Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಲ್ಲಾಪೂರ ಅರ್ಬನ ಬ್ಯಾಂಕ ವಾರ್ಷಿಕ 27.17  ಲಕ್ಷ ರೂ. ಲಾಭ: ರಮೇಶ ತುಕ್ಕಾನಟ್ಟಿ 

ಘಟಪ್ರಭಾ. ಬ್ಯಾಂಕಿನ ಆಡಳಿತ ಮಂಡಳಿಯ ಸಹಕಾರ ಮತ್ತು ಸಿಬ್ಬಂದಿ ವರ್ಗದ ಶ್ರಮ ಶೇರು ಸದಸ್ಯರ ಸಹಕಾರದಿಂದ  ಮಲ್ಲಾಪೂರ ಅರ್ಬನ ಬ್ಯಾಂಕು 2023-2024 ನೇ  ಸಾಲಿನಲ್ಲಿ  ನಿವ್ವಳ ರೂ. 27.17 ಲಕ್ಷ ಲಾಭ ಗಳಿಸಿ ಅಪಾರ ಸಾಧನೆ ಮಾಡಿದೆ ಎಂದು ದಿ  ಮಲ್ಲಾಪೂರ ಅರ್ಬನ ಕೋ ಅಪ್ ಬ್ಯಾಂಕ ನಿ. ಘಟಪ್ರಭಾ ಇದರ ಅಧ್ಯಕ್ಷರಾದ ರಮೇಶ ಮಲ್ಲಪ್ಪ. ತುಕ್ಕಾನಟ್ಟಿ ಹೇಳಿದರು.


ಅವರು ಶುಕ್ರವಾರದಂದು ನಡೆದ 2023-2024 ನೇ ಸಾಲಿನ 58 ನೇ  ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ ಬ್ಯಾಂಕ ಎಲ್ಲ ಹಂತಗಳಲ್ಲಿ ಉನ್ನತ ಮಟ್ಟದ ಗ್ರಾಹಕರಿಗೆ  ಸೇವೆ ನೀಡುತ್ತಿದ್ದು, ಈ ವರ್ಷ ಸದಸ್ಯರಿಗೆ 15% ಲಾಭಾoಶ ಅಕ್ಟೋಬರ ತಿಂಗಳಲ್ಲಿ ಜಮಾ ಮಾಡಲಾಗುವದು, ಬ್ಯಾಂಕಿನ ಸ್ಥಾಪನೆ ಮಾಡಿ ಅಭಿವೃದ್ಧಿಗೆ ಶ್ರಮಿಸಿದ ದಿವಂಗತ ಹಿರಿಯರ ಪುತ್ತಳಿ ನಿರ್ಮಾಣ, ಬ್ಯಾಂಕಿನ ಮೇಲಿನ ಮಹಡಿಯಲ್ಲಿ     ಶ್ರೀ ಮಲ್ಲಪ್ಪ ಸಭಾಭವನ ನಿರ್ಮಾಣ, ಬ್ಯಾಂಕ ನಿವೇಶನ ಪಡೆಯಲು ಕೋರ್ಟ್ ಹೋರಾಟ ಮಾಡುತ್ತಿದ್ದು ಅದಕ್ಕೆ ನಾವು ಕಾಯಬೇಕು ಎಂದರು.


ಬ್ಯಾಂಕಿನ ವ್ಯವಸ್ಥಾಪಕರಾದ ರಮೇಶ್ ಶಿ. ಮುರಗೋಡ  ವರದಿ ವಚನ ಮಾಡಿ ಮಾತನಾಡಿ  2023-24 ನೇ ಸಾಲಿನಲ್ಲಿ  ದುಡಿಯುವ ಬಂಡವಾಳ 2846.13 ಲಕ್ಷ ರೂಪಾಯಿಗಳು, ಶೇರು ಬಂಡವಾಳ ರೂ. 96.94 ಲಕ್ಷ, ಠೇವಣಿ ರೂ. 2270.69 ಲಕ್ಷ, ಸಾಲ ನೀಡಿದ್ದು ರೂ 1523.39 ಲಕ್ಷ ಮತ್ತು  2023-24 ನೇ ವರ್ಷಕ್ಕೆ  27.17 ಲಕ್ಷ ರೂಪಾಯಿಗಳ  ನಿವ್ವಳ ಲಾಭ ಗಳಿಸಿದೆ ಎಂದರು.


 ಈ ಸಭೆಯಲ್ಲಿ ಹಿರಿಯರಾದ ಶಂಕರ ಹತ್ತರವಾಟ, ಶ್ರೀಕಾಂತ ಮಹಜನ,ಮಲ್ಲಾಪೂರ  ಪಿಕೆಪಿಎಸ್ ಅಧ್ಯಕ್ಷ  ಮುತ್ತಣ್ಣ ಹತ್ತರವಾಟ, ಸದಾಶಿವ ಹಿರೇಮಠ   ಬ್ಯಾಂಕಿನ ಆಗು ಹೋಗುಗಳ ಬಗ್ಗೆ ಮಾತನಾಡಿದರು.


ಸಭೆಯಲ್ಲಿ ಬ್ಯಾಂಕ ಉಪಾಧ್ಯಕ್ಷರಾದ  ಹೊನ್ನಜ್ಜ ಚ. ಕೋಳಿ, ನಿವೃತ್ತ ಬ್ಯಾಂಕ ವ್ಯವಸ್ಥಾಪಕರಾದ ಗೋವಿಂದ ತುಕ್ಕಾನಟ್ಟಿ, ಹಿರಿಯರಾದ ಅಲ್ಲಪ್ಪ ಹುಕ್ಕೇರಿ, ವ್ಯವಸ್ಥಾಪಕರಾದ ಟಿ ಎಸ್. ಹರಗಾಪೂರ, ಎ ಕೆ. ಚೌಗಲಾ  ಎಲ್ಲ ಆಡಳಿತ ಮಂಡಳಿ ಸದಸ್ಯರು, ಶೇರು ಸದಸ್ಯರು, ಗ್ರಾಹಕರು, ಘಟಪ್ರಭಾ ಪಟ್ಟಣದ ಹಿರಿಯರು, ಸಾರ್ವಜನಿಕರು, ಸಿಬ್ಬಂದಿ ಉಪಸ್ಥಿತರಿದ್ದರು.


ಕಾರ್ಯಕ್ರಮದ ನಿರೂಪಣೆ ಶೃತಿ ಮಂಟೂರ, ಸ್ವಾಗತ ಸಂತೋಷ ಹತ್ತರವಾಟ, ವಂದನೆ ಕಿರಣ ಕಬಾಡಗಿ, ಇಂಗ್ಲಿಷ್ ವರದಿಯನ್ನು ರವಳು ನೆವಗಿರೆ ನೆರವೇರಿಸಿದರು. ರಾಜು ಜಂಬರಿ ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ