ ಕುದರಿ, ಶಿರಾಜ್ ಕರಮುಡಿ, ರಷೀದ್ ಸಾಬ ಉಮಚಗಿ, ಅಲ್ಲಾವುದ್ದಿನ್ ಯಮ್ಮಿ, ನೂರಬಾಬಾ ಗುಡಿಹಿಂದಲ್, ವಾಹಿದ್ ಪಾಷ ಕಾಯಗಡ್ಡಿ ಸೇರಿದಂತೆ ಇನ್ನಿತರರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್ರನ್ನ ಅಜರಾಮರ: ಮಲ್ಲಿಕಾರ್ಜುನ ಅರಬಿ೧೦೦ ಮೀಟರ್ ಓಟದಲ್ಲಿ ದ್ವಿತೀಯ: ಜಿಲ್ಲಾ ಮಟ್ಟಕ್ಕೆ ಚೇತನ ನ್ಯಾಮಗೌಡಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪ