ಮೈಸೂರು:
ನಿಮ್ಮ ಜಮೀನಿಗೆ (Land) ಹೋಗಲು ಪಕ್ಕದ ಮನೆಯವರು ದಾರಿ ಬಿಡುತ್ತಿಲ್ಲವಾ? ಅಥವಾ ನಿಮ್ಮ ಹೊಲಕ್ಕೆ ಹೋಗಲು ಯಾವುದೇ ದಾರಿ ಇಲ್ಲದೆ ಕೃಷಿ (Agriculture) ಮಾಡುವುದು ಅಸಾಧ್ಯವಾಗಿದೆಯಾ? ದಾರಿ ವಿಚಾರವಾಗಿ ಗ್ರಾಮಗಳಲ್ಲಿ ನಡೆಯುವ ಗಲಾಟೆಗಳು ಒಂದೆರಡಲ್ಲ. ಆದರೆ ನೆನಪಿಡಿ, ನಿಮ್ಮ ಜಮೀನಿಗೆ ದಾರಿ ಪಡೆಯುವುದು ಕೇವಲ ನಿಮ್ಮ ಅಗತ್ಯವಲ್ಲ, ಅದು ನಿಮ್ಮ ಕಾನೂನುಬದ್ಧ ಹಕ್ಕು! ಯಾರೋ ಒಬ್ಬರು ದಾರಿ ತಡೆದರು ಅಂದಮಾತ್ರಕ್ಕೆ ನೀವು ಸುಮ್ಮನೆ ಕೂರಬೇಕಿಲ್ಲ. ಜಮೀನಿಗೆ ದಾರಿ ಇಲ್ಲದಿದ್ದರೆ ಅದನ್ನು ಪಡೆದುಕೊಳ್ಳಲು ನಮ್ಮ ಸಂವಿಧಾನದಲ್ಲಿ (Constitution) ಮತ್ತು ಕಾನೂನಿನಲ್ಲಿ ಬಲವಾದ ದಾರಿಗಳಿವೆ. ಈ ಒಂದು ವಿಡಿಯೋ ನಿಮ್ಮ ಜಮೀನಿನ ದಾರಿ ಸಮಸ್ಯೆಯನ್ನು (Problem) ಶಾಶ್ವತವಾಗಿ ಬಗೆಹರಿಸಬಲ್ಲದು!
ಭಾರತೀಯ ಕಾನೂನು ಏನು ಹೇಳುತ್ತೆ?
ಭಾರತೀಯ ಕಾನೂನಿನ ಪ್ರಕಾರ, ಅಂದರೆ ‘Indian Easements Act, 1882’ ರ ಅಡಿಯಲ್ಲಿ ಪ್ರತಿ ರೈತನಿಗೂ ‘ಅತ್ಯಾವಶ್ಯಕ ಮಾರ್ಗ ಹಕ್ಕು’ (Right of Way) ನೀಡಲಾಗಿದೆ. ವಿಶೇಷವಾಗಿ ಈ ಕಾಯ್ದೆಯ ‘ಸೆಕ್ಷನ್ 13’ ಏನು ಹೇಳುತ್ತೆ ಗೊತ್ತಾ? ನಿಮ್ಮ ಜಮೀನಿಗೆ ಹೋಗಲು ಬೇರೆ ಯಾವುದೇ ಪರ್ಯಾಯ ದಾರಿ ಇಲ್ಲ ಎಂಬುದು ಸಾಬೀತಾದರೆ, ನಿಮ್ಮ ಪಕ್ಕದ ಜಮೀನಿನ ಮಾಲೀಕರು ಕಾನೂನುಬದ್ಧವಾಗಿ ನಿಮಗೆ ದಾರಿ ಬಿಟ್ಟುಕೊಡಲೇಬೇಕು! ಕೃಷಿ ಚಟುವಟಿಕೆ, ನೀರಾವರಿ ಮತ್ತು ಬೆಳೆ ಸಾಗಣೆಗಾಗಿ ದಾರಿ ಇರುವುದು ಅತ್ಯಗತ್ಯ ಎಂದು ಕಾನೂನು ಪರಿಗಣಿಸುತ್ತದೆ. ಇದರ ಜೊತೆಗೆ ‘Karnataka Land Revenue Act, 1964’ ಅಡಿಯಲ್ಲಿ ನಿಮ್ಮ ತಾಲ್ಲೂಕಿನ ತಹಶೀಲ್ದಾರ್ ಅವರಿಗೆ ಈ ವಿವಾದ ಬಗೆಹರಿಸುವ ಪೂರ್ಣ ಅಧಿಕಾರವಿದೆ.