ಬೆಳಗಾವಿ;
ಬೆಳಗಾವಿ ವಕೀಲರ ಸಂಘದ ೨೦೨೬-೨೮ ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿ.ಜೆ. ಗಂಗಾಯಿ ಯವರು ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ.
ಸಂಘದ ಮುಂದಿನ ಎರಡು ವಷ೯ಗಳ ಅವಧಿಯ ಪದಾಧಿಕಾರಿಗಳ ಆಯ್ಕೆಗಾಗಿ ಶನಿವಾರ ಮತದಾನ ಪ್ರಕ್ರಿಯೆ ನಡೆಯಿತು. ತಡರಾತ್ರಿವರೆಗೆ ನಡೆದ ಮತ ಎಣಿಕೆ ಬಳಿಕ ಅಧಿಕೃತವಾಗಿ ಫಲಿತಾಂಶ ಘೋಷಣೆ ಮಾಡಲಾಯಿತು. ಎರಡು ಉಪಾಧ್ಯಕ್ಷ ಸ್ಥಾನಕ್ಕೆ ಪವನ ಪಾಟೀಲ, ಜಯಶ್ರೀ ಮಂಡ್ರೋಳಿ ಆಯ್ಕೆಯಾದರು. ಅದೇ ರೀತಿ ಪ್ರಧಾನ ಕಾಯ೯ದಶಿ೯ಯಾಗಿ ಸಚಿನ ಶಿವಣ್ಣವರ, ಜಂಟಿ ಕಾಯ೯ದಶಿ೯ಯಾಗಿ ಪ್ರಶಾಂತ ಪಾಟೀಲ ಹಾಗೂ ಖಜಾಂಚಿಯಾಗಿ ನಿಮ೯ಲಾ ಪಾಟೀಲ ಅವರು ತಮ್ಮ ಪ್ರತಿಸ್ಪಧಿ೯ಗಳ ವಿರುದ್ಧ ಹೆಚ್ಚು ಮತಗಳನ್ನು ಪಡೆಯುವ ಮೂಲಕ ವಿಜೇತರಾದರು.
ಆಡಳಿತ ಮಂಡಳಿಯ ಏಳು ಸ್ಥಾನಕ್ಕೆ ಅಭಿಷೇಕ ತಾರಿಹಾಳಕರ್, ವಸಂತ ಅಕ್ಕೆನ್ನವರ, ಹೂಲಿ ಮಲ್ಲಪ್ಪ ಮಾನಿಂಗಪ್ಪ, ಜಿ.ಎ. ಹಿರೇಮಠ, ದೀಪಾ ಮರಡಿ, ಜ್ಯೋತಿ ಪಟ್ಟಣಶೆಟ್ಟಿ ಹಾಗೂ ರಾಜೇಶ್ವರಿ ಪಾಟೀಲ ಆಯ್ಕೆಗೊಂಡಿದ್ದಾರೆ. ಚುನಾವಣಾಧಿಕಾರಿಯಾಗಿ ಜೆ.ಡಿ. ತಿಗಡಿ ಹಾಗೂ ಆರ್.ಎನ್. ಮಿಸಾಳೆ ರವರು ಕಾಯ೯ನಿವ೯ಹಿಸಿದರು. ನೂತನ ಪದಾಧಿಕಾರಿಗಳ ಬೆಂಬಲಿಗರು ನ್ಯಾಯಾಲಯದ ಆವರಣದಲ್ಲಿ ವಿಜಯೋತ್ಸವ ಆಚರಿಸಿದರು.