Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಡಿಗೆ ಬಾಕಿ ಉಳಿಸಿಕೊಂಡ ವಾಣಿಜ್ಯ ಮಳಿಗೆಗಳಿಗೆ ಬೀಗ

ಸಂಕೇಶ್ವರ : ಸ್ಥಳೀಯ ಪುರಸಭೆಯ ಮಾಲೀಕತ್ವದ ವಾಣಿಜ್ಯ ಮಳಿಗೆಗಳ ಬಾಡಿಗೆ ಸರಿಯಾಗಿ ಪಾವತಿಸದೆ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡ ಕಾರಣ  ಪುರಸಭೆಯ ಅಧಿಕಾರಿಗಳು ಮಳಿಗೆಗಳಿಗೆ ಬೀಗ ಹಾಕಿದರು.
ಪಟ್ಟಣದ ಚನ್ನಮ್ಮ ಸರ್ಕಲ್ ಬಳಿಯ  ಪುರಸಭೆಯ ಮೂರು ವಾಣಿಜ್ಯ ಮಳಿಗೆಗಳಿಗೆ ಪುರಸಭೆಯ ಕಂದಾಯ ಅಧಿಕಾರಿಗಳು ಮಳಿಗೆಯ ವರ್ತಕರ ಮುಂದೆಯೇ ಅವರ ವಸ್ತುಗಳನ್ನು ಪಟ್ಟಿ ಮಾಡಿ‌ ಮುಖ್ಯಾಧಿಕಾರಿಗಳಾದ ಪ್ರಕಾಶ ಮಠದ ಆದೇಶದಂತೆ ಸೀಲ್ ಮಾಡಿ ನೋಟಿಸ್ ಅಂಟಿಸಿದರು.
ಪುರಸಭೆಯ ಮುಖ್ಯಾಧಿಕಾರಿಗಳಾದ ಪ್ರಕಾಶ ಮಠದ ಮಾತನಾಡಿ, ಕಳೆದ 2012-13 ರಿಂದ 2026-27 ಸಾಲಿನ ವರೆಗೆ ಸರಿಯಾಗಿ ಬಾಡಿಗೆ ಕಟ್ಟಿಲ್ಲ, ಹಾಗೂ ಮೂರು ಬಾರಿ ನೋಟಿಸ್ ನೀಡಿದರು ಸಹ ಬಾಕಿ ಮೊತ್ತವನ್ನು ಪಾವತಿಸಿಲ್ಲದ ಕಾರಣ ಕರ್ನಾಟಕ ಮುನಶಿಪಾಲಟಿಗಳ ಅಧಿನಿಯಮ ಪ್ರಕಾರ ಮಳಿಗೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಲ್ಲಿರುವ ಸರಕು ಹಾಗೂ ಪೀಠೋಪಕರಣ ಮತ್ತು ವಸ್ತುಗಳನ್ನು ಜಪ್ತಿ ಮಾಡಿ, ಜಪ್ತಿ ಮಾಡಿದ ವಸ್ತುಗಳ ವಿವರಗಳನ್ನು ನೀಡಿ ನೋಟಿಸ್ ಅಂಟಿಸಲಾಗಿದೆ.
ಎಂದು ತಿಳಿಸಿದರು. 
ಈ ಕಾರ್ಯಾಚರಣೆಯಲ್ಲಿ ಪುರಸಭೆಯ ಕಂದಾಯ ಹಾಗೂ ಜಪ್ತಿ ಅಧಿಕಾರಿಗಳಾದ ವಿನಾಯಕ ಬಬಲೇಶ್ವರ, ಕಂದಾಯ ನೀರೀಕ್ಷಕರಾದ ಸೌರಭ ಸೇದುಂರೆ, ವಸೂಲಿ ಸಹಾಯಕರಾದ ಅಶೋಕ ಹೆಗ್ಗಡೆ, ಬಿ.ಎಸ್.ಕಾಕೋಳಿ ಸಿಬ್ಬಂದಿಗಳಾದ ರಾಜು ಪಾಟೀಲ, ಆನಂದ ಟೆಂಬರೆ, ಅಶ್ವೀನಿ ವಾಗಮೋಡೆ, ನಾಗವೇನಿ ಹುಲೋಳಿ, ಪ್ರಜ್ಜಲ್ ಭೋಸಲೆ, ಗ್ರಾಮಲೆಕ್ಕಾಧಿಕಾರಿ ಎನ್.ಆರ್.ಪಾಟೀಲ, ಪೋಲಿಸ ಅಧಿಕಾರಿಗಳು ಹಾಜರಿದ್ದರು.
Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದ ಭದ್ರತೆ ಹಾಗೂ ಶಾಂತಿ ನೆಲೆಸಲು ಸೈನಿಕರ ತ್ಯಾಗ ಬಲಿದಾನವೇ ಕಾರಣ : ಎಲ್.ಎಸ್.ಕೊಳಚಿ ಯುವಕರು ಮಾದಕ ವಸ್ತುಗಳ ದಾಸರಾಗುತ್ತಿರುವುದು ಆರೋಗ್ಯಕರ ಸಮಾಜಕ್ಕೆ ದೊಡ್ಡ ಆತಂಕ ತಂದೊಡ್ಡಿದೆ : ಪ್ರಣಯಣ್ಣಾ ಪಾಟೀಲಬೆಳಗಾವಿ ನಗರ ಅಭಿವೃದ್ಧಿಗೆ ತ್ವರಿತವಾಗಿ ಕೆಲಸ ಮಾಡಿ  : ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯಅನೈತಿಕ ಸಂಬಂಧ ಶಂಕಿಸಿ - ಪತ್ನಿ ಕೊಲೆಗೈದ ಪತಿ ಬಾಡಿಗೆ ಬಾಕಿ ಉಳಿಸಿಕೊಂಡ ವಾಣಿಜ್ಯ ಮಳಿಗೆಗಳಿಗೆ ಬೀಗ ಪ್ರೀತಿ ಬಾತೃತ್ವದೊಂದಿಗೆ ಮರೆಯಲಾಗದ ಮಾಣಿಕ್ಯನಾದ ದಿ. ಮಂಜುನಾಥಜೋಳ ಖರಿಧೀಯ ಹಣ ಕೂಡಲೇ ಬಿಡುಗಡೆಗೆ ಆಗ್ರಹ - ಎ ಐ ಕೆ ಕೆ ಎಂ ಎಸ್"ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ವರ್ಷಾಳಿಗೆ ಸನ್ಮಾನ"ಕುಟುಂಬಕ್ಕೆ ಮರಳಿಸುವಲ್ಲಿ ಸಖಿ ಕೇಂದ್ರದ ಕಾರ್ಯ ಯಶಸ್ವಿಆಗಸ್ಟ ೫ ರಂದು ವ್ಯಸನ ಮುಕ್ತ ದಿನಾಚರಣೆ : ಡಿಸಿ ಸಂಗಪ್ಪ