ತಾಳಿಕೋಟೆ, ಪಟ್ಟಣದ ಪತ್ರಕರ್ತರಾದ ಅಂಬಾಜಿ ಜಿ ಘೋರ್ಪಡೆ ಅವರು ವಿಶ್ವದರ್ಶನ ದಿನಪತ್ರಿಕೆಯಿಂದ ಕೊಡಮಾಡಲಾಗುವ ಮಾದ್ಯಮ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಿ. ೧೯ ರವಿವಾರರಂದು ಕಲಬುರ್ಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಶ್ರೀ ಮಹೇಂದ್ರ ಶಿವಾಚಾರ್ಯ ಕಲ್ಯಾಣ ಮಂಟಪದಲ್ಲಿ ಜರುಗುವ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ ೬ ವಾರ್ಷಿಕೋತ್ಸವ ಹಾಗೂ ಸರ್ವಧರ್ಮದ ಭಾವ್ಯಕ್ಯತೆಯ ೭ನೇ ರಾಜ್ಯ ಸಮ್ಮೇಳನದಲ್ಲಿ ಈ ಮಾದ್ಯಮ ರತ್ನ ಪ್ರಶಸ್ತಿಯನ್ನು ನಿಡಿ ಗೌರವಿಸಲಾಗುತ್ತದೆ ಎಂದು ಪತ್ರಿಕೆಯ ಸಂಪಾದಕ ಡಾ. ಎಸ್.ಎಸ್. ಪಾಟಿಲ್ ತಿಳಿಸಿದ್ದಾರೆ.