ಹೊಸಪೇಟೆ: ಪ್ರವಾದಿಯಾದ ಹಝರತ್ ಮುಹಮ್ಮದ್ ಮುಸ್ತಫಾ (ಸ) ಅವರ 1501ನೇ ಜನ್ಮದಿನದ ಸ್ಮರಣಾರ್ಥ ಆಚರಿಸಲ್ಪಡುವ ಪವಿತ್ರ ಹಬ್ಬ ಈದ್ ಮಿಲಾದ್-ಉನ್-ನಬಿ ಜಯಂತಿಯನ್ನು ಅತೀ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಗರದ ಐ ಎಸ್ ಆರ್ ರಸ್ತೆಯಲ್ಲಿನ ಇದ್ಗಾ ಮೈದನದಲ್ಲಿ ಸಾವಿರಾರು ಭಕ್ತರು ಪ್ರಾರ್ಥನೆಯಲ್ಲಿ ಭಾಗಿಯಾದರು.ಇಸ್ಲಾಂ ಧಮ೯ದ ಪ್ರಾರ್ಥನಾ ಕಾರ್ಯ ಕ್ರಮ ದಲ್ಲಿ ಶಾಸಕರ ಪುತ್ರ ಹೆಚ್. ಜಿ. ಗುರುದತ್ತ ಭಾಗವಹಿಸಿ ಇಸ್ಲಾಂ ಧರ್ಮದ , ಸಮಸ್ತ ಬಾಂಧವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಸಮಾಜದ ಧರ್ಮಗುರುಗಳು, ಮುಖಂಡರುಗಳು ಹಾಗೂ ಅಪಾರ ಸಂಖ್ಯೆಯ ಬಾಂಧವರು ಉಪಸ್ಥಿತರಿದ್ದರು.