ಗುರ್ಲಾಪುರ್
ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಬರುವ ಸಿಮೆಂಟ್ ಫ್ಯಾಕ್ಟರಿಗಳಿಂದ ಸಾರ್ವಜನಿಕರಿಗೆ ವಿವಿಧ ರೀತಿಯಿಂದ ತೊಂದರೆಯಾಗುತ್ತಿದೆ. ಫ್ಯಾಕ್ಟರಿಯ ಮಾಲೀಕರು ಹಾಗೂ ಎಮ್ ಡಿ ಗಳು ಇತ್ತ ಕಡೆ ಗಮನಹರಿಸಿ ತಮ್ಮ ಫ್ಯಾಕ್ಟರಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಯನ್ನು ತಡೆಗಟ್ಟಬೇಕು ಎಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಲಕ್ಕನ್ ಸವಸುದ್ದಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಜಿಲ್ಲೆಯಲ್ಲಿ ಬರುವ ದಾಲ್ಮಿಯಾ, ರತ್ನಾ, ಕಾಟ್ವಾ, ಜೆಕೆ ಇನ್ನು ಹಲವು ಸಿಮೆಂಟ್ ಫ್ಯಾಕ್ಟರಿಗಳು ಹಾಗೂ ಮೂಡಲಗಿ ತಾಲೂಕಿನಲ್ಲಿ ಬರುವ ಸಿಮೆಂಟ್ ಫ್ಯಾಕ್ಟರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮನುಸಾರ ತಮಗೆ ಬರುವ ಆದಾಯದಲ್ಲಿ ಶೇಕಡ ರಷ್ಟು ಸಿಎಸ್ಆರ್ ಫಂಡ್ ಆದಾಯವನ್ನು ಸಾರ್ವಜನಿಕರ ಮೂಲಸೌಕರ್ಯಕ್ಕೆ ಬಳಸಬೇಕು. ರಸ್ತೆ, ಕುಡಿಯುವ ನೀರು, ಶಾಲಾ ಅಭಿವೃದ್ಧಿ, ಆರೋಗ್ಯ ಸೆಂಟರ್ ಇನ್ನೂ ಹಲವಾರು ಅಭಿವೃದ್ಧಿಗಳು ಆಗಿಲ್ಲ ಎಂದರು.
ಯಾದವಾಡ, ಮೂಡಲಗಿ ರಸ್ತೆಗಳು ಸಿಮೆಂಟ್ ಗಾಡಿಗಳಿಂದ ಹಾಳಾಗಿವೆ. ಧೂಳಿನಿಂದ ಜನರ ಆರೋಗ್ಯ ಹಾಳಾಗುತ್ತಿದೆ. ನಮ್ಮ ಕಲ್ಲನ್ನು ಪುಡಿಮಾಡಿ ಸಿಮೆಂಟ್ ಮಾಡಿ ದೇಶದ ತುಂಬಾ ಮಾರಾಟ ಮಾಡಿ ತಾವೇ ಅಭಿವೃದ್ಧಿಯಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೂಡಲಗಿ ಭಾಗದಲ್ಲಿ ಅಭಿವೃದ್ಧಿ ಮರಿಚಿಕೆಯಾಗುತ್ತಿದೆ ಮುಂದಿನ ದಿನಗಳಲ್ಲಿ ನೀವು ಅಭಿವೃದ್ಧಿ ಮಾಡದಿದ್ದರೆ ರೈತರು ಯುವಕರು ಪ್ರಗತಿಪರ ಚಿಂತಕರು ಸೇರಿ ನಿಮ್ಮ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮೂಡಲಗಿ ತಾಲೂಕುʻ ರೈತ ಸಂಘದ ಅಧ್ಯಕ್ಷ ಹನುಮಂತ್ ಮುಗಳಖೋಡ, ಶಿವಾನಂದ ಮಡಿವಾಳ, ಸುಭಾಷ್ ಲೋಕಣ್ಣವರ ಉಪಸ್ಥಿತರಿದ್ದರು.