ಬಾದಾಮಿ., ದೇಶದ ಹೆಮ್ಮೆಯ ಭೂಸೇನೆ ಮದ್ರಾಸ್ ರಿಜಿಮೆಂಟ್ ಕಂಪನಿಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ಗ್ರಾಮಕ್ಕೆ ಬಂದಿದ್ದು ನನಗೆ ಹೆಮ್ಮೆ ತಂದಿದ್ದು ಭಾರತ ತಾಯಿಯ ಸೇವೆ ಮಾಡಿದ್ದೂ ನನಗೆ ಕೀರ್ತಿ ತಂದಿದೆ ಎಂದು ನಿವೃತ್ತ ಸೈನಿಕ ರಮೇಶ ಅಪ್ಪಯ್ಯ ನೀರಲಗಿ ಹೇಳಿದರು..
ಅವರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಬೇಡರ ಬೂದಿಹಾಳ ಗ್ರಾಮಕ್ಕೆ ಆಗಮಿಸಿ ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮರುತೇಶ್ವರ ಯುವಕ ಮಂಡಳಿ ಅಧ್ಯಕ್ಷ ಗಂಗಪ್ಪ ಡೊಂಕನ್ನವರ ಮಾತನಾಡಿ ರಮೇಶ ಅವರು ಅನೇಕ ಕ್ರೀಡೆ, ಸಾಮಾಜಿಕ ಸೇವೆ, ಶಿಕ್ಷಣ ದೇಣಿಗೆ, ಸಲ್ಲಿಸಿ ಇಂದು ನಿವೃತ್ತಿ ಆಗಿ ಗ್ರಾಮಕ್ಕೆ ಆಗಮಿಸುತ್ತಿರುವದು ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಮರುತೇಶ್ವರ ಯುವಕ ಮಂಡಳಿ ಕಾರ್ಯದರ್ಶಿ ಸಂಗಯ್ಯ ಹಿರೇಮಠ,ಖಜಾಂಚಿ ಶಿವಪ್ಪ ಮುಕ್ಕುನವರ, ಎಸ್ ದಿ ಎಂ ಸಿ ಅಧ್ಯಕ್ಷ ಭೀಮಪ್ಪ ಮುಕ್ಕುನವರ, ಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷ ಗುರುದೇವಿ ಕಟಗೇರಿ, ಕಾರ್ಯದರ್ಶಿ ಬಸವ್ವ ನೀರಲಗಿ, ನೀರಲಗಿ ಅವಿಭಕ್ತ ಕುಟುಂಬದ ಸದಸ್ಯರು ಬೇಡರ ಬೂದಿಹಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು. ಬಾದಾಮಿ ನಿಲ್ದಾಣದಿಂದ ಮೆರವಣಿಗೆ ಮೂಲಕ ಚಿಕ್ಕಮುಚ್ಚಳಗುಡ್ಡ ಗ್ರಾಮದ ಮೂಲಕ ಗ್ರಾಮಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು..
