ಬಿಜೆಪಿ ಹಿರಿಯ ಮುಖಂಡ, ಪತ್ರಕರ್ತ ಬಸವರಾಜ ಹುದ್ದಾರ ಶಿವಾಧೀನ

Ravi Talawar
ಬಿಜೆಪಿ ಹಿರಿಯ ಮುಖಂಡ, ಪತ್ರಕರ್ತ ಬಸವರಾಜ ಹುದ್ದಾರ ಶಿವಾಧೀನ
WhatsApp Group Join Now
Telegram Group Join Now

ಘಟಪ್ರಭಾ: ಪಟ್ಟಣದ ವೀರಶೈವ ಲಿಂಗಾಯತ ಮುಖಂಡರು, ಬಿಜೆಪಿ ಪಕ್ಷದ ಹಿರಿಯ ಮುಖಂಡರು, ಜಗಜ್ಜನನಿ ವಾರಪತ್ರಿಕೆಯ ಸಂಪಾದಕರು ಆದ ಬಸವರಾಜ ದುಂಡಪ್ಪ. ಹುದ್ದಾರ ಇವರು ತಮ್ಮ 78 ನೇ ವಯಸಿನಲ್ಲಿ ಸೋಮವಾರ ದಿ. 05-08-2024 ರಂದು ಬೆಳಿಗ್ಗೆ ನಿಧನರಾದರು.

ಮೃತರ ಅಂತ್ಯಕ್ರಿಯೆಯು ದಿ. 5 ರಂದು ಅವರ ತೋಟದಲ್ಲಿ ಮದ್ಯಾನ್ಹ 12 ಘಂಟೆಗೆ ನೆರವೇರಿತು. ಮೃತರು ಪತ್ನಿ, 3 ಜನ ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಸಂತಾಪ! ಬಿಜೆಪಿ ಹಿರಿಯ ಮುಖಂಡ, ಪತ್ರಕರ್ತ ಬಸವರಾಜ ಹುದ್ದಾರ ನಿಧನಕ್ಕೆ ಘಟಪ್ರಭಾ ಗುಬ್ಬಲಗುಡ್ಡ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು,ಘಟಪ್ರಭಾ ಹೊಸಮಠದ ಪೂಜ್ಯ ವೀರೂಪಾಕ್ಷ ದೇವರು, ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ, ಸಂಸದ ಜಗದೀಶ ಶೆಟ್ಟರ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಅಶೋಕ ಪೂಜೇರಿ, ಅಂಬಿರಾವ ಪಾಟೀಲ, ಗೋಕಾಕ ತಾಲೂಕಾ ಬಿಜೆಪಿ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಮುಖಂಡರಾದ ರಾಮಣ್ಣ ಹುಕ್ಕೇರಿ, ಎಮ್ ಜಿ. ಮುಚಳಂಬಿ, ಡಿ ಎಮ್. ದಳವಾಯಿ, ಜೇಜಿಕೋ ಅಧ್ಯಕ್ಷ ಅಪ್ಪಯ್ಯಪ್ಪ ಬಡಕುಂದ್ರಿ , ಮಲ್ಲಾಪುರ ಅರ್ಬನ್ ಬ್ಯಾಂಕ ಅಧ್ಯಕ್ಷ ರಮೇಶ ತುಕ್ಕಾನಟ್ಟಿ , ವಕೀಲರಾದ ಗಂಗಾಧರ ಬಡಕುಂದ್ರಿ, ಪಿಕೆಪಿಎಸ್ ಅಧ್ಯಕ್ಷ ಮುತ್ತಣ್ಣ ಹತ್ತರವಾಟ , ಶಿವಪುತ್ರ ಕೂಗನೂರ, ಸುರೇಶ ಕಾಡದವರ, ಮಾರುತಿ ವಿಜಯನಗರ,ಅರವಿಂದ ಬಡಕುಂದ್ರಿ, ಚನ್ನಬಸ್ಸು ಅಂಗಡಿ,ಈಶ್ವರ ಮಟಗಾರ,ಪುಟ್ಟು ಖಾನಾಪುರೆ, ಶ್ರೀಕಾಂತ ಮಹಜನ,ಸೇರಿದಂತೆ ಅನೇಕ ಮುಖಂಡರು, ಘಟಪ್ರಭಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಅಗಲಿದ ನಾಯಕನಿಗೆ ಸಂತಾಪ ಸೂಚಿಸಿ ಮೃತರ ಕುಟುಂಬದ ದುಃಖ ಮರೆವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

WhatsApp Group Join Now
Telegram Group Join Now
Share This Article