LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಖಾತಾ ಬದಲಾವಣೆಗೆ ಹಣದ ಬೇಡಿಕೆ ಆರೋಪ:ಬಸವನಗರ ನಿವಾಸಿಗಳಿಂದ ಪ್ರತಿಭಟನೆ

ಕಾಗವಾಡ: ಪಟ್ಟಣ ಪಂಚಾಯತಿಯಲ್ಲಿ ಖಾತಾ ಬದಲಾವಣೆಗೆ ಏಜೆಂಟರಿಂದ ಹತ್ತರಿಂದ ಹದಿನೈದು ಸಾವಿರ ಬೇಡಿಕೆಗಳನ್ನಿಟ್ಟು ಖಾತಾ ಬದಲಾವಣೆ ಮಾಡುತ್ತಿದ್ದು,ಇದರಿಂದ ಬಡ ದಲಿತರಿಗೆ ಅನ್ಯಾಯವಾಗುತ್ತಿದ್ದು,ಶೀಘ್ರವಾಗಿ ಇದು ಸಂಪೂರ್ಣ ನಿಷೇಧಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದರ ವಿರುದ್ದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದೆಂದು ಯುವ ಮುಖಂಡ ವಿಶಾಲ ದೊಂಡಾರೆ ಹೇಳಿದರು.

ಅವರು ಗುರುವಾರ ದಿ.13 ರಂದು ಕಾಗವಾಡ ಪಟ್ಟಣ ಪಂಚಾಯತ ಎದರು ಹಮ್ಮಿಕೊಂಡ ಪ್ರತಿಭಟನೆ ಹಮ್ಮಿಕೊಂಡು ಮಾತನಾಡುತ್ತಿದ್ದರು, ಅವರು ಮುಂದೆ ಮಾತನಾಡುತ್ತಾ,ಪಟ್ಟಣ ಪಂಚಾಯತ್ ನಲ್ಲಿ ಖಾತಾ ಬದಲಾವಣೆ ಮಾಡುತ್ತೇನೆಂದು ಬಡವರರಿಂದ ಏಜೆಂಟರು ಬಡವರಿಂದ ಹಣದ ಬೇಡಿಕೆ ಇಡುತ್ತಿದ್ದು,ಇದರಿಂದ ಜನರು ಹೈರಾಣಾಗುತ್ತಿದ್ದು ಇದರ ಬಗ್ಗೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೆ ವೇಳೆ ಮಾತನಾಡಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಗಣೇಶ ಕಲ್ಯಾಣಶೆಟ್ಟಿ ಮಾತನಾಡಿ,ಹಣದ ಬೇಡಿಕೆ ವಿಚಾರ ಇಲ್ಲಿಯವರೆಗೆ ನನ್ನ ಗಮನಕ್ಕೆ ಬಂದಿಲ್ಲ ಹಾಗೆನಾದರೂ ಕಂಡು ಬಂದಲ್ಲಿ ಅದರ ಬಗ್ಗೆ ಶಿಸ್ತು ಕ್ರಮ ಜರುಗಿಸಲಾಗುವದು ಎಂದು ಹೇಳಿದರು.

ಬಸವನಗರ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು ರಸ್ತೆ,ವಿದ್ಯುತ್, ಕುಡಿಯುವ ನೀರು ಸಮರ್ಪಕವಾಗಿ ಒದಗಿಸಿಕೊಡಬೇಕೆಂದು ಮಹಿಳೆಯರು ಮನವಿ ಮಾಡಿಕೊಂಡರು.

ಉಪತಹಶಿಲ್ದಾರ ಅಣ್ಣಾಸಾಬ ಕೋರೆ ಅವರಿಗೆ ಮನವಿ ಸಲ್ಲಿಸಿದರು.

ವೇಳೆ ವಿಶಾಲ ಧೋಡಾರೆಸುನೀಲ ಮದಭಾವಿ,ಯಲ್ಲಪ್ಪ ಕಾಂಬಳೆ,ಅಕ್ಷಯ ಮೇತ್ರೆ ನಿತಿನ್ ಕಾಂಬಳೆ,ರಾಹುಲ್ ಕಾಂಬಳೆ, ಅಕ್ಷಯ ದೇವನೆ,ಅಮೊಲ ಕಾಂಬಳೆ,ಸತೀಶ ಬೀರನಗೆ,ಅಪ್ಪಾಜಿ ಕಾಂಬಳೆ,ಸಂಜು ಕಾಂಬಳೆ,ಬಬಲು ಕಾಂಬಳ,ದೀಪಾಲಿ ಕಾಂಬಳೆ,ಲಲಿತಾ ಕಾಂಬಳೆ,ಅಕ್ಕಾತಾಯಿ ಡವರೆ,ಸೇರಿದಂತೆ ಅನೇಕರು ಇದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚನ್ನಮ್ಮನ ಕಿತ್ತೂರಿನಲ್ಲಿ ಆಕರ್ಷಕವಾಗಿ ಮೂಡಿಬಂದ ‘ಹರ್ ಘರ್ ತಿರಂಗಾ’ ಅಭಿಯಾನ: ರಾಷ್ಟ್ರಭಕ್ತಿಯ ಸಂಭ್ರಮ​ಗ್ರಂಥಾಲಯವು ಮಹಾವಿದ್ಯಾಲಯದ ಹೃದಯವಿದ್ದಂತೆ : ಪ್ರೊ.ಬಿ.ಎ.ಪಾಟೀಲಪುಸ್ತಕ ಸಂಸ್ಕೃತಿಯಿಂದ ಮಸ್ತಕವನ್ನು ಅರಳಿಸಬೇಕಾದ ಅವಶ್ಯಕತೆಯಿದೆ : ಶ್ರೀಗಳುಆ.೧೬ ರಂದು ಶ್ರೀ ಸಾಯಿ ಮಂದಿರದ ಪ್ರಥಮ ವಾರ್ಷಿಕೋತ್ಸವಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಮಹಾತ್ಮ ಗಾಂಧಿ ಪುತ್ಥಳಿಗೆ ಪೂಜೆಶ್ರಾವಣ ಮಾಸ ಶಿವ ಮತ್ತು ವಿಷ್ಣುವಿಗೆ ಅತ್ಯಂತ ಪ್ರೀಯವಾದ ಮಾಸ-ಕಣ್ವಮಠಶ್ರೀಖಾತಾ ಬದಲಾವಣೆಗೆ ಹಣದ ಬೇಡಿಕೆ ಆರೋಪ:ಬಸವನಗರ ನಿವಾಸಿಗಳಿಂದ ಪ್ರತಿಭಟನೆಭ್ರಷ್ಟ ಸಚಿವ ಬಿ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಅಗ್ರಹ ದೇಶಕ್ಕೇ ಮಾದರಿಯಾಗಲಿ ಬೆಳಗಾವಿ ಗಣೇಶ ಉತ್ಸವ :  ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಕರೆಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ತಲ್ವಾರ್ ದಾಳಿ: ತೀವ್ರ ರಕ್ತಸ್ರಾವ, ಆಸ್ಪತ್ರೆಗೆ ದಾಖಲು