ಮೂಡಲಗಿ : ಪಟ್ಟಣದ ಶ್ರೀ ಸತ್ಯಸಾಯಿಬಾಬರವರ ೧೯ನೇ ವಾರ್ಷಿಕೋತ್ಸವ ಹಾಗೂ ಶ್ರೀ ಸಾಯಿ ಮಂದಿರದ ಪ್ರಥಮ ವಾರ್ಷಿಕೋತ್ಸವವು ಆ.೧೬ ರಂದು ಬೆಳಿಗ್ಗೆ ೧೦-೩೦ಕ್ಕೆ ಲಕ್ಷ್ಮೀ ನಗರದಲ್ಲಿರುವ ಶ್ರೀ ಸಾಯಿ ಮಂದಿರದಲ್ಲಿ ನೆರವೇರುವದು ಎಂದು ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಸಂಚಾಲಕ ಹನುಮಂತ ಸೊರಗಾವಿ ತಿಳಿಸಿದ್ದಾರೆ.
ಬುಧವಾರದಂದು ಪಟ್ಟಣದ ಸಾಯಿ ಮಂದಿರದಲ್ಲಿ ವಾರ್ಷಿಕೋತ್ಸವ ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ,ದ ಅವರು, ಸಾನಿಧ್ಯವನ್ನು ಶ್ರೀ ಶಿವಬೋಧರಂಗ ಮಠದ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ, ಶ್ರೀ ಶ್ರೀಧರಬೋಧ ಸ್ವಾಮೀಜಿ, ಸುಣಧೋಳಿಯ ಶ್ರೀ ಶಿವಾನಂದ ಸ್ವಾಮಿಗಳು ವಹಿಸುವರು. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಬೆಳಗಾವಿ ಜಿಲ್ಲಾ ಅಧ್ಯಕ್ಷ ವಸಂತ ಬಾಳಿಗಾ ಅಧ್ಯಕ್ಷತೆ ವಹಿಸುವರು. ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯತಿಥಿಗಳಾಗಿ ಆಗಮಿಸುವರು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಉತ್ತರ ಕರ್ನಾಟಕದ ರಾಜ್ಯ ಸಂಯೋಜಕರು ಪ್ರಭಾಕರ ಬೀರಯ್ಯ ಹಾಗೂ ರಾಜ್ಯ ಶೈಕ್ಷಣಿಕ ಸಂಯೋಜಕಿ ಸೌಮ್ಯಾ ಪ್ರಭಾಕರ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸುರೇಶ ಕಬ್ಬೂರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.
ವಾರ್ಷಿಕೋತ್ಸವ ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಕೃಷಿ ನಾವಳ್ಳಿ, ಬಿ.ಎಮ್.ನಂದಿ, ಐ.ಎ.ಪಾಟೀಲ, ಬಾಳಯ್ಯಾ ಹಿರೇಮಠ, ಲಕ್ಷ್ಮಣ ಕಂಕಣವಾಡಿ, ಭೀಮಶಿ ನಾಯ್ಕ, ಡಿ.ಬಿ.ಮುತ್ನಾಳ ಉಪಸ್ಥಿತರಿದ್ದರು.