?ಯರಗಟ್ಟಿ: ಸ್ಥಳೀಯ ಬೀರಪ್ಪನ ಗುಡ್ಡದಲ್ಲಿ ಅತ್ಯಂತ ಸಂಭ್ರಮ ಹಾಗೂ ವಿಜೃಂಭಣೆಯಿಂದ ಜರುಗಿದ ಬೀರಪ್ಪದೇವರ ಜಾತ್ರಾ ಮಹೋತ್ಸವ ಜರುಗಿತ.ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿಶ್ವಾಸ ವೈದ್ಯ ಭಾಗವಹಿಸಿ ಭೀರದೇವರ ದೇವರ ದರ್ಶನ ಪಡೆದು ವಿಶೇ? ಪೂಜೆ ಸಲ್ಲಿಸಿದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕರು ದೇವಸ್ಥಾನ ಅಭಿವೃದ್ಧಿ ಮಂಡಳಿ ದೇವಸ್ಥಾನಕ್ಕೆ ೨೪ ತಾಸು ವಿದ್ಯುತ್ ಸಂಪರ್ಕಕ್ಕೆ ಕಲ್ಪಿಸುವಂತ ಮನವಿ ಮಾಡಿದ್ದರು ಆದರಿಂದ ಇಂದು ದೇವಸ್ಥಾನದ ನಿರಂತರ ವಿದ್ಯುತ್ ಸಂಪರ್ಕಕ್ಕೆ ಕಲ್ಪಿಸಿದ್ದವೆ ಮುಂಬರುವ ದಿನಗಳಲ್ಲಿ ದೇವಸ್ಥಾನದಲ್ಲಿ ಜಾಗವಿದ್ದು ಸುಸಜ್ಜಿತ ಸಮುದಾಯ ಭವನ ನಿರ್ಮಾಣ ಮಾಡಿ ನೀಡಿದರು.ಬೀರಪ್ಪದೇವರ ಕೃಪಾಕಟಾಕ್ಷ ಹಾಗೂ ಆಶೀರ್ವಾದ ಸದಾ ನಮ್ಮ ಸವದತ್ತಿ ಕ್ಷೇತ್ರದ ಸಮಸ್ತ ಜನತೆಯ ಮೇಲಿರಲಿ, ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಹಾಗೂ ಆರೋಗ್ಯ ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದರು.ಈ ವೇಳೆ ಪ. ಪಂ. ಸದಸ್ಯರಾದ ಹನುಮಂತ ಹಾರೂಗೊಪ್ಪ, ನಿಖಿಲ ಪಾಟೀಲ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸವರ, ಮಾಜಿ ತಾ. ಪಂ. ಸದಸ್ಯ ವಿಠ್ಠಲಗೌಡ ದೇವರಡ್ಡಿ, ಪಡೆಪ್ಪ ಅಡಕಲಗುಂಡಿ, ಮಂಜುನಾಥ ತಡಸಲೂರ, ಫಕ್ಕೀರಪ್ಪ ಖಿಲಾರಿ, ಸಿದ್ದಪ್ಪ ಅಡಕಲಗುಂಡಿ, ಅಡಿವೆಪ್ಪ ಪಾಟೀಲ, ಹೇಸ್ಕಾಂ ಎಇಇ ಮಹೇಂದ್ರ ಇಶಾಪೂರಕರ, ಹೇಸ್ಕಾಂ ಅಧಿಕಾರಿ ಆಸೀಪ್ ನದಾಫ, ಮಾಜಿ ತಾ. ಪಂ. ಸದಸ್ಯ ಮಲಿಕಸಾಬ ಬಾಗವಾನ, ಕೆಇಬಿ ಗುತ್ತಿಗೆದಾರ ರಾಜು ಬಿರ್ಜಿ, ಫಕ್ಕೀರಪ್ಪ ನಾಯ್ಕರ, ವೆಂಕಣ್ಣಾ ಕಳ್ಳಿಗುದ್ದಿ, ಈರಣ್ಣಾ ಖಿಲಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.