LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ


ಘಟಪ್ರಭಾ,ಅ,೨೬ : ಸ್ಥಳೀಯ ಮಲ್ಲಾಪೂರ ಪಿ.ಜಿ. ಗ್ರಾಮದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೫ನೇ ಆರಾಧನಾ ಮಹೋತ್ಸವವನ್ನು ಶನಿವಾರ ದಿ. ೨೯ ರಿಂದ ಸೋಮವಾರ ದಿ. ೩೧-೮-೨೦೨೬ ರವರೆಗೆ ವಿಜೃಂಭನೆಯಿಂದ ಜರಗುವುದು. ಶ್ರೀ ೧೦೮ ವಿಶ್ವೇಶತೀರ್ಥ ಶ್ರೀಪಾದಂಗಳವರು ಪೇಜಾವರ ಮಠ ಅವರ ಅಮೃತ ಹಸ್ತದಿಂದ ಪ್ರತಿಷ್ಟಾಪಿಸಲ್ಪಟ್ಟ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ೩೫ನೇಯ ಆರಾಧನಾ ಮಹೋತ್ಸವದ ನಿಮಿತ್ಯ ಶನಿವಾರ ದಿ. ೨೯ ರಂದು ಮುಂಜಾನೆ ೮-೦೦ ಗಂಟೆಗೆ ಅಷ್ಟೋತ್ತರ ನಂತರ ೯-೦೦ ಗಂಟೆಯಿಂದ ೧೧-೦೦ ಗಂಟೆಯವರೆಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಪೂಜೆ, ನೈವೇದ್ಯ ಸಂಜೆ ೬-೦೦ ಗಂಟೆಗೆ ಪಲ್ಲಕ್ಕಿ ಸೇವೆ ಬಳಿಕ ೯-೦೦ ಗಂಟೆಯವರೆಗೆ ಸಂಗೀತ ಸೇವೆ, ಭಜನೆ, ದೀಪಾಲಂಕಾರ, ಅಷ್ಟಾವಧಾನ ಸೇವೆ. ರವಿವಾರ ದಿ. ೩೦ ರಂದು ಮುಂಜಾನೆ ೭-೩೫ ಕ್ಕೆ ಅಷ್ಟೋತ್ತರ ೮-೩೦ ರಿಂದ ೧೧-೦೦ ಗಂಟೆಯವರೆಗೆ ಪಂಚಾಮೃತ ಅಭಿಷೇಕ ಅಲಂಕಾರ, ಮಹಾಪೂಜೆ ಹಾಗೂ ಸರಿಯಾಗಿ ೧೧-೩೦ ಗಂಟೆಯಿಂದ ೧೨-೩೦ ಗಂಟೆಯವರೆಗೆ ರಥೋತ್ಸವ ನಂತರ ಮಹಾನೈವೇದ್ಯ ಮತ್ತು ಮಂಗಳಾರತಿ ಇದರಲ್ಲಿ ಶ್ರೀಫಲ ಇತ್ಯಾದಿ ಕಾರ್ಯಕ್ರಮ ನಂತರ ೨-೦೦ ರಿಂದ ೪-೦೦ ಗಂಟೆಯವರೆಗೆ ಮಹಾಪ್ರಸಾದ. ಸಾಯಂಕಾಲ ೬-೦೦ ಗಂಟೆಯಿಂದ ೮-೦೦ ಗಂಟೆಯವರೆಗೆ ದೀಪೋತ್ಸವ, ಭಜನೆ ಮತ್ತು ಅಷ್ಟಾವಧಾನ ಸೇವೆ ಇತ್ಯಾದಿ. ಶ್ರೀ ಮಠದ ಮಹಿಳಾ ಭಜನಾ ಮಂಡಳಿಯವರಿಂದ ಆರಾಧನಾ ಮಹೋತ್ಸವದ ೩ ದಿನ ಸಾಯಂಕಾಲ ೬-೩೦ ಕ್ಕೆ ತಾರತಮ್ಯ ಪ್ರಕಾರ ಭಜನೆ ಜರಗುವುದು. ಸೋಮವಾರ ದಿ. ೩೧ ರಂದು ಮುಂಜಾನೆ ೭-೩೫ ಗಂಟೆಗೆ ಅಷ್ಟೋತ್ತರ ಬಳಿಕ ೮-೩೦ ಗಂಟೆಯಿಂದ ೧೧-೦೦ ಗಂಟೆಯವರೆಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಪೂಜೆ ನಂತರ ೧೧-೩೦ ರಿಂದ ೧೨-೩೦ ಗಂಟೆಯವರೆಗೆ ಶ್ರೀ ಸತ್ಯನಾರಾಯಣ ಪೂಜೆ, ನೈವೇದ್ಯ ಮತ್ತು ಮಹಾಮಂಗಳಾರತಿ ಸಂಜೆ ೬-೦೦ ಗಂಟೆಗೆ ಪಲ್ಲಕ್ಕಿ ಸೇವೆ, ದೀಪೋತ್ಸವ, ಭಜನೆ ಅಷ್ಟಾವಧಾನ ಸೇವೆ ರಾತ್ರಿ ೯-೦೦ ಗಂಟೆಗೆ ಸಮಾರೋಪ ಸಮಾರಂಭ ಈ ರೀತಿ ಜರಗುವ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಆಗಮಿಸಿ ರಾಯರ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕಮೀಟಿ ಅಧ್ಯಕ್ಷರಾದ ಶ್ರೀಕಾಂತ ಬಾ. ಕುಲಕರ್ಣಿಯವರು ಈ ಮೂಲಕ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್ರನ್ನ ಅಜರಾಮರ: ಮಲ್ಲಿಕಾರ್ಜುನ ಅರಬಿ೧೦೦ ಮೀಟರ್ ಓಟದಲ್ಲಿ ದ್ವಿತೀಯ: ಜಿಲ್ಲಾ ಮಟ್ಟಕ್ಕೆ ಚೇತನ ನ್ಯಾಮಗೌಡಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪ