ಅಥಣಿ: ಭಾರತದ ಇತಿಹಾಸದಲ್ಲಿ ಅಕ್ಷರಶಃ ಅಳಿಸದ ಗುರುತು ಮೂಡಿಸಿದ ಮಹಾನ್ ವ್ಯಕ್ತಿತ್ವವೆಂದರೆ ಡಾ. ಭೀಮರಾವ್ ಅಂಬೇಡ್ಕರ್. ಅವರು ಕೇವಲ ಸಂವಿಧಾನ ಶಿಲ್ಪಿ ಮಾತ್ರವಲ್ಲ, ಸಮಾನತೆ, ನ್ಯಾಯ ಮತ್ತು ಮಾನವ ಹಕ್ಕುಗಳ ಹೋರಾಟಗಾರರಾಗಿದ್ದರು. ಅವರ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿ ತೋರಿಸುತ್ತಿವೆ ಎಂದು ಶಾಸಕ ಲಕ್ಷö್ಮಣ ಸವದಿ ಹೇಳಿದರು
ಅಥಣಿ ಪಟ್ಟಣದ ತೋಟಗಾರಿಕೆ ಆವರಣದಲ್ಲಿ ತಾಲೂಕು ಆಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಗೂ ಪುರಸಭೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಡಾ. ಬಾಬಾಸಾಹೇಬ ಅಂಬೇಡಕರ ಅವರ ೧೩೫ ಜಯಂತೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಶಾಸಕ ಲಕ್ಷö್ಮಣ ಸವದಿ ಹಾಗೂ ಗಣ್ಯರು ಚಾಲನೆ ನೀಡಿದರು
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಲಕ್ಷö್ಮಣ ಸವದಿ ಅವರು ಡಾ. ಅಂಬೇಡ್ಕರ್ ಅವರು ಶ್ರೇಷ್ಠ ನಾಯಕರು. ಅವರು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳು ಸಿಗಬೇಕು ಎಂಬ ಉದ್ದೇಶದಿಂದ ಜೀವನಪೂರ್ತಿ ಹೋರಾಡಿದ ಮಹಾನ್ ವ್ಯಕ್ತಿ. ಅವರ ಸಂವಿಧಾನ ನಮ್ಮ ದೇಶದ ಬಲವಾದ ಆಧಾರಸ್ತಂಭವಾಗಿದೆ. ಅವರ ಕೊಟ್ಟಿರುವ ಸಂವಿಧಾನದಿAದಲೆ ನಮ್ಮಂತಹ ಅನೇಕರು ವಿಧಾಸಭೆ ಮೆಟ್ಟಿಲು ಏರಲು ಸಾದ್ಯವಾಗಿದೆ. ಡಾ. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ನೀಡಿದ ಮಹತ್ವ ಅಪಾರ. ಶಿಕ್ಷಣವೇ ಶಕ್ತಿ ಎಂಬ ಅವರ ಸಂದೇಶ ಇಂದಿಗೂ ಯುವಜನತೆಗೆ ಪ್ರೇರಣೆಯಾಗುತ್ತಿದೆ. ಸಮಾಜದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅವರು ಮಾಡಿದ ಕೊಡುಗೆ ಅನನ್ಯ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಟ್ಟು ಒಳ್ಳೆಯ ನಾಗರಿಕರನ್ನಾಗಿ ಮಾಡಿದರೆ ಮಾತ್ರ ಡಾ. ಬಾಬಾಸಾಹೇಬ ಅಂಬೇಡಕರ ಅವರ ಜಯಂತಿ ಆಚರಣೆ ಮಾಡಿದ್ದು ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಹೇಳಿದರು
ಉಪನ್ಯಾಸಕ ಸುಭಾಸ ನಾಟಿಕರ ಮಾತನಾಡಿ ನಾವು ಡಾ. ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ. ಅವರು ಬೋಧಿಸಿದ ಮೌಲ್ಯಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅನುಸರಿಸುವುದು ನಮ್ಮ ಕರ್ತವ್ಯ. ಇಂದು ಡಾ. ಅಂಬೇಡ್ಕರ್ ಅವರ ಚಿಂತನೆಗಳು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಬೆಳಕು ಚೆಲ್ಲುತ್ತಿವೆ. ಅವರ ಆದರ್ಶಗಳನ್ನು ಮುಂದುವರಿಸುವ ಮೂಲಕ ನಾವು ಬಲಿಷ್ಠ ಮತ್ತು ಸಮಾನತೆಯ ಭಾರತವನ್ನು ನಿರ್ಮಿಸಲು ಸಾದ್ಯ ಎಂದು ಹೇಳಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳೆ, ಉಪಾಧ್ಯಕ್ಷ ಭುವಣೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ, ಸದಸ್ಯರಾದ ಸಂತೋಷ ಸಾವಡಕರ, ರಾಜೂ ಗುಡೊಡಗಿ, ಪ್ರಮೋದ ಬಿಳ್ಳೂರ, ರಾವಸಾಬ ಐಹೋಳೆ, ಅಧಿಕಾರಿಗಳಾದ ಸಿದ್ರಾಯ್ ಭೋಸಗಿ, ಪ್ರಶಾಂತ ಮುನ್ನೋಳ್ಳಿ, ಶಿವಾನಂದ ಕಲ್ಲಾಪೂರ, ಅಶೋಕ ಗುಡಿಮನಿ, ಪರಶುರಾಮ ಪತ್ತಾರ, ವೇಂಕಟೇಶ ಕುಲಕರ್ಣಿ, ಎಮ್ ಆರ್ ಮುಂಜೆ, ಮಲ್ಲಿಕಾರ್ಜುನ ಮಗದುಮ್, ಪ್ರವೀಣ ಹುಣಸಿಕಟ್ಟಿ, ಮುಂಜುನಾಥ ಸೌಂದಲಗಿಕರ ಸೇರಿದಂತೆ ದಲಿತ ಸಮುದಾಯದ ಎಲ್ಲ ಮುಖಂಡರು ಉಪಸ್ಥಿತರಿದ್ದರು
ಡಾ. ಭೀಮರಾವ್ ಅಂಬೇಡ್ಕರ್ ಶ್ರೇಷ್ಠ ನಾಯಕರು: ಲಕ್ಷ್ಮಣ ಸವದಿ ಅಭಿಮತ


