ಧಾರವಾಡ,27 ಐದು ವರ್ಷಗಳ ಕಾಯುವಿಕೆ ಅಂತ್ಯ..! ಧಾರವಾಡಕ್ಕೆ ಮರಳುತ್ತಿದ್ದಾರೆ ಜನನಾಯಕನ — ಜನಸ್ಪಂದನೆಗೆ ಸಜ್ಜಾದ ಕ್ಷೇತ್ರ
ಸುಮಾರು ಐದು ವರ್ಷಗಳಿಂದ ಕಾಯುತ್ತಿದ್ದ ಆ ಕ್ಷಣ...
ಇದೀಗ ಧಾರವಾಡದ ಜನತೆಯ ಕಣ್ಮುಂದೆ ಬರಲು ಕ್ಷಣಗಣನೆ ಆರಂಭವಾಗಿದೆ
ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ಕೊಟ್ಟ ನಂತರ ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೂಡ ಅವರಿಗೆ ಧಾರವಾಡಕ್ಕೆ ತೆರಳಲು ಅನುಮತಿ ನೀಡಿದೆ.
ಕಲವೇ ದಿನದಲ್ಲಿ ವಿನಯ್ ಕುಲಕರ್ಣಿ ಅವರು ಧಾರವಾಡಕ್ಕೆ ಆಗಮಿಸಲಿದ್ದಾರೆ. ಆದರೆ, ಅವರ ಸ್ವಾಗತಕ್ಕೆ ಯಾವುದೇ ಆಡಂಬರ ಬೇಡ, ಮೆರವಣಿಗೆ, ಬೈಕ್ ರ್ಯಾಲಿ , ಘೋಷಣೆಗಳನ್ನು ಹಾಕುವುದು ಇವುಗಳನ್ನು ಮಾಡದಂತೆ ನ್ಯಾಯಾಲಯ ಅವರಿಗೆ ಷರತ್ತು ವಿಧಿಸಿದೆ. ಈ ಹಿನ್ನೆಲೆ ಶಾಸಕ ವಿನಯ್ ಕುಲಕರ್ಣಿ ಕೂಡ ಈ ಬಗ್ಗೆ ಕಾರ್ಯಕರ್ತರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಕೂಡ ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಮೆರವಣಿಗೆ, ಬೈಕ್ ರ್ಯಾಲಿ
ಕಲವೇ ದಿನದಲ್ಲಿ ವಿನಯ್ ಕುಲಕರ್ಣಿ ಅವರು ಧಾರವಾಡಕ್ಕೆ ಆಗಮಿಸಲಿದ್ದಾರೆ. ಆದರೆ, ಅವರ ಸ್ವಾಗತಕ್ಕೆ ಯಾವುದೇ ಆಡಂಬರ ಬೇಡ, ಮೆರವಣಿಗೆ, ಬೈಕ್ ರ್ಯಾಲಿ , ಘೋಷಣೆಗಳನ್ನು ಹಾಕುವುದು ಇವುಗಳನ್ನು ಮಾಡದಂತೆ ನ್ಯಾಯಾಲಯ ಅವರಿಗೆ ಷರತ್ತು ವಿಧಿಸಿದೆ. ಈ ಹಿನ್ನೆಲೆ ಶಾಸಕ ವಿನಯ್ ಕುಲಕರ್ಣಿ ಕೂಡ ಈ ಬಗ್ಗೆ ಕಾರ್ಯಕರ್ತರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಕೂಡ ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಮೆರವಣಿಗೆ, ಬೈಕ್ ರ್ಯಾಲಿ
ಮಾಡದಂತೆ ಘೋಷಣೆಗಳನ್ನು ಹಾಕದಂತೆ ಮನವಿ ಮಾಡಿದ್ದಾರೆ.
ಸುಮಾರು 5 ವರ್ಷಗಳ ನಂತರ ವಿನಯ್ ಕುಲಕರ್ಣಿ ಇದೀಗ ತಮ್ಮ ಸ್ವ ಕ್ಷೇತ್ರಕ್ಕೆ ಮರಳುತ್ತಿದ್ದಾರೆ. ಇದು ಸಹಜವಾಗಿಯೇ ಅವರ ಕುಟುಂಬಸ್ಥರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಸುಮಾರು 5 ವರ್ಷಗಳ ನಂತರ ವಿನಯ್ ಕುಲಕರ್ಣಿ ಇದೀಗ ತಮ್ಮ ಸ್ವ ಕ್ಷೇತ್ರಕ್ಕೆ ಮರಳುತ್ತಿದ್ದಾರೆ. ಇದು ಸಹಜವಾಗಿಯೇ ಅವರ ಕುಟುಂಬಸ್ಥರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.