ಸಂಕೇಶ್ವರ,ಜು,೨೨ : ಪಟ್ಟಣದ ಪುರಸಭೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ,ಈಗ ಬೊರಗಾಂವ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಾಮ್ಯ ಸ್ವಭಾವದ ವ್ಯಕ್ತಿ ಕೃಷ್ಣಾ ಖಾತೆದಾರ ಅವರಿಗೆ ಸಂಕೇಶ್ವರ ಗಣ್ಯರಿಂದ ಶಾಲು ಹೊದಿಸಿ ಸತ್ಕರಿಸಿ ಬೀಳ್ಕೋಡಲಾಯಿತು.
ಡಾ! ಮಂದಾರ ಹಾವಳ ಮಾತನಾಡಿ, ಹಲವು ವರ್ಷಗಳಿಂದ ಸಂಕೇಶ್ವರ ಪುರಸಭೆಯಲ್ಲಿ ಪೌರ ಕಾರ್ಮಿಕರ ಸೂಪರ್ ವೈಜರ್ ಕಾರ್ಯ ನಿರ್ವಹಿಸಿದರು ಕೃಷ್ಣಾ ಖಾತೆದಾರ ಅವರು ಜನರ ಜೊತೆ ಉತ್ತಮ ಸಂಬಂಧ ಹೊಂದಿದ್ದರು, ಪಟ್ಟಣದ ಸ್ವಚ್ಛತೆಗೆ ಪ್ರಾಮಾಣಿಕವಾಗಿ ಶ್ರಮವಹಿಸುತ್ತಿದರು, ಯಾವಲೂ ಕರೆ ಮಾಡಿ ಕೆಲಸ ಹೇಳಿದರೆ ತಕ್ಷಣವೇ ಸ್ಪಂದಿಸುವ ಗುಣ ಅವರದು ಎಂದು ಹೊಗಳಿದರು.
ಈ ಸಂಧರ್ಭದಲ್ಲಿ ಮುಖಂಡರಾದ ರಾಜು ಸಾನೆ, ರವಿಂದ್ರ ಮರಡಿ, ದುರದುಂಡಿ ಪಾಟೀಲ, ಕಿರಣ ಚೌಗಲೆ, ಯೋಗೇಶ ಖಾತೆದಾರ ಸೇರಿದಂತೆ ಅನೇಕರು ಹಾಜರಿದ್ದರು.