Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಾಹನ ಚಾಲನೆ ಜಾಗ್ರತೆ, ಸಾರಿಗೆ ನಿಯಮ ಪಾಲನೆ ಅನುಸರಿಸಬೇಕು

ಬೆಳಗಾವಿ.ವಾಹನ ಚಾಲನೆ ಮಾಡುವಾಗ ಅಡ್ಡ ಬರುವವರನ್ನು ಉಳಿಸಲು ನೀವು ವಾಹನವನ್ನು ಅಡ್ಡಾಡಿದ್ದಿ ತಿರುಗಿಸಿದರೆ ಅಡ್ಡ ಬಂದವರನ್ನೇನೋ ನೀವು ಉಳಿಸುತ್ತೀರಿ ಆದರೆ ಅವರನ್ನು ಉಳಿಸಲು ನೀವು ನಿಮ್ಮ ಪ್ರಾಣವನ್ನೇ ಬಲಿ ಕೊಡಬೇಕಾಗುತ್ತದೆ.


ವಾಹನ ಚಾಲಕನಾದವನು ತನ್ನ ದಾರಿಗೆ ಅಡ್ಡ ಬರುವ ಯಾವುದೇ ಪ್ರಾಣಿ, ಪಶು, ವಾಹನ ಅಥವಾ ಮಾನವನನ್ನು ಕಾಪಾಡಬೇಕು ಎಂದುಕೊಂಡಿದ್ದರೆ ನಿಮ್ಮ ವಾಹನ ಚಲಿಸುತ್ತಿರುವ ಲೆನ್ ನಲ್ಲಿ ಇದ್ದುಕೊಂಡು, ಗೇರ್ ಇಳಿಸುತ್ತ ಎರಡು ಕೈಗಳಿಂದ ಸ್ಟೀರಿಂಗ್ ಗಟ್ಟಿಯಾಗಿ ಹಿಡಿದು, ಸಾಕಷ್ಟು ಬಲವಾಗಿ ಬ್ರೇಕ್ ಹಾಕುವ ಧೈರ್ಯ ತೋರಿಸಬೇಕು. ಅಡ್ಡ ಬರುತ್ತಿರುವ ವಸ್ತುವನ್ನು ತಪ್ಪಿಸಲು ನೀವಿರುವ ವೇಗದಲ್ಲೇ ಲೇನ್ ಬದಲಿಸಿ ಬ್ರೇಕ್ ಹಾಕಿದರೆ ? ವಾಹನ ಪಲ್ಟಿಯಾಗದೆ ಇದ್ದೀತೆ ?


ಮೂಲಗಳ ಮಾಹಿತಿಯ ಪ್ರಕಾರ IAS ಅಧಿಕಾರಿ ಮಹಾಂತೇಶ ಬಿಳಗಿಯವರ ಕಾರು ಪಲ್ಟಿಯಾದದ್ದೂ ಹೀಗೆ ಅಡ್ಡ ಬಂದ ದ್ವಿಚಕ್ರ ವಾಹನ ಸವಾರನ ಕಾರಣದಿಂದ. ಆ ಒಬ್ಬ ಸಾಮಾನ್ಯ ವಾಹನ ಸವಾರನನ್ನು ಉಳಿಸಲು ಹೋಗಿ ಒಬ್ಬ IAS ಅಧಿಕಾರಿ ಸೇರಿ ಮೂರು ಜನ ಪ್ರಾಣ ಕಳೆದುಕೊಂಡರು. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ರಸ್ತೆ ನಿಯಮ ಪಾಲಿಸದ ಅಯೋಗ್ಯರು, ಬುದ್ದಿಹೀನರು, ಸಾಮಾಜಿಕ ಜವಾಬ್ದಾರಿ ಇಲ್ಲದ ಅಬ್ಬೇಪಾರಿಗಳು ತಮ್ಮ ವಾಹನಗಳನ್ನು ರಸ್ತೆಗಿಳಿಸಿ ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿಯ ಜೀವ ಬಲಿಪಡೆಯಬಹುದು ಎಂದಾದರೆ, ಮಹತ್ವದ ಜೀವಗಳನ್ನು ಹೊತ್ತು ವಾಹನ ಚಲಾಯಿಸುವ ಚಾಲಕ ಉತ್ತಮರನ್ನು ಬದುಕಿಸಲಿಕ್ಕಾಗಿ ಧೈರ್ಯದಿಂದ ವಾಹನ ನಿಲ್ಲಿಸಿದರೂ, ಅಯೋಗ್ಯರನ್ನು ಗುದ್ದಿ ಬೀಳಿಸಿದರೂ, ಅಪಘಾತ ಮಾಡಿ ಕೈ ಕಾಲು ಮುರಿದರೂ, ಕೊನೆಗೆ ಕೊಂದರೂ ತಪ್ಪಲ್ಲ - ಅದು ಅಪಘಾತವಷ್ಟೇ ಎಂಬುದು ನನ್ನ ಅನಿಸಿಕೆ.


ರಸ್ತೆ ನಿಯಮಗಳ ಪಾಲನೆ ಮಾಡುವುದು ಒಂದು ಭಾಗವಾದರೆ - ಅವುಗಳನ್ನು ಧೈರ್ಯದಿಂದ ನಮ್ಮೊಳಗೆ ಅಳವಡಿಸಿಕೊಂಡು ಬದುಕುವುದೂ ಅಷ್ಟೇ ಅವಶ್ಯಕ.


ಬ್ರೇಕ್ ಹಾಕಲು ಮೀನಮೇಷ ಎನಿಸಬೇಡಿ, ವಾಹನವನ್ನು ಲೇನ್ ನಿಂದ ಲೇನ್ ಗೆ ಓಲಾಡಿಸಬೇಡಿ, ಕೊನೆಗೆ ಇಂತಹ ಯಾವುದೇ ವಸ್ತು/ಜೀವ ಅಡ್ಡ ಬಂದರೂ ಇರುವಲ್ಲಿಯೇ ಬ್ರೇಕ್ ಹಾಕಿ ವಾಹನ ನಿಲ್ಲಿಸಿ, ನಿಲ್ಲಿಸಲಾಗದಿದ್ದರೆ ಗುದ್ದಿ- ಆದರೆ ತಪ್ಪಿಸಲು ಹೋಗಿ ನಿಮ್ಮ ಪ್ರಾಣ ಕಳೆದುಕೊಳ್ಳಬೇಡಿ. ಜನ ನಿಮ್ಮನ್ನು ಸ್ವಾರ್ಥಿ ಎಂದುಕೊಂಡರೂ ಪರವಾಗಿಲ್ಲ - ಮೊದಲು ನೀವು ಬದುಕಿ. ಈ ನಿಯಮವನ್ನೇ ಜಗತ್ತಿನ ಎಲ್ಲ ಮುಂದುವರಿದ ರಾಷ್ಟ್ರಗಳ ಸಾರಿಗೆ ನಿಯಮಗಳಲ್ಲಿ ಹೇಳಿಕೊಡುವುದು ಅತೀ ಅವಶ್ಯ.



ಮಹಾಂತೇಶ ವಕ್ಕುಂದ

ಮೇಕ್ಯಾನಿಕಲ್ ಇಂಜೀನಿಯರ ಹಾಗೂ ಬಿಜೆಪಿ ಮುಖಂಡರು,ಬೆಳಗಾವಿ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ