LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ರಾಜಧಾನಿಯಲ್ಲಿ 23ರಿಂದ 26ರವರೆಗೆ ಭಾರತದ ಅತೀ ದೊಡ್ಡ ಕಲಾ- ಸಾಂಸ್ಕೃತಿಕ ಸಮಾವೇಶ

ಬೆಂಗಳೂರು, (ಜನವರಿ 24): 600 ಶಿಬಿರಾರ್ಥಿಗಳು ಹಾಗೂ ವೈವಿಧ್ಯಮಯ ಕಲಾಕ್ಷೇತ್ರಗಳ ದಿಗ್ಗಜರು ಭಾವ್ 2025: ದಿ ಎಕ್ಸ್ಪ್ರೆಷನ್ಸ್ ಸಮ್ಮಿಟ್ ನಲ್ಲಿ, ಜನವರಿ 23ರಿಂದ 26ರವರೆಗೆ ಸೇರಲಿದ್ದಾರೆ. ಈ ಸಮಾವೇಶವು ಭಾರತದ ಅತೀ ದೊಡ್ಡ ಕಲೆಯ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂಭ್ರಮವಾಗಿದ್ದು, ಮೂರು ದಿವಸಗಳ ಈ ಸಮಾವೇಶದಲ್ಲಿ ಕಲಾವಿದರು ಹಾಗೂ ಘನ ಸಾಂಸ್ಕೃತಿಕ ಧ್ವನಿಗಳಾಗಿರುವ ಮಂಜಮ್ಮ ಜೋಗತಿ, ಸುನಂದಾ ದೇವಿ, ಬನ್ನಂಜೆ ಸುವರ್ಣರವರು ಭಾಗವಹಿಸಲಿದ್ದಾರೆ. ತಮ್ಮ ಜೀವನವನ್ನೇ ರಾಜ್ಯದ ಭವ್ಯ ಸಾಂಸ್ಕೃತಿಕ ಹಾಗೂ ಜನಪದ ಪರಂಪರೆಗೆ ಮುಡಿಪಾಗಿಟ್ಟಿರುವ ಇವರು, ಅವರ ಪಯಣಗಳ ಹಾದಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ.


ಲೈಂಗಿಕ ಅಲ್ಪಸಂಖ್ಯಾತ ಕಲಾಕಾರರು ಮತ್ತು ಸಮುದಾಯಗಳು ಭಾರತದ ಕಲೆ ಮತ್ತು ಸಂಸ್ಕೃತಿಗೆ ನೀಡಿರುವ ಅನುಪಮವಾದ ಕಾಣಿಕೆಯ ಬಗ್ಗೆ ಪದ್ಮಶ್ರೀ ಮಂಜಮ್ಮ ಜೋಗತಿಯವರೊಡನೆ ಚರ್ಚೆ ಮತ್ತು ಪ್ರದರ್ಶನ, 70 ದಿಗ್ಗಜರ ಕಲಾಪ್ರದರ್ಶನ, ಉಪನ್ಯಾಸ, ಪ್ರಾಯೋಗಿಕ ಪ್ರದರ್ಶನ – ಪದ್ಮ ವಿಭೂಷಣ ಸೋನಲ್ ಮನ್ ಸಿಂಗ್, ಕುಚುಪುಡಿಯ ದಂತಕಥೆಯಾದ ಸುನಂದಾ ದೇವಿ, ಪದ್ಮಶ್ರೀ ಉಮಾ ಮಹೇಶ್ವರಿ, ಯಕ್ಷಗಾನದ ದಂತಕಥೆ ಬನ್ನಂಜೆ ಸುವರ್ಣ, ಹೀಗೆ ಭಾವ್ – ದಿ ಎಕ್ಸ್ಪ್ರೆಷನ್ ಸಮ್ಮಿಟ್ 2025 ಒಂದು ಅನುಪಮವಾದ, ಮನಸೆಳೆವ ಅನುಭವವಾಗಲಿದ್ದು, ದಿ ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಇದು ನಡೆಯಲಿದೆ.

ಸಂಸ್ಕೃತಿಗಳ ಈ ಬೃಹತ್ ಸಂಭ್ರಮಕ್ಕೆ ಮಾರ್ಗದರ್ಶಕರಾಗಿರುವ ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರಾಗಿರುವ ಗುರುದೇವ್ ಶ್ರೀ ಶ್ರೀ ರವಿಶಂಕರರು, “ಒಂದೇ ಒಂದು ಸಂಸ್ಕೃತಿ, ಧರ್ಮ ಅಥವಾ ನಾಗರಿಕತೆಯು ಮಾಯವಾದರೂ ಸಹ, ಜಗತ್ತು ಅದರಿಂದ ಬಡವಾಗುತ್ತದೆ. ಪ್ರತಿಯೊಂದು ಸಂಸ್ಕೃತಿಯೂ ಸಹ ಜಗತ್ತಿನ ಪರಂಪರೆಯ ಭಾಗವಾಗಿದೆ ಮತ್ತು ಅವೆಲ್ಲವನ್ನೂ ನಾವು ಉಳಿಸಿ ಸಂರಕ್ಷಿಸಲೇಬೇಕು” ಎನ್ನುತ್ತಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್