ಬೀಳಗಿ - ಪಟ್ಟಣದ ಪ್ರತಿಷ್ಠಿತ ಕ್ರಷ್ಣಾ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿ ನಿಯಮಿತದ 24 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ದಿ 25 ರಂದು ಮಂಗಳವಾರ ಮುಂಜಾನೆ 10.30 ಗಂಟೆಗೆ ಪಟ್ಟಣದ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಅಶೋಕ್ ಚೂರಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2002 ರಲ್ಲಿ ಡಂಬಳ ಗದಗದ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ ತೋಂಟದ ಸಿದ್ದರಾಮ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮಭೂಷಣ ಡಾ ವಿರೇಂದ್ರ ಹೆಗ್ಗಡೆಯವರ ಅಮ್ರತ ಹಸ್ತದಿಂದ ಉದ್ಘಾಟಿಸಲ್ಪಟ್ಟ ನಮ್ಮ ಕ್ರಷ್ಣಾ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿ ಇಂದಿಗೆ ತನ್ನ 24ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಮಾಡುತ್ತಿದ್ದು,ಗ್ರಾಹಕರ ಮತ್ತು ಷೇರುದಾರರು ಮತ್ತು ಸಂಘದ ನಿರ್ದೇಶಕ ಮಂಡಳಿಯವರು ,ಸಂಘದ ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಇಂದು ಹೆಮ್ಮೆಯ ಸಂಸ್ಥೆಯಾಗಿದ್ದು ಜಿಲ್ಲೆಯ ಲೋಕಾಪುರ ಪಟ್ಟಣ, ವಿಜಯಪುರ ಜಿಲ್ಲೆಯ ಕೋಲಾರ ಪಟ್ಟಣದಲ್ಲಿ ತನ್ನ ಎರಡು ಶಾಖೆಗಳನ್ನು ಆರಂಭಿಸಿ ರೈತರು, ವ್ಯಾಪಾರಸ್ಥರು ಮತ್ತು ಬಡ ಜನರಿಗೆ ಆರ್ಥಿಕ ನೆರವು ನೀಡುತ್ತಿದೆ, ಪ್ರಸಕ್ತ 2025-26 ನೇ ಸಾಲಿನಲ್ಲಿ ಸಂಘವು 73.25 ಲಕ್ಷ ರೂ ಲಾಭಗಳಿಸಿದೆ ಎಂದ ಅವರು ದಿ 25 ರಂದು ನಡೆಯುವ ವಾರ್ಷಿಕ ಸರ್ವ ಸಾಧಾರಣ ಸಭೆಯ ಸಾನಿಧ್ಯವನ್ನು ಕಲ್ಮಠದ ಗುರುಪಾದ ಶಿವಾಚಾರ್ಯರು ವಹಿಸಲಿದ್ದು,ಸಂಘದ ಉಪಾಧ್ಯಕ್ಷರು, ನಿರ್ದೇಶಕ ಮಂಡಳಿ ಸದಸ್ಯರು, ಭಾಗವಹಿಸಲಿದ್ದಾರೆ, ಸಮಾರಂಭದಲ್ಲಿ ಉತ್ತಮ ಗ್ರಾಹಕರನ್ನು,ಸಂಘದ ಹಿತೈಸಿಗಳನ್ನು ಗೌರವಿಸುವ ಕಾರ್ಯವನ್ನು ಮಾಡಲಾಗುವುದು ಕಾರಣ ಸಂಘದ ಸರ್ವ ಸದಸ್ಯರು ಸಭೆಗೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.