LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ರಾಷ್ಟ್ರದ ವಿಕಾಸಕ್ಕೆ ಶಿಕ್ಷಣವೇ ಮುಖ್ಯ:ಶಾಂತವೀರ ಮಲ್ಲಿಕಾರ್ಜುನ ಶ್ರೀಗಳು

ಕಾಗವಾಡ:ರಾಷ್ಟ್ರದ ವಿಕಾಸಕ್ಕೆ ಶಿಕಣವೇ ಮುಖ್ಯ,ಜಗತ್ತಿನಲ್ಲಿ ಜ್ಞಾನಕ್ಕೆ ಇರುವಷ್ಟು ಶ್ರೇಷ್ಠತೆ ಮತ್ತು ಗೌರವ ಮತ್ಯಾವುದಕ್ಕೂ ಇಲ್ಲ ,ಜ್ಞಾನವೊಂದು ಪ್ರವಿತ್ರ ವಸ್ತು ಎಂದು ವಿಶ್ವಶಾಂತಿ ಯಳಂದೂರಿನ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು
ಅವರು ದಿ.5 ರಂದು ಶನಿವಾರ ತಾಲ್ಲೂಕಿನ ಐನಾಪೂರ ಪಟ್ಟಣದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಕಾಗವಾಡ ತಾಲ್ಲೂಕಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ದಿವ್ಯ ಸಾನಿಧ್ಯ ವಹಸಿ ಆಶೀರ್ವಚನ ನೀಡುತ್ತಾ,ತಾಯಿ ಮೊದಲು ಗುರು ಆ ಮಾತೆ ವ್ಯಕಿತ್ವವನ್ನು ರೂಪಿಸುತ್ತಾಳೆ ಯಾರಾದರೂ ಉನ್ನತ ಸ್ಥಾನಕ್ಜೇರಿದ್ದಾದರೆ ಅಲ್ಲಿ ತಾಯಿಯ ಸ್ಥಾನ ಬಹಳ ದೊಡ್ಡದಿದೆ.ಅದೇ ರೀತಿ ಶಿಕ್ಷಕರ ಕರ್ತವ್ಯವು ಶ್ರೇಷ್ಠವಾಗಿದ್ದು,ಮಕ್ಕಳಿಗೆ ಜ್ಞಾನಾರ್ಜನೆ ನೀಡುವದರ ಜೊತೆಗೆ ಸಮಾಜದ ರಕ್ಷಕನಾಗಿದ್ದಾನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತಹಶಿಲ್ದಾರ ರವೀಂದ್ರ ಹಾದಿಮನಿ ಮಾತನಾಡಿ,ಶಿಕ್ಷಕ ವೃತ್ತಿ ಎಲ್ಲ ಕ್ಷೇತ್ರಕ್ಕಿಂತ ಪವಿತ್ರ ಕ್ಷೇತ್ರವಾಗಿದ್ದು,ಆ ವೃತ್ತಿಯು ತನ್ನ ಸಂಪೂರ್ಣ ಜ್ಞಾನಾರ್ಜನೆಯನ್ನು ಮಕ್ಕಳಿಗೆ ಧಾರೆಯೆರೆದು ಅವರ ಉನ್ನತಮಟ್ಟಕ್ಕೆರಲು ಶ್ರಮಿಸುತ್ತಾನೆ ಎಂದರು.
ಈ ವೇಳೆ ಸಿಡಿಪಿಒ ಸಂಜಯಕುಮಾರ ಸದಲಗೆ, ಗ್ರೇಡ ೨ ತಹಶಿಲ್ದಾರ ರಶ್ಮಿ ಜಕಾತಿ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ,ಪಿಎಸ್ಐ ರಾಘವೇಂದ್ರ ಖೋತ,ಮುಖಂಡರಾದ ಪ್ರವೀಣ ಗಾಣಿಗೇರ,ತಮ್ಮಣ್ಣಾ ಪಾರಶೆಟ್ಟಿ,ಪಪಂ ಅಧ್ಯಕ್ಷರಾದ ಲಕ್ಷ್ಮಿ ಅಡಿಶೇರಿ,ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಅಧ್ಯಕ್ಷರಾದ ಕುಮಾರ ಗಾಣಿಗೇರ,ನೌಕರರ ಸಂಘದ ಅಧ್ಯಕ್ಷರಾದ ಎಸ್ ಎಸ್ ಭಾವಿ,ಗೌಡಪ್ಪ ಸಡ್ಡಿ,ಜಿ.ಎಮ್ ಸಂಕಪಾಳ,ಸುರೇಶ ಅಡಿಸೇರಿ ಹಾಜರಿದ್ದರು.
ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಿಗರಾಮಯ್ಯ ಮಾತನಾಡಿದರು.ಪಾಂಡುರಂಗ ಮಧಭಾವಿ ಸ್ವಾಗತಿಸಿದರು, ಭರತ ಬಿಲವಡಿ,ಶಿವಗೌಡ ಚೌಗಲಾ ನಿರೂಪಿಸಿದರು.ನೂಡಲ್ ಅಧಿಕಾರಿ ಶ್ರೀಶೈಲ ಮಾಳಿ ವಂದಿಸಿದರು.
ಪೊಟೋ ಶಿರ್ಷಿಕೆ:ಐನಾಪುರದಲ್ಲಿ ಕಾಗವಾಡ ತಾಲ್ಲೂಕಾಮಟ್ಟದ ಶಿಕ್ಷಕ ದಿನಾಚರಣೆ ಉದ್ಘಾಟಿಸುತ್ತಿರುವಾಗ ಶಾಂತ ಮಲ್ಲಿಕಾರ್ಜುನ ಶ್ರೀಗಳು,ಬಿಇಒ ಚನ್ನಿಗರಾಮಯ್ಯ,ತಹಶಿಲ್ದಾರ ರವೀಂದ್ರ ಹಾದಿಮನಿ,ತಾಪಂ ಕಾರ್ಯನಿರ್ವಾಹಕ ವೀರಣ್ಣ ವಾಲಿ,ಪ್ರವೀಣ ಗಾಣಿಗೇರ,ಲಕ್ಷ್ಮಿಬಾಯಿ ಅಡಿಶೇರಿ ಹಾಗೂ ಇತರರನ್ನು ಕಾಣಬಹುದು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಪರಸ್ಪರ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸೋಣ: ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿತುಂಬಗಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ರುದ್ರಾಭಿಷೇಕ"ಪ್ರಜಾಸೇವೆ ಅಭಿಯಾನದ ಮೂಲಕ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು"ಜೆಡಿಎಸ್ ನಗರ ಘಟಕದ ಸಂಘಟನೆ ಕುರಿತು ಸಭೆಬರಪೀಡಿತ ಜಿಲ್ಲೆಯ ಘೋಷಣೆಗೆ ಸರ್ಕಾರದ ನಿರ್ಲಕ್ಷ ಸಲ್ಲದು-ಸೋಲಾಪೂರಪ್ರಜಾಸೇವೆ ಆಂದೋಲನಕ್ಕೆ ಚಾಲನೆದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ - ಶಾಸಕ ಪಾಟೀಲ್ ರಾಮದುರ್ಗದಲ್ಲಿ ‘ಪ್ರಜಾಸೇವೆ’ಗೆ ಚಾಲನೆ: ಅಧಿಕಾರಿಗಳಿಗೆ ಶಾಸಕ ಅಶೋಕ್ ಪಟ್ಟಣ ಎಚ್ಚರಿಕೆರಾಮದುರ್ಗ: ಕ್ರೀಡೆಯಿಂದ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯ - ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿವಿನಯ ನಾವಲಗಟ್ಟಿ ಅವರ ತಾಯಿಯ ನಿಧನಕ್ಕೆ ಲಕ್ಷ್ಮೀ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ ಸಂತಾಪ