Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಂಪಾದೇವನಹಳ್ಳಿಯಲ್ಲಿ ಭಾವಗೀತೆಗಳು ಮತ್ತು ಬಯಲಾಟ ಪ್ರದರ್ಶನ-2026



  ಹೊಸಪೇಟೆ: ಕಂಪ್ಲಿ-ತಾಲೂಕಿನ ಹಂಪಾದೇವನಹಳ್ಳಿಯಲ್ಲಿನ   ಮಾವಿನಹಳ್ಳಿಯ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ   ಶ್ರೀ ಸಿದ್ದೇಶ್ವರ ರಂಗ ಸ0ಸ್   ಕಲ್ಚರಲ್ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭಾವಗೀತೆಗಳು ಮತ್ತು ಬಯಲಾಟದಲ್ಲಿ     ಕೃತ ವೀರ್ಯ, ಕಾರ್ತಿ ವಿರಾರ್ಜುನ, ರೇಣುಕಾರಾಜ    ಪಟ್ಟಾಭಿಷೇಕ ಸನ್ನಿವೇಶವನ್ನು ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮವನ್ನು  ಸಸಿಗೆ ನೀರು ಏರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಬಯಲಾಟ ಹಾರ್ಮೂನಿಯಂ ಮಾಸ್ಟರ್ ಶ್ರೀ. ಡಿ.ಎಂ.ಮಂಜುನಾಥ ಮಾತನಾಡಿ.  ಬಯಲಾಟವು ಉತ್ತರ ಕರ್ನಾಟಕದ ಪ್ರಮುಖ ಸಾಂಪ್ರದಾಯಿಕ ಬಯಲು ರಂಗಭೂಮಿ ಕಲೆಯಾಗಿದ್ದು, ಇದು ಸುಮಾರು 150 ವರ್ಷಗಳ ಇತಿಹಾಸ ಹೊಂದಿದೆ. ಯಕ್ಷಗಾನದ ಶೈಲಿಯನ್ನು ಹೋಲುವ ಇದು, ಪುರಾಣ ಮತ್ತು ಮಹಾಕಾವ್ಯಗಳ ಕಥೆಗಳನ್ನು ಹಾಡು, ಕುಣಿತ ಮತ್ತು ವಿಶಿಷ್ಟ ವೇಷಭೂಷಣಗಳೊಂದಿಗೆ ತೆರೆದ ಮೈದಾನದಲ್ಲಿ ಪ್ರದರ್ಶಿಸುತ್ತದೆ. ದೊಡ್ಡಾಟ, ಸಣ್ಣಾಟ, ಪಾರಿಜಾತ ಮುಂತಾದ ಪ್ರಕಾರಗಳು ಇದರಲ್ಲಿವೆ ಈ ಕಲೆಗಳನ್ನು ಮಕ್ಕಳಿಗೆ ತಿಳಿಸುವ ಕೆಲಸ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಮಾವಿನಹಳ್ಳಿಯವರು ಮಾಡುತ್ತಿದ್ದಾರೆ   ಎಂದು  ಸಂಸ್ಥೆಯ ಕಾರ್ಯ ವನ್ನು ಶ್ಲಾಘಸಿದರು.

 

ಭಾವಗೀತೆಗಳು ವೈಯಕ್ತಿಕ ಭಾವನೆಗಳು, ಪ್ರೀತಿ, ಪ್ರಕೃತಿ ಮತ್ತು ತತ್ವಜ್ಞಾನವನ್ನು ವ್ಯಕ್ತಪಡಿಸುವ, ಸಂಗೀತಮಯವಾಗಿ ಹಾಡಬಹುದಾದ ಸಣ್ಣ ಕವಿತೆಗಳಾಗಿವೆ. ಇವು ಪ್ರಮುಖವಾಗಿ ಹರಿತವಾದ ರಾಗ/ಲಯವನ್ನು ಹೊಂದಿರುತ್ತವೆ ಮತ್ತು ತಂತಿವಾದ್ಯದ ಹಿನ್ನೆಲೆಯಲ್ಲಿ ಹಾಡಲು ಸೂಕ್ತವಾಗಿವೆ. ಕನ್ನಡದಲ್ಲಿ ಬೇಂದ್ರೆ, ಪುತಿನ, ಜಿ.ಎಸ್.ಶಿವರುದ್ರಪ್ಪ ಮುಂತಾದವರು ಭಾವಗೀತೆ ಪ್ರಕಾರವನ್ನು    ಶ್ರೀಮಂತಗೊಳಿಸಿದ್ದಾರೆ.

 

ಆಧುನಿಕ ಭಾವಗೀತೆ ಕಾವ್ಯವು ವೈಯಕ್ತಿಕ ಭಾವನೆಗಳು ಅಥವಾ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಔಪಚಾರಿಕ ಪ್ರಕಾರದ ಕಾವ್ಯವಾಗಿದೆ , ಇದನ್ನು ಸಾಮಾನ್ಯವಾಗಿ ಮೊದಲ ವ್ಯಕ್ತಿ ನಿರೂಪಣೆಯಲ್ಲಿ ಮಾತನಾಡಲಾಗುತ್ತದೆ .  ಆಧುನಿಕ ಭಾವಗೀತೆ ಕಾವ್ಯ ಮತ್ತು ಆಧುನಿಕ ಗೀತೆ ಸಾಹಿತ್ಯ ಎರಡಕ್ಕೂ ಈ ಪದವು ಪ್ರಾಚೀನ ಗ್ರೀಕ್ ಸಾಹಿತ್ಯದ ಒಂದು ರೂಪವಾದ ಗ್ರೀಕ್ ಗೀತೆಯಿಂದ ಬಂದಿದೆ , ಇದನ್ನು ಅದರ ಸಂಗೀತದ ಪಕ್ಕವಾದ್ಯದಿಂದ ವ್ಯಾಖ್ಯಾನಿಸಲಾಗಿದೆ, ಸಾಮಾನ್ಯವಾಗಿ " ಕಿತಾರಾ " ಎಂದು ಕರೆಯಲ್ಪಡುವ ವಾದ್ಯದಲ್ಲಿ , ಏಳು-ತಂತಿಯ ಲೈರ್ ಆದ್ದರಿಂದ "ಭಾವಗೀತೆ". ಈ ಮೂರು ಸಮಾನವಾಗಿಲ್ಲ, ಆದರೂ ಹಾಡಿನ ಸಾಹಿತ್ಯವು ಹೆಚ್ಚಾಗಿ ಭಾವಗೀತೆಯ ವಿಧಾನದಲ್ಲಿರುತ್ತದೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ  ಶಾಲಾ ಎಸ್ ಡಿ ಎಂ.ಸಿ ಅಧ್ಯಕ್ಷ . ಗುರುಮೂರ್ತಿ ಹೇಳಿದರು.

 

ಬಯಲಾಟದ ಪ್ರದರ್ಶನ ಸ್ಥಳ: ಸಾಮಾನ್ಯವಾಗಿ ಹಳ್ಳಿಗಳ ದೇವಸ್ಥಾನದ ಆವರಣ, ತೆರೆದ ಮೈದಾನ ಅಥವಾ ಮರಳು ಹಾಸಿನ ಮೇಲೆ ಸೂರ್ಯಾಸ್ತದ ನಂತರ ಪ್ರದರ್ಶನ ನಡೆಯುತ್ತದೆ. ರೂಪಗಳು ಬಯಲಾಟದಲ್ಲಿ ಮುಖ್ಯವಾಗಿ ಐದು ವಿಧಗಳಿವೆ - ದಶರಥ, ಸಣ್ಣಾಟ, ದೊಡ್ಡಾಟ, ಪರಿಕಥೆ ಮತ್ತು ಯಕ್ಷಗಾನ. ವಿಷಯ.ಭಾರತೀಯ ಮಹಾಕಾವ್ಯಗಳು ಮತ್ತು ಪುರಾಣದ ಕಥೆಗಳನ್ನು ನೃತ್ಯ ಮತ್ತು ನಾಟಕದ ಮೂಲಕ ನಿರೂಪಿಸಲಾಗುತ್ತದೆ. ಸಂಗೀತ ಮತ್ತು ವೇಷಭೂಷಣ ಚಂಡೆಯ ಸದ್ದಿನೊಂದಿಗೆ ಆರಂಭವಾಗುವ ಈ ಕಲೆ, ಪಾತ್ರಗಳ ವಿಶಿಷ್ಟ ವೇಷಭೂಷಣ ಮತ್ತು ಗಾಯನದಿಂದಾಗಿಜನಪ್ರಿಯವಾಗಿದೆ. ಪ್ರಾಚೀನತೆ: ಬಯಲಾಟದ ಇತಿಹಾಸದಲ್ಲಿ "ಕುಮಾರರಾಮ" ಅತ್ಯಂತ ಪ್ರಾಚೀನವಾದ ಕೃತಿ ಎಂದು ಪರಿಗಣಿಸಲಾಗಿದೆ. ಉತ್ತರ ಕರ್ನಾಟಕದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಬಯಲಾಟ, ಸುಗ್ಗಿಯ ಮತ್ತು ಬೇಸಿಗೆ ಕಾಲದಲ್ಲಿ ಹಳ್ಳಿಗಳಲ್ಲಿ ಹೆಚ್ಚಿನ ಪ್ರದರ್ಶನಗಳನ್ನು ಕಾಣುತ್ತದೆ. ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಯಲಾಟ ಕಲಾವಿದರಾದ . ಕಂದಾರ್ ತಿಪ್ಪೇಸ್ವಾಮಿ ಹೇಳಿದರು.

 

ಭಾವನಾತ್ಮಕತೆ ಕವಿಯ ಆತ್ಮನಿಷ್ಠ ಭಾವನೆಗಳಿಗೆ, ನೋವು-ನಲಿವುಗಳಿಗೆ ಒತ್ತು ನೀಡುತ್ತವೆ.ಸಂಗೀತಮಯತೆ 

ಇವು ಹಾಡಲು ಯೋಗ್ಯವಾಗಿರುತ್ತವೆ; ಸುಗಮ ಸಂಗೀತದ ಮೂಲಕ ಜನಪ್ರಿಯವಾಗಿವೆ.ಸಂಕ್ಷಿಪ್ತತೆ ಮಹಾಕಾವ್ಯಗಳಿಗೆ ವಿರುದ್ಧವಾಗಿ, ಇವು ಚಿಕ್ಕದಾಗಿ ಮತ್ತು ತೀವ್ರತೆಯಿಂದ ಕೂಡಿರುತ್ತವೆ.ವಿಷಯ: ಪ್ರೀತಿ, ಪ್ರಕೃತಿ, ಭಕ್ತಿ, ಸಾವು ಮತ್ತು ತತ್ವಜ್ಞಾನ ಪ್ರಮುಖ ವಿಷಯಗಳು ಮತ್ತು ಬಯಲಾಟ ಕರ್ನಾಟಕ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯದಿಂದ ಕೂಡಿದ ಗಂಡುಕಲೆ. ಇದರಲ್ಲಿ ಸಾಹಿತ್ಯ ಸಂಗೀತ, ನೃತ್ಯಗಳು ಮುಪ್ಪುರಿಗೊಂಡಿವೆ. ಪ್ರಾಚೀನ ಕಾಲದಿಂದಲೂ ಗ್ರಾಮೀಣರಿಗೆ ಮನರಂಜನೆ ಒದಗಿಸಿಕೊಂಡು ಬರುತ್ತಿರುವ ಹವ್ಯಾಸಿ ಕಲೆ ಬಯಲಾಟ. ಸಾಮಾನ್ಯವಾಗಿ ಸುಗ್ಗಿ ಕೆಲಸ ಮುಗಿದ ಮೇಲೆ 'ಬಯಲಾಟ'ಗಳ ಸುಗ್ಗಿ ಆರಂಭವಾಗುತ್ತದೆ. ಇದಕ್ಕೆ ಕಾರಣ ಕೆಲಸದ ಬಿಡುವು. ಬಯಲು ನಾಟಕದ ಪ್ರದರ್ಶನಕ್ಕೆ ಮುನ್ನ ಬಹಳ ಪರಿಶ್ರಮ ಬೇಕಾಗುತ್ತದೆ. ಬಯಲಾಟದ ಹುಚ್ಚು ಇರುವವರೆಲ್ಲ ಒಂದು ಕಡೆ ಸೇರಿ ತಾವು ಕಲಿಯಬೇಕೆಂದಿರುವ ಪ್ರಸಂಗವನ್ನು ಆಯ್ಕೆ ಮಾಡುತ್ತಾರೆ. ಪ್ರಸಂಗದ ಪಾತ್ರಗಳಿಗೆ ಆಯ್ಕೆಯಾದ ಕಲಾವಿದರು ಅನೇಕ ತಿಂಗಳ ಕಾಲ ಪ್ರತಿದಿನ ರಾತ್ರಿ ಸೇರಿ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಕಲಿಯುತ್ತಾರೆ. ಬಯಲಾಟ ಕಲಿಸುವವನಿಗೆ 'ಭಾಗವತ' ಎಂದು ಕರೆಯುತ್ತಾರೆ.

ಇಂದಿನ ಮಕ್ಕಳಿಗೆ ಪರಿಚಯಿಸುವ ಕೆಲಸ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟಿನ ಕಾರ್ಯದರ್ಶಿ ಕೆ.ಹೇಮೇಶ್ವರ ಮಾಡುತ್ತಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಬಲಾ ವಾದಕರಾದ ಶ್ರೀ.ಚಾಗೆವರಬಸಪ್ಪ ಅಧ್ಯಕ್ಷ ನುಡಿಯನ್ನು ಪ್ರಸ್ತಾಪಿಸಿದರು.

 

ಸಾಂಸ್ಕೃತಿಕ ಕಾರ್ಯಕ್ರಮಗಳು:- ಭಾವಗೀತೆಗಳು:- ಶ್ರೀ ಹೆಚ್.ಲೋಕರಾಜ್ ಮತ್ತು ತಂಡದವರು ನೇರವೇರಿಸಿದರು. ಬಯಲಾಟ ಪ್ರದರ್ಶನ:-ಕೆ.ಪಂಪಾಪತಿ ಪಾತ್ರ ಕೃತ್ಯವೀರ, ಕಾರ್ತ್ಯವೀರಾರ್ಜುನ ಎಚ್ ಆರ್ ಪ್ರವೀಣ್ ಕುಮಾರ್ ಮತ್ತು ರೇಣುಕಾ ರಾಜ ಬಿ.ಕೆ. ಸಿದ್ದಪ್ಪ ಧರ್ಮಪ್ಪ ತಂಡದವರು ಪ್ರದರ್ಶನ ನೀಡಿದರು.

 

ಕಾರ್ಯಕ್ರಮದಲ್ಲಿ:- ಶಾಲಾ ಶಿಕ್ಷಕರಾದ  ಪ್ಯಾರಿಜಾನ್,

. ಮಂಜುನಾಥ, . ಕಂಠ್ಯಪ್ಪ,ಶಾರದಾ, ನಾಗವೇಣಿ,ಅನಿತಾ , ಬಯಲಾಟ ಕಲಾವಿದರು ಬಿ.ಸಿದ್ದಪ್ಪ ಧರ್ಮಪ್ಪ ಊರಿನ ಮುಖಂಡರು  ಗಿರಿಯಪ್ಪ,ಸಿದ್ದಾಪುರ ವೆಂಕಟೇಶ್,ಮಲ್ಲಯ್ಯ, ಹೆಚ್ ಹುಲಗಪ್ಪ,ಆಂಜೀನಪ್ಪ,ಹನುಮಂತಪ್ಪ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ  ಸುಮಲತಾ ತಿಪ್ಪಯ್ಯ ,ನಿಜಾಮುದ್ದೀನ್ ಔಲಿಯ ಹೋನ್ನಳ್ಳಿ,ಶಿಕ್ಷಕರ,ರಾಮು  ಗೊಲ್ಲ ನಾಗೇನಹಳ್ಳಿ

 ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟಿನ ಅಧ್ಯಕ್ಷ ಗುರುಮಹಾಂತೇಶ. ಬಿ ಹಾಗೂ ಕಾರ್ಯದರ್ಶಿ ಕುರುಬರ ಹೇಮೇಶ್ವರ, ಪುರುಷೋತ್ತಮ ಡಿ.ನಿರೂಪಣೆ   ಕಂಠ್ಯಪ್ಪ, ಸ್ವಾಗತ ಪುರುಷೋತ್ತಮ ಡಿ, ಕು.ನಾಗವೇಣಿ ವಂದಿಸಿದರು.




Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ